ಉಡುಪಿ: ಇಲ್ಲಿನ ಬೀಡಿನಗುಡ್ಡೆಯಲ್ಲಿರುವ ಖಾಸಗಿ ವಸತಿ ನಿಲಯದಲ್ಲಿದ್ದ (ಪಿಜಿ) ತೀರ್ಥಹಳ್ಳಿಯ ವಿದ್ಯಾರ್ಥಿನಿಯೊಬ್ಬಳು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ವರದಿಯಾಗಿದೆ. ಉಡುಪಿ ನಗರದ ಕಾಲೇಜೊಂದರಲ್ಲಿ ಅಂತಿಮ ಬಿಎಸ್ಸಿ ವಿದ್ಯಾರ್ಥಿನಿಯಾಗಿರುವ ತೀರ್ಥಹಳ್ಳಿಯ ಬಾಳಗಾರು ನಿವಾಸಿ ವೀಕ್ಷಿತಾ (20) ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿ.
(ಸಾಂದರ್ಭಿಕ ಚಿತ್ರ)
ವೀಕ್ಷಿತಾ ಆತ್ಮಹತ್ಯೆಗೂ ಮೊದಲು ಮರಣ ಪತ್ರ ಬರೆದಿಟ್ಟಿದ್ದು, ಅದರಲ್ಲಿ ಕಿರಣ್ ಎಂಬಾತ ನನಗೆ ಮೋಸ ಮಾಡಿದ್ದಾನೆ ಹಾಗೂ ಫೋನ್ ಮೂಲಕ ಮಾನಸಿಕ ಹಿಂಸೆ ನೀಡುತ್ತಿದ್ದಾನೆ ಎಂದು ಬರೆದಿದ್ದಾಳೆ.
ಈ ವಿಚಾರವಾಗಿ ಕಿರಣ್ ಎಂಬಾತನ ವಿರುದ್ದ ಉಡುಪಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.
Comments are closed.