ಕುಂದಾಪುರ: ಬೈಂದೂರು ತಾಲೂಕಿನ ತಗ್ಗರ್ಸೆಯ ಸ.ಹಿಪ್ರಾ. ಶಾಲೆಯಲ್ಲಿ ಕಲಿಕಾ ಸಾಮಗ್ರಿ ವಿತರಣಾ ಸಮಾರಂಭ ಜರಗಿತು. ಸಮಾರಂಭದ ಅಧ್ಯಕ್ಷ ಸ್ಥಾನವನ್ನು ಎಸ್.ಡಿ .ಎಮ್.ಸಿ ಅಧ್ಯಕ್ಷ ಪ್ರಭಾಕರ್ ಗಾಣಿಗ ವಹಿಸಿದ್ದರು.
ಸಮಾರಂಭದಲ್ಲಿ ಟಿ. ನಾರಾಯಣ ಹೆಗ್ಡೆ, ಪ್ರಭಾಕರ್ ಶೆಟ್ಟಿ ನೆಲ್ಯಾಡಿ, ಹಳೆವಿದ್ಯಾರ್ಥಿ ಸಂಘದ ಅಧ್ಯಕ್ಷ ವೆಂಕಟರಮಣ ದೇವಾಡಿಗ, ಮೀನಾಕ್ಷಿ ಸಂಜು ಪೂಜಾರಿ, ಉದ್ಯಮಿ ರವಿದಾಸ್ ಮತ್ತು ನಾಗರಾಜ್ ಹೆಬ್ಬಾಗಿಲು ನೀಡಿದ ಕಲಿಕಾಸಾಮಗ್ರಿಗಳನ್ನು ವಿದ್ಯಾರ್ಥಿಗಳಿಗೆ ವಿತರಿಸಲಾಯಿತು. ಜಿಲ್ಲಾಕೇಂದ್ರ ಗೃಂಥಾಲಯ ನೀಡಿದ ೫೦೦ ಪುಸ್ತಕಗಳನ್ನುಸಾಹಿತ್ಯ ಪರಿಷತ್ ಬೈಂದೂರು ಘಟಕದ ಅಧ್ಯಕ್ಷ ಗಣಪತಿ ಹೋಬಳಿದಾರ್ ಮತ್ತು ಬೈಂದೂರು ಮಾದರಿ ಶಾಲೆಯ ಮುಖ್ಯಶಿಕ್ಷಕ ಜನಾರ್ದನ ಅವರು ಶಾಲೆಗೆ ಹಸ್ತಾಂತರಿಸಿದರು. ಧರ್ಮಸ್ಥಳ ಗ್ರಾಮಾಭಿವೃಧ್ಧಿ ಯೋಜನೆಯ ತಗ್ಗರ್ಸೆ ‘ಬಿ’ ಒಕ್ಕೂಟದ ಸದಸ್ಯರು ನೀಡಿದ ನಲಿಕಲಿ ಕುರ್ಚಿಗಳನ್ನು ಶಾಲೆಗೆ ಹಸ್ತಾಂತರಿಸಲಾಯಿತು.
ಆರೋಗ್ಯ ಕಾರ್ಯಕರ್ತೆ ಶಾಂತಾ ಆರೋಗ್ಯ ಮಾಹಿತಿ ನೀಡಿದರು. ಎಸ್.ಡಿ.ಎಮ್.ಸಿ ಉಪಾಧ್ಯಕ್ಷೆ ಶ್ಯಾಮಲಾ ಉಪಸ್ಥಿತರಿದ್ದರು. ಶಾಲೆಯ ಮುಖ್ಯ ಶಿಕ್ಷಕ ತಿಮ್ಮಪ್ಪ ಗಾಣಿಗ ಪ್ರಾಸ್ತಾವಿಕ ಮಾತನಾಡಿದರು. ಸಹಶಿಕ್ಷಕಿ ಭಾಗೀರಥಿ ಸ್ವಾಗತಿಸಿ, ಸಾರಿಕಾ ಕಾರ್ಯಕ್ರಮ ನಿರೂಪಿಸಿ, ಜ್ಯೋತಿ ಎಚ್ ವಂದಿಸಿದರು. ಟಿ.ಜಿ.ಟಿ. ಶಿಕ್ಷಕಿ ಸಂಗೀತಾ ಮತ್ತು ಅಂಬಾಬಾಯಿ ಸಹಕರಿಸಿದರು.
Comments are closed.