ಕರಾವಳಿ

ಬಿಜೈ ಕೆ‌ಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಆವರಣದೊಳಗಿನ ಮರ ಬಿದ್ದು ವಿದ್ಯುತ್ ಕಂಬಕ್ಕೆ ಹಾನಿ

Pinterest LinkedIn Tumblr

ಮಂಗಳೂರು, ಜೂನ್.26: ಬಿಜೈ ಕೆ‌ಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಆವರಣದೊಳಗಿನ ಮರವೊಂದು ವಿದ್ಯುತ್ ತಂತಿಯ ಮೇಲೆ ಕುಸಿದು ಬಿದ್ದ ಪರಿಣಾಮ ಸ್ಥಳಿಯರಿಗೆ ವಿದ್ಯುತ್ ಸಂಪರ್ಕ ಮೊಟಕುಗೊಂಡ ಘಟನೆ ಇಂದು ಮುಂಜಾನೆ ನಡೆದಿದೆ.

ಮರ ವಿದ್ಯುತ್ ತಂತಿಯ ಮೇಲೆ ಕುಸಿದು ಬಿದ್ದದ್ದರಿಂದ ವಿದ್ಯುತ್ ಕಂಬ ಬಾಗಿದ್ದು, ಕುಸಿಯುವ ಭೀತಿ ಎದುರಾಗಿದೆ. ಇದೇವೇಳೆ ಮರದ ಕೊಂಬೆಗಳು ತಾಗಿದ್ದರಿಂದ ವಿದ್ಯುತ್ ತಂತಿಗಳು ಅಸ್ತವ್ಯಸ್ತಗೊಂಡಿವೆ.

Comments are closed.