ಕರಾವಳಿ

ಜಿಲ್ಲೆಯಲ್ಲಿ ಮತಎಣಿಕೆ ಬಳಿಕ ವಿಜಯೋತ್ಸವ, ರ್‍ಯಾಲಿ, ಸಭೆ ಮಾಡೋ ಹಾಗಿಲ್ಲ!

Pinterest LinkedIn Tumblr

ಉಡುಪಿ: ಮೇ.15 ರಂದು ಮತಎಣಿಕೆ ಕಾರ್ಯ ನಡೆಯಲಿದ್ದುಈ ಹಿನ್ನೆಲೆಯಲ್ಲಿ 15.05.2018 ರ ಬೆಳಿಗ್ಗೆ ಗಂಟೆ 6-00 ರಿಂದ 17.05.2018 ರ ಬೆಳಿಗ್ಗೆ ಗಂಟೆ 6-00 ರವರೆಗೆ ದಂಡ ಪ್ರಕ್ರಿಯಾ ಸಂಹಿತೆ 1973 ರ ಕಲಂ 144 ರನ್ವಯ ನಿಷೇದಾಜ್ಞೆಯನ್ನು ಜಾರಿಗೊಳಿಸಲಾಗಿದ್ದು ಯಾವುದೇ ಸಭೆ ಸಮಾರಂಭ, ವಿಜಯೋತ್ಸವ, ಮೆರವಣಿಗೆ ಮಾಡುವುದು, ಪರ ಹಾಗೂ ವಿರೋಧ ಘೋಷಣೆ ಕೂಗುವುದು, ಗುಂಪು ಸೇರುವುದು ನಿಷೇಧಿಸಲಾಗಿದೆ ಎಂದು ಉಡುಪಿ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಆದೇಶ ನೀಡಿದ್ದಾರೆ.

ಗೆಲವು ಸಾಧಿಸಿದ ಹಾಗೂ ಸೋತ ಪಕ್ಷಗಳ ನಡುವೆ ಗೊಂದಲ ಉಂಟಾಗಿ ಗಲಭೆ ನಡೆಯುವ ಸಾಧ್ಯತೆಗಳಬಗ್ಗೆ ಉಡುಪಿಜಿಲ್ಲಾ ಎಸ್ಪಿ ನೀಡಿದ ವರದಿಯಂತೆ ಈ ಆದೇಶ ಮಾಡಲಾಗಿದೆ. ಈ ಆದೇಶದಲ್ಲಿ ಏನೇನಿದೆ ಎಂಬುದನ್ನು ನೋಡಿ……

Comments are closed.