ಕರಾವಳಿ

ಟೋಕನ್ ಕೊಟ್ಟ ವಾಹನಗಳಿಗೆ 200ರೂ ಪೆಟ್ರೋಲ್ ಉಚಿತ: ಪ್ರಕರಣ ದಾಖಲು!

Pinterest LinkedIn Tumblr

ಉಡುಪಿ: ಉಡುಪಿಯಲ್ಲಿ ಎ. 22ರಂದು ನಡೇದ ಕಾಂಗ್ರೆಸ್ ಸಮಾವೇಶಕ್ಕೆ ತೆರಳಲು ಉಚಿತ ಪೆಟ್ರೋಲ್ ನೀಡಿದ ಬಗ್ಗೆ ದೂರು ದಾಖಲಾಗಿದೆ.

ಉಡುಪಿ ವಿಧಾನ ಸಭಾ ಕ್ಷೇತ್ರ ದಲ್ಲಿ ಪ್ಲೇಯಿಂಗ್ ಸ್ಕ್ವಾಡ್ ಅಧಿಕಾರಿಯಾಗಿ ಜೆ. ಸುದೀರ್ ಕುಮಾರ ಅವರು ಕರ್ತವ್ಯದಲ್ಲಿರುವಾಗ ಕೊಡವೂರು ಗ್ರಾಮದ ಮಲ್ಪೆ ಕೊರನೆಟ್ ಬಳಿ ಇರುವ ಇಂಡಿಯನ್ ಆಯಿಲ್ ಪೆಟ್ರೋಲ್ ಬಂಕ್ ಮತ್ತು ಮಲ್ಪೆ ಉಡುಪಿ ರಸ್ತೆಯಲ್ಲಿರುವ ಭಾವನಾ ಎಂಟರಪ್ರೈಸಸ್ಸ್ ಹೆಚ್ .ಪಿ ಪೆಟ್ರೋಲ್ ಬಂಕ್ ಗಳಲ್ಲಿ ಟೋಕನ್ ಪಡೆದು ಪೆಟ್ರೋಲ್ ನೀಡುತ್ತಿರುವ ಬಗ್ಗೆ ಕಂಟ್ರೋಲ್ ರೂಂನಿಂದ ಮಾಹಿತಿ ಬಂದಿದ್ದು ಅವರು ಆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದಾಗ ಪೆಟ್ರೋಲ್ ಬಂಕನಲ್ಲಿ ಟೋಕನ್ ನೀಡುತ್ತಿರುವವರಿಗೆ 200ರೂ. ಪೆಟ್ರೋಲ್ ನೀಡುತ್ತಿದ್ದು ಇದನ್ನು ನೀಡುತ್ತಿರುವುದು ಜಿಲ್ಲಾ ಉಸ್ತುವಾರಿ ಸಚಿವರ ಪಕ್ಷದವರೆಂದು ಸಂಬಂದಪಟ್ಟವರಿಂದ ತಿಳಿದಿದೆ ಎನ್ನಲಾಗಿದೆ.

ಪೆಟ್ರೋಲ್ ಹಂಚುವ ಬಗ್ಗೆ ಚುನಾವಣಾಧಿಕಾರಿಯರಿಂದ ಯಾವುದೇ ಅನುಮತಿ ಪಡೆಯದ ಬಗ್ಗೆ ಚುನಾವಣಾ ಅಧಿಕಾರಿಯವರಿಗೆ ವರದಿ ನೀಡಿ ಚುನಾವಣಾಧಿಕಾರಿಯವರ ಆದೇಶದಂತೆ ದೂರು ನೀಡಲಾಗಿದೆ.

Comments are closed.