ಕರಾವಳಿ

ಮಂಗಳೂರು ದಕ್ಷಿಣ ಬಿ ಜೆ ಪಿ ಅಭ್ಯರ್ಥಿ ವೇದವ್ಯಾಸ್ ಪರ ಸುಳ್ಯ ಶಾಸಕ ಅಂಗಾರ ಮತ ಪ್ರಚಾರ

Pinterest LinkedIn Tumblr

ಮಂಗಳೂರು : ಮಂಗಳೂರು ನಗರ ದಕ್ಷಿಣ ವಿಧಾನಸಭಾ ಕ್ಷೇತ್ರದ ಭಾರತೀಯ ಜನತಾ ಪಾರ್ಟಿ ಅಭ್ಯರ್ಥಿಯಾಗಿರುವ ಡಿ.ವೇದವ್ಯಾಸ್ ಕಾಮತ್ ಪರ ಸುಳ್ಯ ಶಾಸಕ ಅಂಗಾರ ಶನಿವಾರ ಅತ್ತಾವರ ವಾರ್ಡಿನಲ್ಲಿ ಮತ ಪ್ರಚಾರ ನಡೆಸಿದರು.

ಈ ಸಂದರ್ಭದಲ್ಲಿ ಶಶಿರಾಜ್ ಶೆಟ್ಟಿ ಕೊಳಂಬೆ , ಅತ್ತಾವರ ಜೊತೆ ಕಾರ್ಯದರ್ಶಿ ಅಜಯ್ , ಉದ್ಯಮಿ ರತೀಂದ್ರನಾಥ್ ಉಪಸ್ಥಿತರಿದ್ದರು

ಕೋರ್ಟ್ ವಾರ್ಡಿನಲ್ಲಿ ಮತ ಪ್ರಚಾರ :

ಮಂಗಳೂರು ನಗರ ದಕ್ಷಿಣ ವಿಧಾನಸಭಾ ಕ್ಷೇತ್ರದ ಭಾರತೀಯ ಜನತಾ ಪಾರ್ಟಿ ಅಭ್ಯರ್ಥಿಯಾಗಿರುವ ಡಿ.ವೇದವ್ಯಾಸ್ ಕಾಮತ್ ಅವರು ಮಿಲಾಗ್ರಿಸ್ ವಾರ್ಡ್, ಕೋರ್ಟ್ ವಾರ್ಡಿನಲ್ಲಿ ಮನೆ ಮನೆಗೆ ಭೇಟಿ ನೀಡಿ ಭಾರತೀಯ ಜನತಾ ಪಾರ್ಟಿಯನ್ನು ಬೆಂಬಲಿಸುವಂತೆ ಮನವಿ ಮಾಡಿದರು.

ಈ ಸಂದರ್ಭದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಚುನಾವಣಾ ನಿರ್ವಹಣಾ ಸಮಿತಿಯ ಸಹ ಸಂಚಾಲಕ್ ಶ್ರೀ ರವಿಶಂಕರ್ ಮಿಜಾರ್, ಮೋಹನ್ ಪೂಜಾರಿ, ರಂಗನಾಥ್ ಕಿಣಿ, ದಯಾನಂದ, ಲಲ್ಲೇಶ್, ವಿನೋದ್ ಕುಮಾರ್, ಗಿರೀಶ್ ಕುಮಾರ್,ವಸಂತ್ ಜೆ ಪೂಜಾರಿ, ಜೀವನ್, ವಿಜಯ್ ಕುಮಾರ್, ನರೇಂದ್ರ ಕುಮಾರ್, ಮರ್ಲಿನ್, ಅನಿತಾ ಶಣೈ, ಭಾಸ್ಕರ ಚಂದ್ರ ಶೆಟ್ಟಿ, ರಾಮರಾಯ್ ಕಾಮತ್, ಅನಿಲ್ ಅತ್ತಾವರ, ವಾಸು ಶೆಟ್ಟಿಗಾರ್, ಲಕ್ಷ್ಮಣ ಭಟ್, ಅಕ್ಷಯ್ ರಾವ್, ವಿನಾಯಕಪ್ರಭು ಮುಂತಾದವರು ಉಪಸ್ಥಿತರಿದ್ದರು.

Comments are closed.