ಉಡುಪಿ: ಮೊಬೈಲ್ ನೋಡುತ್ತಾ ಕೂರಬೇಡ ಮನೆ ಕೆಲಸ ಮಾಡು ಎಂದು ತಾಯಿ ಹೇಳಿದ್ದಕ್ಕೆ ಮನ ನೊಂದು 13 ವರ್ಷದ ಬಾಲಕಿಯೋರ್ವಳು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಉಡುಪಿ ಜಿಲ್ಲೆಯ ಪಡುಬಿದ್ರೆಯಲ್ಲಿ ಸೋಮವಾರ ನಡೆದಿದೆ.
ಎಲ್ಲೂರು ಗ್ರಾಮದ ಜಯರಾಮ ಎಂಬವರ 13 ವರ್ಷದ ಬಾಲಕಿ ಮೃತ ಬಾಲಕಿ.
(ಸಾಂದರ್ಭಿಕ ಚಿತ್ರ)
ಪೊಲೀಸ್ ಮೂಲಗಳ ಪ್ರಕಾರ ಬಾಲಕಿಯು ಸ್ಥಳೀಯ ಶಾಲೆಯಲ್ಲಿ 7 ನೇತರಗತಿಯಲ್ಲಿ ವ್ಯಾಸಂಗ ಮಾಡಿಕೊಂಡಿದ್ದು ಸೋಮವಾರ ತಾಯಿ ದಿನ ಮೊಬೈಲ್ ನೋಡುತ್ತಾ ಕೂರಬೇಡ, ಮನೆಯ ಕೆಲಸವನ್ನು ಮಾಡು ಎಂದು ಬುದ್ದಿವಾದ ಹೇಳಿದ್ದರಿಂದ ಮನನೊಂದು ಮನೆಯ ಬೆಡ್ ರೂಮಿನ ಮಾಡಿನ ಕಬ್ಬಿಣದ ಪೈಪಿಗೆ ಚೂಡಿದಾರದ ವೇಲನ್ನು ಕಟ್ಟಿ ಕುತ್ತಿಗೆಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದನ್ನು ಮನೆಯವರು ಕಂಡು ಕೂಡಲೇ ಉಡುಪಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದು ದಾರಿ ಮಧ್ಯೆ ಮೃತಪಟ್ಟಿದ್ದಾಳೆ ಎನ್ನಲಾಗಿದೆ.
ಈ ಬಗ್ಗೆ ಪಡುಬಿದ್ರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Comments are closed.