ಕರಾವಳಿ

ರೂ.20 ಲಕ್ಷ ವೆಚ್ಚದಲ್ಲಿ ಕದ್ರಿ ಕೈಬಟ್ಟಲು ರಸ್ತೆ ಕಾಂಕ್ರೀಟಿಕರಣ : ಶಾಸಕ ವೇದವ್ಯಾಸ್ ಕಾಮತ್

Pinterest LinkedIn Tumblr

ಮಂಗಳೂರು ; ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ 33 ನೇ ವಾರ್ಡಿನ ಕದ್ರಿ ಕೈಬಟ್ಟಲಿನ ಏಳನೇ ಕ್ರಾಸ್ ರಸ್ತೆ ಕಾಂಕ್ರೀಟಿ ಕರಣಕ್ಕೆ ಮಂಗಳೂರು ನಗರ ದಕ್ಷಿಣ ಶಾಸಕ ಡಿ ವೇದವ್ಯಾಸ ಕಾಮತ್ ಶಿಲಾನ್ಯಾಸ ನೆರವೇರಿಸಿದರು.

ನಂತರ ಮಾತನಾಡಿದ ಶಾಸಕರು ಅಲ್ಪಸಂಖ್ಯಾತ ಕಾಲೋನಿ ಅಭಿವೃದ್ಧಿ ಅನುದಾನದ ಅಡಿಯಲ್ಲಿ 15 ಲಕ್ಷ ರೂಪಾಯಿ ಹಾಗೂ ಹದಿನಾಲ್ಕನೇ ಫೈನಾನ್ಸ್ ಕಮಿಷನ್ ಅನುದಾನದ ಅಡಿಯಲ್ಲಿ ಐದು ಲಕ್ಷ ರೂಪಾಯಿ ಸೇರಿಸಿ ಒಟ್ಟು 20 ಲಕ್ಷ ರೂಪಾಯಿ ವೆಚ್ಚದಲ್ಲಿ ರಸ್ತೆಯನ್ನು ಸಂಪೂರ್ಣವಾಗಿ ಕಾಂಕ್ರೀಟಿಕರಣ ಮಾಡಲಾಗುತ್ತದೆ. ಈ ಭಾಗದ ಜನರ ಬಹುದಿನಗಳ ಬೇಡಿಕೆಯಾಗಿದ್ದ ಈ ರಸ್ತೆಯ ಅಭಿವೃದ್ಧಿಯಿಂದ ಮಂಗಳೂರು ನಗರ ದಕ್ಷಿಣದಲ್ಲಿ ಅಭಿವೃದ್ಧಿಯ ಶಕೆ ಪ್ರಾರಂಭವಾಗಿದೆ ಎಂದು ತಿಳಿಸಿದರು.

ಶಾಸಕರೊಂದಿಗೆ ಮೇಯರ್ ಭಾಸ್ಕರ್ ಮೊಯಿಲಿ, ಡಾ| ಪ್ರಶಾಂತ್ ಮಾರ್ಲ, ಪಾಲಿಕೆ ಸದಸ್ಯರಾದ ಅಶೋಕ್ ಡಿಕೆ, ಶಶಿಧರ್ ಹೆಗ್ಡೆ, ಪ್ರವೀಣಚಂದ್ರ ಆಳ್ವ, ಸ್ಥಳೀಯ ಮುಖಂಡರಾದ ಕಿಶೋರ್ ರೈ, ಫೆಡ್ರಿಕ್, ನಿವೇದಿತ ಶೆಟ್ಟಿ, ಸ್ಥಳೀಯರಾದ ನೀರಜ್, ಕಿಶೋರ್ ಕುಮಾರ್, ಮೋಹನ್ ಹಾಗೂ ಸ್ಥಳೀಯ ನಾಗರಿಕರು ಉಪಸ್ಥಿತರಿದ್ದರು.

Comments are closed.