ಮಂಗಳೂರು, ಜುಲೈ.20: ಇತ್ತೀಚಿಗೆ ಕೆಲಸದಿಂದ ವಜಾ ಮಾಡಿದಂತಹ ಮಂಗಳೂರು ವನ್ ಕೇಂದ್ರದ ಸಿಬ್ಬಂದಿಗಳನ್ನು ಮರು ಸೇರ್ಪಡೆಗೊಳಿಸ ಬೇಕು ಹಾಗೂ ಕರ್ನಾಟಕ ವನ್ ನೌಕರರ ವೇತನ ನಿಗದಿ ಮಾಡುವಂತೆ ಆಗ್ರಹಿಸಿ ದಕ್ಷಿಣ ಕನ್ನಡ ಜಿಲ್ಲಾ ಇಂಟೆಕ್ ಆಶ್ರಯದಲ್ಲಿ ಮಂಗಳೂರು ಮಹಾನಗರ ಪಾಲಿಕೆ ಕಚೇರಿ ಮುಂಭಾಗ ಹಾಗೂ ಮಂಗಳೂರು ವನ್ ಕೇಂದ್ರದ ಮುಂಭಾಗದಲ್ಲಿ ಶುಕ್ರವಾರ ಪ್ರತಿಭಟನೆ ನಡೆಯಿತು.
ಕರ್ನಾಟಕ ವನ್ ನೌಕರರ ವೇತನ ನಿಗದಿ ಕೆಲಸದಿಂದ ವಜಾ ಮಾಡಿದಂತಹ ನೌಕರರನ್ನು ಕೂಡಲೇ ಕೆಲಸಕ್ಕೆ ಮರು ಸೇರ್ಪಡೆಗೊಳಿಸ ಬೇಕು ಎಂದು ಪ್ರತಿಭಟನಕಾರರು ಆಗ್ರಹಿಸಿದರು.
ದಕ್ಷಿಣ ಕನ್ನಡ ಜಿಲ್ಲಾ ಇಂಟೆಕ್ ರಾಜ್ಯ ಅಧ್ಯಕ್ಷ ರಾಕೇಶ್ ಮಲ್ಲಿ, ಕಾನೂನು ಸಲಹೆಗಾರ ದಿನಕರ ಶೆಟ್ಟಿ, ಜಿಲ್ಲಾ ಯುವ ಅಧ್ಯಕ್ಷ ದೀಕ್ಷಿತ್ ವಿ. ಶೆಟ್ಟಿ, ಬಾತೀಶ್, ಪ್ರವೀಣ್ ಶೆಟ್ಟಿ, ವಿವಿಯನ್, ಭುವನ್, ಶರೀಫ್ ಹಾಗೂ ಮತ್ತಿತ್ತರ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
Comments are closed.