ರಾಷ್ಟ್ರೀಯ

ವಿಶಾಖಪಟ್ಟಣ ವಿಮಾನ ನಿಲ್ದಾಣದಲ್ಲಿ ವೈ.ಎಸ್‌. ಜಗನ್‌ ಮೋಹನ್‌ ರೆಡ್ಡಿಗೆ ಚಾಕು ಇರಿದ ದುಷ್ಕರ್ಮಿ

Pinterest LinkedIn Tumblr

ವಿಶಾಖಪಟ್ಟಣ: ವಿಶಾಖಪಟ್ಟಣ ವಿಮಾನ ನಿಲ್ದಾಣದಲ್ಲಿ ವೈಎಸ್‌ಆರ್‌ ಕಾಂಗ್ರೆಸ್‌ ಪಕ್ಷದ ನಾಯಕ ವೈ.ಎಸ್‌.ಜಗನ್‌ ಮೋಹನ್‌ ರೆಡ್ಡಿ ಅವರಿಗೆ ದುಷ್ಕರ್ಮಿಯೊಬ್ಬ ಚಾಕುವಿನಿಂದ ಇರಿದ ಘಟನೆ ನಡೆದಿದೆ.

ಸೆಲ್ಫಿ ತೆಗೆದುಕೊಳ್ಳುವ ನೆಪದಲ್ಲಿ ಬಂದ ಯುವಕ ಜಗನ್ ಜೊತೆ ಮಾತನಾಡಿ, ಒಂದು ವೇಳೆ ಮುಂದಿನ ವಿದಾನಸಭೆ ಚುನಾವಣೆಯಲ್ಲಿ 168 ಸೀಟು ಗೆದ್ದರೆ ಏನು ಮಾಡುತ್ತೀರಿ ಎಂದು ಕೇಳಿದ್ದಾನೆ, ನಂತರ ಸೆಲ್ಫಿ ತೆಗೆದುಕೊಂಡ ಬಳಿಕ ಕೋಳಿ ಜಗಳದ ವೇಳೆ ಬಳಸುವ ಚಾಕುವಿನಿಂದ ಜಗನ್​ ಎಡ ಭುಜಕ್ಕೆ ಇರಿದ್ದಾನೆ

ಜಗನ್ ಭೂಜಕ್ಕೆ ಸಣ್ಣ ಪ್ರಮಾಣ ಗಾಯವಾಗಿದ್ದು ಅವರನ್ನು ಪ್ರಾಥಮಿಕ ಚಿಕಿತ್ಸೆ ನೀಡಲಾಗಿದೆ. ಜಗನ್​ ಜತೆಗೇ ಇದ್ದ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು ಆತನನ್ನು ವಿಚಾರಣೆಗೊಳಪಡಿಸಿದ್ದಾರೆ.

ವಿಮಾನ ನಿಲ್ದಾಣದೊಳಗೆ ಒಂದು ಸಣ್ಣ ನೈಲ್ ಕಟ್ಟರ್ ಕೂಡ ತೆಗೆದುಕೊಂಡು ಹೋಗಲು ಬಿಡುವುದಿಲ್ಲ, ಹೀಗಿರುವಾಗ ಯುವಕನ ಬಳಿ ಅಷ್ಟು ಉದ್ದದ ಚಾಕು ಹೇಗೆ ಎಂದು ವೈಎಸ್ಆರ್ ಸಿಪಿ ಮುಖಂರು ಪ್ರಶ್ನಿಸಿದ್ದಾರೆ.

Comments are closed.