ರಾಷ್ಟ್ರೀಯ

ಬಂಡಾಯ ಕಾಂಗ್ರೆಸ್ ಶಾಸಕನ ಮಗಳು ಆತ್ಮಹತ್ಯೆ

Pinterest LinkedIn Tumblr


ರಾಜಸ್ಥಾನ: ಮಧ್ಯಪ್ರದೇಶದ ಬಂಡಾಯ ಕಾಂಗ್ರೆಸ್ ಅಭ್ಯರ್ಥಿ ಸುರೇಶ್ ಧಾಕಾಡ್ ಪುತ್ರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಶುಕ್ರವಾರ ರಾಜಸ್ಥಾನದ ಬರಾನ್ ಜಿಲ್ಲೆಯಲ್ಲಿ ನಡೆದಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

24 ವರ್ಷದ ಜ್ಯೋತಿ ಭಾಖೇಡಾ ಗ್ರಾಮದಲ್ಲಿರುವ ಪತಿಯ ಮನೆಯಲ್ಲಿ ನೇಣಿಗೆ ಶರಣಾಗಿರುವುದಾಗಿ ಕೇಲ್ವಾಡಾ ಪೊಲೀಸ್ ಠಾಣಾಧಿಕಾರಿ ನಂದ ಸಿಂಗ್ ತಿಳಿಸಿದ್ದಾರೆ. ಮೇಲ್ನೋಟಕ್ಕೆ ಇದೊಂದು ಆತ್ಮಹತ್ಯೆ ಪ್ರಕರಣ ಎಂದು ಕಂಡು ಬಂದಿದೆ. ಆತ್ಮಹತ್ಯೆಗೆ ಕಾರಣ ಏನೆಂಬುದು ಇನ್ನಷ್ಟೇ ತಿಳಿದು ಬರಬೇಕಾಗಿದೆ ಎಂದು ವರದಿ ತಿಳಿಸಿದೆ.

ಮರಣೋತ್ತರ ಪರೀಕ್ಷೆ ನಡೆಸಿದ ನಂತರ ತನಿಖೆ ನಡೆಸಲಾಗುವುದು. ಮಹಿಳೆಯ ತಂದೆ ಸುರೇಶ್ ಢಾಕಾಡ್ ಮಧ್ಯಪ್ರದೇಶದ ಪೋಹಾರಿ ಕ್ಷೇತ್ರದ ಕಾಂಗ್ರೆಸ್ ಶಾಸಕರಾಗಿದ್ದು, ಇತ್ತೀಚೆಗಷ್ಟೇ ರಾಜೀನಾಮೆ ನೀಡಿ ಬಿಜೆಪಿಗೆ ಸೇರ್ಪಡೆಗೊಂಡಿದ್ದರು.

ಶಾಸಕರ ಪುತ್ರಿ ಜ್ಯೋತಿ ಅವರನ್ನು ಡಾ.ಜೈ ಸಿಂಗ್ ಮೆಹ್ತಾ ಜತೆ ವಿವಾಹ ಮಾಡಿಕೊಡಲಾಗಿತ್ತು. ಪತಿ ರಾಜಸ್ಥಾನದ ಶಾಹಬಾದ್ ನ ಸರ್ಕಾರಿ ಆರೋಗ್ಯ ಇಲಾಖೆಯ ಮೆಡಿಕಲ್ ಆಫೀಸರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಜ್ಯೋತಿ ಪತಿ ಹಾಗೂ ಎರಡು ವರ್ಷದ ಮಗಳು, ತಂದೆ, ತಾಯಿಯನ್ನು ಅಗಲಿದ್ದಾರೆ.

Comments are closed.