ಕರಾವಳಿ

ಶಾಲಾ ಸಮವಸ್ತ್ರ ದಾನ, ಮಕ್ಕಳ ಭವಿಷ್ಯ ಉಜ್ವಲಗೊಳಿಸುವ ಶ್ರೇಷ್ಟ ಕಾರ್ಯ : ಶಾಸಕ ವೇದವ್ಯಾಸ ಕಾಮತ್

Pinterest LinkedIn Tumblr

ಮಂಗಳೂರು,ಜುಲೈ.22: ವಿಶ್ವ ಹಿಂದೂ ಪರಿಷತ್ ಮಣ್ಣಗುಡ್ಡೆ ಕ್ಷೇತ್ರ, ಉರ್ವಾ ವತಿಯಿಂದ ಧಾರ್ಮಿಕ ತಳಹದಿಯಲ್ಲಿ ನಡೆಯುವ ಸೇವಾ ಕಾರ್ಯಕ್ರಮ ಶಾಲಾ ಸಮವಸ್ತ್ರ ದಾನವನ್ನು ರವಿವಾರ ಉರ್ವಾ ಶ್ರೀ ಮರಿಯಮ್ಮ ದೇವಸ್ಥಾನದಲ್ಲಿ ನಡೆಸಲಾಯಿತು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಮಂಗಳೂರು ನಗರ ದಕ್ಷಿಣ ಶಾಸಕ ಡಿ ವೇದವ್ಯಾಸ ಕಾಮತ್ ಮಾತನಾಡಿ, ವಿಶ್ವ ಹಿಂದೂ ಪರಿಷತ್ ದೇಶ ಕಟ್ಟುವ ಕಾರ್ಯದಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿದೆ. ಶಾಲಾ ಸಮವಸ್ತ್ರ ದಾನದ ಮೂಲಕ ಮಕ್ಕಳ ಭವಿಷ್ಯವನ್ನು ಉಜ್ವಲಗೊಳಿಸುವ ಕಾರ್ಯ ಶ್ರೇಷ್ಟವಾದುದು. ವಿದ್ಯಾರ್ಥಿಗಳು ಕೂಡ ಇದರ ಸದುಪಯೋಗವನ್ನು ಪಡೆದುಕೊಂಡು ಸಮಾಜದಲ್ಲಿ ಮಾದರಿಯಾಗಬೇಕು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಉರ್ವಾ ಶ್ರೀ ಮಾರಿಯಮ್ಮಾ ದೇವಸ್ಥಾನ ಆಡಳಿತ ಮೊಕ್ತೇಸರ ಹರಿಶ್ಚಂದ್ರ ಕರ್ಕೆರಾ, ಉರ್ವಾ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಅಧ್ಯಕ್ಷ ರಮಾನಾಥ ಶೆಟ್ಟಿ, ದಾನಿಗಳ ಕುಟುಂಬಸ್ಥರು, ಮಕ್ಕಳು, ಪೋಷಕರು ಮತ್ತೀತ್ತರರು ಉಪಸ್ಥಿತರಿದ್ದರು

Comments are closed.