ಕರ್ನಾಟಕ

24 ಪುಟದ ಡೆತ್ ನೋಟ್ ಬರೆದು ಸಾವಿಗೆ ಶರಣಾದ ಅಕೌಂಟೆಂಟ್

Pinterest LinkedIn Tumblr


ಬೆಂಗಳೂರು: ವೈವಾಹಿಕ ಜೀವನದಲ್ಲಿ ನೊಂದಿದ್ದ ಅಕೌಂಟೆಂಟ್ ಒಬ್ಬರು 24 ಪುಟದ ಆತ್ಮಹತ್ಯೆ ಬರೆದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನಗರದ ಕೆ.ಪಿ ಅಗ್ರಹಾರದಲ್ಲಿ ಬುಧವಾರ ಈ ಘಟನೆ ನಡೆದಿದೆ.

ಮೃತರನ್ನು 38 ವರ್ಷದ ಮೋಹನ್ ಕುಮಾರ್ ಎಂದು ಗುರುತಿಸಲಾಗಿದ್ದು ಕಾಮಾಕ್ಷಿಪಾಳ್ಯದಲ್ಲಿರುವ ಖಾಸಗಿ ಗ್ಯಾಸ್ ಏಜೆನ್ಸಿಯೊಂದರಲ್ಲಿ ಅವರು ಅಕೌಂಟೆಂಟ್ ಆಗಿ ಕೆಲಸ ಮಾಡುತ್ತಿದ್ದರು.

ಸಾವಿಗೂ ಮುನ್ನ ಪೊಲೀಸ್ ಉಪ ಆಯುಕ್ತ ( ಪಶ್ಚಿಮ) ರವಿ. ಡಿ ಚನ್ನಣ್ಣನವರ್ ಅವರನ್ನು ಉದ್ದೇಶಿಸಿ 24 ಪೇಜ್ ಡೆತ್ ನೋಟ್ ಬರೆದಿರುವ ಮೃತರು, ತಮ್ಮ ಪತ್ನಿ, ತಾನು ಕೆಲಸ ಮಾಡುವ ಗ್ಯಾಸ್ ಏಜೆನ್ಸಿ ಮಾಲೀಕರ ಜತೆ ಅನೈತಿಕ ಸಂಬಂಧ ಹೊಂದಿದ್ದಾರೆ ಎಂದು ಆರೋಪಿಸಿದ್ದಾರೆ. ಇದಕ್ಕೆ ಸಾಕ್ಷಿಯಾಗಿ ಪತ್ನಿ ಅವಳ ಲವರ್ ಜತೆ ಮಾತನಾಡುತ್ತಿದ್ದಾಗ ಕ್ಲಿಕ್ಕಿಸಿರುವ ಪೋಟೋಗಳಿವು ಎಂದು ಬರೆದು ಕೆಲ ಫೋಟೋಗಳನ್ನು ಸಹ ಅಂಟಿಸಿದ್ದಾರೆ.

ಆದರೆ ಮೃತನ ಕುಟುಂಬ ಈ ಆರೋಪಗಳನ್ನು ನಿರಾಕರಿಸಿದೆ. ಆತನ ಪತ್ನಿಗೆ ಗರ್ಭಕೋಶ ಸಂಬಂಧಿತ ಸಮಸ್ಯೆಗಳಿದ್ದವು. ಹೀಗಾಗಿ ಪತಿಯಿಂದ ದೂರವಿರುತ್ತಿದ್ದಳು. ಇದು ಮೋಹನ್‌ಗೆ ಪತ್ನಿ ಮೇಲೆ ಅನುಮಾನ ಪಡುವಂತೆ ಮಾಡಿತು. ಅನೇಕ ಬಾರಿ ಪೊಲೀಸ್ ಠಾಣೆಗೆ ತೆರಳಿ ಈ ಕುರಿತು ದೂರನ್ನು ಕೂಡ ನೀಡಿದ್ದ. ಆದರೆ ಸತ್ಯವೇನೆಂದು ತಿಳಿದ ಪೊಲೀಸರು ಆತನಿಗೆ ಕೌನ್ಸಿಲಿಂಗ್ ಕೂಡ ಮಾಡಿದ್ದರು, ಎಂದು ಕುಟುಂಬಸ್ಥರು ಹೇಳಿದ್ದಾರೆ.

ಮೋಹನ್ ಕುಮಾರ್ ದಂಪತಿಗೆ 11 ವರ್ಷದ ಮಗಳಿದ್ದಾಳೆ.

Comments are closed.