ಉಡುಪಿ: ಕುಂದಾಪುರ ತಾಲೂಕು ಸಿದ್ದಾಪುರ ಜಿಲ್ಲಾ ಪಂಚಾಯತ್ ಸದಸ್ಯ ಸ್ಥಾನದ ಉಪ ಚುನಾವಣೆಯ ವೇಳಾಪಟ್ಟಿ ಪ್ರಕಟಗೊಂಡಿದ್ದು, ನಾಮಪತ್ರ ಸಲ್ಲಿಕೆಗೆ ಜೂನ್ 2 ರ ಕೊನೆಯ ದಿನವಾಗಿದೆ.
ಈ ಉಪ ಚುನಾವಣೆಗೆ ಕುಂದಾಪುರ ಸಹಾಯಕ ಕಮೀಷನರ್ ಚುನಾವಣಾಧಿಕಾರಿಯಾಗಿದ್ದು, ಉಡುಪಿ ತಹಸೀಲ್ದಾರ್ ಅವರು ಸಹಾಯಕ ಚುನಾವಣಾಧಿಕಾರಿಯಾಗಿರುತ್ತಾರೆ. ಅಭ್ಯರ್ಥಿಗಳು ನಾಮಪತ್ರಗಳನ್ನು, ಕುಂದಾಪುರ ಸಹಾಯಕ ಕಮೀಷನರ್ ಅವರ ಕಚೇರಿಯಲ್ಲಿ ಸಲ್ಲಿಸುವಂತೆ ಪ್ರಕಟಣೆ ತಿಳಿಸಿದೆ.
ಈ ಹಿಂದೆ ಸಿದ್ದಾಪುರ ಜಿಲ್ಲಾಪಂಚಾಯತಿ ಸದಸ್ಯ ತಾರನಾಥ ಶೆಟ್ಟಿ ಅಕಾಲಿಕ ಮರಣದಿಂದಾಗಿ ಈ ಸ್ಥಾನ ತೆರವಾಗಿತ್ತು.
Comments are closed.