ಕರಾವಳಿ

ಮಂಗಳೂರು ಸಂಘನಿಕೇತನ ಗಣೇಶನಿಗೆ ಅಮೃತ ಮಹೋತ್ಸವ ಸಂಭ್ರಮ

Pinterest LinkedIn Tumblr

ಮಂಗಳೂರು : ನಗರದ ಮಣ್ಣಗುಡ್ಡೆ ಯಲ್ಲಿರುವ ಸಂಘನಿಕೇತನದಲ್ಲಿ ಕೇಶವ ಸ್ಮ್ರತಿ ಸಂವರ್ಧನ ಸಮಿತಿಯ ಆಶ್ರಯದಲ್ಲಿ ಈ ಬಾರಿ ಸಾರ್ವಜನಿಕ ಶ್ರೀ ಗಣೇಶೋತ್ಸವಕ್ಕೆ ಅಮೃತ ಮಹೋತ್ಸವ ಸಂಭ್ರಮ ( 75 ವರ್ಷ ) ದಿನಾಂಕ 31-08-2022ರಿಂದ 04- 09 – 2022 ರ ವರೆಗೆ ಗಣೇಶೋತ್ಸವ ನಡೆಯಲಿದೆ.

ಸಾರ್ವಜನಿಕ ಗಣೇಶ್ಜೋತ್ಸವದ ಉದ್ಘಾಟನೆ ಯನ್ನು ಶ್ರೀ ಮುಕುಂದ್ , ಮಾನನೀಯ ಸಹಸರ ಕಾರ್ಯವಾಹ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಇವರ ದಿವ್ಯ ಹಸ್ತಗಳಿಂದ ನೆರವೇರಿತು . ವಿವಿಧ ಧಾರ್ಮಿಕ , ಸಂಸ್ಕ್ರತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದ್ದು ಸದ್ಭಕ್ತ ರು ಈ ಎಲ್ಲಾ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಪುನೀತರಾಗಬೇಕಾಗಿ ಸಮಿತಿಯು ವಿನಂತಿಸಿಕೊಂಡಿದೆ .

ಧ್ವಜಾರೋಹಣ, ವಂದೇಮಾತರಂ ಉದ್ಘಾಟಕರ ಸಂದೇಶ ಸಭಾಕಾರ್ಯಕ್ರಮ ನಡೆಯಿತು , ಗಣಹೋಮ ಬಳಿಕ ಸಾಯಂಕಾಲ ಹರಿನಾಮ ಸಂಕೀರ್ತನೆ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಿಗೆ ಬಹುಮಾನ ವಿತರಣೆ ನಡೆಯಿತು. ರಾತ್ರಿ ಮೂಡಗಣಪತಿ ಸೇವೆ ಹಾಗೂ ರಂಗ ಪೂಜೆ ನಡೆದವು.

ಈ ಸಂದರ್ಭದಲ್ಲಿ ಸಂಘ ಚಾಲಕರಾದ ಡಾ .ವಾಮನ್ ಶೆಣೈ, ಸುನಿಲ್ ಆಚಾರ್ , ಡಾ . ಕಲಡ್ಕ ಪ್ರಭಾಕರ್ ಭಟ್ , ಗೌರವ ಅಧ್ಯಕ್ಷ ಪಿ . ರವೀಂದ್ರ ಪೈ ಗಣೇಶೋತ್ಸವ ಸಮಿತಿಯ ಅಧ್ಯಕ್ಷ ಪ್ರವೀಣ್ ಕುಮಾರ್ , ಪ್ರಧಾನ ಕಾರ್ಯದರ್ಶಿ ಎಂ . ಸತೀಶ್ ಪ್ರಭು , ಸುರೇಶ ಕಾಮತ್ , ಜೀವನರಾಜ್ ಶೆಣೈ ಉಪಾಧ್ಯಕ್ಷರಾದ ಜೆ . ಕೆ ರಾವ್ , ಆನಂದ ಪಾಂಗಳ , ಕೆ ಪಿ ಟೈಲಾರ್ , ಅಭಿಷೇಕ್ ಭಂಡಾರಿ , ಕೇಶವ ಸ್ಮ್ರತಿ ಸಂವರ್ಧನ ಸಮಿತಿಯ ವಿನೋದ್ ಶೆಣೈ , ರಘುವೀರ್ ಕಾಮತ್ , ಯಸ್ ಆರ್ ಕುಡ್ವ , ಗಣೇಶ್ ಪ್ರಸಾದ್ , ಜಯಪ್ರಕಾಶ್ ಮಂಗಳಾದೇವಿ ಸ್ವಾಮಿಪ್ರಸಾದ್ ಮತ್ತಿತರರು ಉಪಸ್ಥಿತರಿದ್ದರು .

ಚಿತ್ರ : ಮಂಜು ನೀರೇಶ್ವಾಲ್ಯ

Comments are closed.