ಕರಾವಳಿ

34 ವರ್ಷ ಹಿಂದಿನ ಅತ್ಯಾಚಾರ ಪ್ರಕರಣದ ಆರೋಪಿ ದೋಷಮುಕ್ತ

Pinterest LinkedIn Tumblr

ಕುಂದಾಪುರ: ಅತ್ಯಾಚಾರ ಪ್ರಕರಣದಲ್ಲಿ ಬಂಧಿಸಲ್ಪಟ್ಟು ಜೈಲಿನಲ್ಲಿದ್ದ ಭಟ್ಕಳ ಮಹಾನಗರದ ಮಹಮ್ಮದ್‌ ಮಾರುಫ್ನನ್ನು ಕಾರವಾರದ ಜಿಲ್ಲಾ ಹಾಗೂ ಸತ್ರ ನ್ಯಾಯಾಲಯ ದೋಷಮುಕ್ತಗೊಳಿಸಿದೆ.

1984 ಮೇ 11ರಂದು ಪ್ರಕರಣ ನಡೆದಿದ್ದು, ಆರೋಪಿ ಕೊಲ್ಲಿ ರಾಷ್ಟ್ರಕ್ಕೆ ಪರಾರಿಯಾಗಿದ್ದ. ಅನಂತರ ಪತ್ನಿ, ಮಕ್ಕಳ ಜತೆಗಿದ್ದ. ಈ ವರ್ಷ ಭಟ್ಕಳಕ್ಕೆ ಬಂದಾಗ ವಾರೆಂಟ್‌ ಮೇರೆಗೆ ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ನ್ಯಾಯಾಲಯದಲ್ಲಿ ಜಾಮೀನು ತಿರಸ್ಕೃತ ವಾಗಿತ್ತು. ಈಗ ಪ್ರಕರಣದ ವಿಚಾರಣೆ ಕೈಗೆತ್ತಿಕೊಂಡರೆ ಸಾಕ್ಷಿ ಗಳು ಲಭ್ಯವಾಗುವುದು ಕಷ್ಟ ಎಂದು ಮನಗಂಡು ಪ್ರಕರಣದ ಸಾಕ್ಷಿ ದಾರರ ವಿಚಾರಣೆ ನಡೆಸದೆ ಪ್ರಧಾನ ಸತ್ರ ನ್ಯಾಯಾಧೀಶ ಟಿ. ಜಿ.ಶಿವಶಂಕರೇಗೌಡ ಅವರು ಆರೋಪಿಯನ್ನು ದೋಷಮುಕ್ತ ಗೊಳಿಸಿದ್ದಾರೆ.

ಆರೋಪಿ ಪರ ರವಿಕಿರಣ್‌ ಮುರುಡೇಶ್ವರ ವಾದಿಸಿದ್ದರು.

Comments are closed.