ಕರಾವಳಿ

ಹುಸೈನಬ್ಬ ಪ್ರಕರಣ: ಹೆಡ್‌ಕಾನ್ಸ್‌ಟೆಬಲ್ ಜಾಮೀನು ಅರ್ಜಿ ತಿರಸ್ಕಾರ

Pinterest LinkedIn Tumblr

ಉಡುಪಿ: ದನದ ವ್ಯಾಪಾರಿ ಹುಸೈನಬ್ಬ ಸಾವಿನ ಪ್ರಕರಣದಲ್ಲಿ ಆರೋಪಿತ ಹಿರಿಯಡ್ಕ ಪೊಲೀಸ್ ಠಾಣೆಯ ಹೆಡ್ ಕಾನ್ಸ್ಟೆಬಲ್ ಮೋಹನ್ ಕೋತ್ವಾಲ್ ಅವರ ಜಾಮೀನು ಅರ್ಜಿಯನ್ನು ಉಡುಪಿಯ ಹೆಚ್ಚುವರಿ ಸಿವಿಲ್ ನ್ಯಾಯಾಲಯದ ನ್ಯಾಯಾಧಿಶರು ತಿರಸ್ಕರಿಸಿದ್ದಾರೆ.

ಜಾಮೀನು ಕೋರಿ ಜೂ.೪ರಂದು ಮೋಹನ್ ಕೋತ್ವಾಲ್ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದು ಸರಕಾರಿ ಅಭಿಯೋಜಕರು ಆಕ್ಷೇಪಣೆ ಸಲ್ಲಿಸಿದ್ದರು. ಇದನ್ನು ಪರಿಶೀಲಿಸಿದ ನ್ಯಾಯಾಧೀಶರು ಅರ್ಜಿ ತಿರಸ್ಕರಿಸಿ ಆದೇಶನೀಡಿದ್ದಾರೆ.

ಇನ್ನು ಹಿರಿಯಡ್ಕ ಪಿ.ಎಸ್.ಐ. ಆಗಿದ್ದ ಡಿ.ಎನ್ ಕುಮಾರ್ ಹಾಗೂ ಪೊಲೀಸ್ ಜೀಪು ಚಾಲಕ ಗೋಪಾಲ್ ಸಲ್ಲಿಸಿರುವ ಜಾಮೀನು ಅರ್ಜಿಗೆ ಸರಕಾರಿ ಅಭಿಯೋಜಕರು ನಾಳೆ (ಜೂ.೮) ಆಕ್ಷೇಪಣೆ ಸಲ್ಲಿಸಲಿದ್ದಾರೆ.

Comments are closed.