ಕರೀಂಗಂಜ್: ಅಸ್ಸಾಂನಲ್ಲಿ ಕುಟುಂಬದಿಂದ ತಪ್ಪಿ ಹೋಗಿದ್ದ ಹಾಸನ ಮೂಲದ ವೃದ್ಧೆಯನ್ನು ಬಿಎಸ್ಎಫ್ ಯೋಧರು ಮತ್ತೆ ಕುಟುಂಬ ಸದಸ್ಯರೊಂದಿಗೆ ಸೇರಿಸಿದ್ದಾರೆ.
ಅ.18ರಂದು ಬಾಂಗ್ಲಾ ಗಡಿ ಭಾಗದಲ್ಲಿನ ಅಸ್ಸಾಂನ ಕರೀಂಗಂಜ್ ಪ್ರದೇಶದಲ್ಲಿ ಕುಟುಂಬ ಸದಸ್ಯರಿಂದ ತಪ್ಪಿ ಹೋಗಿದ್ದ ವೃದ್ಧೆ ಬಿಎಸ್ಎಫ್ ಯೋಧರ ಸಂಪರ್ಕಕ್ಕೆ ಬಂದಿದ್ದಾಳೆ. ಕನ್ನಡ ಭಾಷೆ ಮಾತ್ರ ಮಾತನಾಡುತ್ತಿದ್ದ ವೃದ್ಧೆಯನ್ನು, ಕನ್ನಡಿಗ ಯೋಧನಿಗೆ ಪರಿಚಯಿಸಲಾಗಿದೆ. ಈ ವೇಳೆ ವಿಳಾಸ ತಿಳಿಸಿದ ವೃದ್ಧೆ, ಹಾಸನ ಮೂಲದವಳು ಎಂದು ಗೊತ್ತಾಗಿದೆ.
ವೃದ್ಧೆಯ ಮಾಹಿತಿ ಆಧಾರದ ಮೇಲೆ, ಆಕೆಯ ಮಗಳನ್ನು ಕರೆಸಿದ್ದಾರೆ. 4 ದಿನಗಳ ಕಾಲ ಬಿಎಸ್ಎಫ್ ಯೋಧರ ಆರೈಕೆಯಲ್ಲಿದ್ದ ವೃದ್ಧೆಯನ್ನು ಸುರಕ್ಷಿತವಾಗಿ ಬೆಂಗಳೂರಿಗೆ ಕಳುಹಿಸಲಾಗಿದೆ. ಈ ಮಾಹಿತಿಯನ್ನು ಬಿಎಸ್ಎಫ್ ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಶೇರ್ ಮಾಡಿದೆ.
Comments are closed.