ಕರ್ನಾಟಕ

ಬಹುಪರಾಕ್; ಪ್ರಧಾನಿ ಮೋದಿ ಹೇಳಿಕೆ ಬಗ್ಗೆ ದೇವೇಗೌಡರು ಹೇಳಿದ್ದೇನು?

Pinterest LinkedIn Tumblr


ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರು ನನ್ನ ಹೊಗಳಿದ್ದರಲ್ಲಿ ವಿಶೇಷ ಏನೂ ಇಲ್ಲ. ಪ್ರಧಾನಿ ಎಲ್ಲಿಗೆ ಹೋದರೂ ಅವರು ಆ ರಾಜ್ಯದ ಹಿನ್ನೆಲೆ ತಿಳಿದುಕೊಂಡು ಮಾತನಾಡುತ್ತಾರೆ. ಪ್ರಧಾನಿಯವರಿಗೆ ಎಲ್ಲಿಗೆ ಹೋದಾಗ ಹೇಗೆ ಮಾತನಾಡಬೇಕೆಂಬುದು ಚೆನ್ನಾಗಿ ಗೊತ್ತಿದೆ ಎಂದು ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಎಚ್ ಡಿ ದೇವೇಗೌಡ ಪ್ರತಿಕ್ರಿಯೆ ನೀಡಿದ್ದಾರೆ.

ಬುಧವಾರ ಮಾಧ್ಯಮ ಸಂವಾದದಲ್ಲಿ ಮಾತನಾಡಿದ ಅವರು, ಉಡುಪಿಯಲ್ಲಿ ಮಂಗಳವಾರ ಪ್ರಧಾನಿ ನರೇಂದ್ರ ಮೋದಿ ಅವರು ಗೌಡರನ್ನು ಹೊಗಳಿರುವ ಕುರಿತು ಮೊದಲ ಪ್ರತಿಕ್ರಿಯೆ ನೀಡಿದರು.

ಪ್ರಾದೇಶಿಕ ಪಕ್ಷವನ್ನು ಉಳಿಸಿಕೊಂಡು ಹೋಗುವುದು ಕಷ್ಟ. ಹೀಗಾಗಿ ಎರಡು ರಾಷ್ಟ್ರೀಯ ಪಕ್ಷಗಳ ನಡುವೆ ಪ್ರಾದೇಶಿಕ ಪಕ್ಷ ಹೋರಾಟ ನಡೆಸಬೇಕಾಗಿದೆ. ರಾಹುಲ್ ಗಾಂಧಿ ಇತ್ತೀಚೆಗೆ ಹಾಸನಕ್ಕೆ ಬಂದಾಗ ನನ್ನ ವಿರುದ್ಧ ಮಾತನಾಡಿದ್ದರು. ನಾನು ರಾಹುಲ್ ಬಗ್ಗೆ ಏನೂ ಹೇಳಲ್ಲ, ಇನ್ನೂ ಚಿಕ್ಕವರು, ಬೆಳೆಯಬೇಕು ಎಂದು ಹೇಳಿದರು.

ಜೆಎಚ್ ಪಟೇಲ್ ಮುಖ್ಯಮಂತ್ರಿ ಆಗಿದ್ದಾಗ ವಿಧಾನಸೌಧದಲ್ಲಿ ನನ್ನ ಫೋಟೊ ಹಾಕಿದ್ದರು. ಆದರೆ ಸಿಎಂ ಸಿದ್ದರಾಮಯ್ಯ ಆ ಫೋಟೊವನ್ನು ತೆಗೆಸಿದ್ದಾರೆ ಎಂದು ಗೌಡರು ಆರೋಪಿಸಿದರು.

-ಉದಯವಾಣಿ

Comments are closed.