ಉಡುಪಿ: ಪಿಯುಸಿ ಫಲಿತಾಂಶ ಪ್ರಕಟವಾದ ಬೆನ್ನಲ್ಲೆ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಪ್ರಜ್ಞಾ (18) ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿ. ಪ್ರಜ್ಞಾ ಉಡುಪಿ ಜಿಲ್ಲೆಯ ಹೆಬ್ರಿಯ ನಡುಮನೆ ಗ್ರಾಮದ ನಿವಾಸಿ.
ಪ್ರಜ್ಞಾ ಬ್ರಹ್ಮಾವರ ಬೋರ್ಡ್ ಪಿಯು ದ್ವಿತೀಯ ಪಿಯುಸಿ ವಿದ್ಯಾರ್ಥಿನಿಯಾಗಿದ್ದಳು. ದ್ವಿತೀಯ ಪಿಯು ಆರ್ಟ್ಸ್ ನಲ್ಲಿ ಕನ್ನಡ ಭಾಷೆಯಲ್ಲಿ 4 ಅಂಕ ಪಡೆದು ಫೇಲ್ ಹಿನ್ನಲೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಳು.
ಕನ್ನಡ ಬಿಟ್ಟು ಉಳಿದೆಲ್ಲ ಸಬ್ಜೆಕ್ಟ್ನಲ್ಲಿ 60ಕ್ಕಿಂತ ಹೆಚ್ಚು ಪ್ರಜ್ಞಾ ಅಂಕ ಪಡೆದಿದ್ದಳು.ಕನ್ನಡ ಭಾಷೆಯಲ್ಲಿ ಫೇಲ್ ಎನ್ನುವ ಬೆಂಗಳೂರಿನ ಸಂಬಂಧಿಕರು ವಿಷಯ ತಿಳಿಸಿದ್ದರು.ಫಲಿತಾಂಶದಿಂದ ಮನನೊಂದು ಸೀರೆಯಿಂದ ಫ್ಯಾನಿಗೆ ನೇಣು ಬಿಗಿದು ಆತ್ಮಹತ್ಯೆಗೆ ಶರಣಾದ ಪ್ರಜ್ಞಾ ಮನೆಯಲ್ಲಿ ತಾಯಿ, ಅಜ್ಜಿ ಇರೋವಾಗಲೇ ನೇಣಿಗೆ ಶರಣಾಗಿದ್ದಾಳೆ.
ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Comments are closed.