ಕರ್ನಾಟಕ

ಇಂದು ಆನಂದ್​ ಸಿಂಗ್​ ಹಾಗೂ ಪ್ರತಾಪ್​ ಗೌಡ ಪಾಟೀಲರನ್ನು ಕರೆ ತರುತ್ತೇನೆ: ಡಿಕೆ ಶಿವಕುಮಾರ್

Pinterest LinkedIn Tumblr


ಬಿಡದಿ: ​ಆನಂದ್​ಸಿಂಗ್​ ರಾಜೀನಾಮೆ ನೀಡಿಲ್ಲ. ಅವರಿಗೆ ಒತ್ತಡ ಹೆಚ್ಚಿದೆ. ಹಾಗಾಗಿ ನಾವು ಸುಮ್ಮನಿದ್ದೇವೆ. ನಾನು ಆನಂದ್​ ಸಿಂಗ್​ ಹಾಗೂ ಪ್ರತಾಪ್​ ಸಿಂಗ್​ರನ್ನು 24 ಗಂಟೆಯೊಳಗೆ ಕರೆದುಕೊಂಡು ಬರುತ್ತೇನೆ ಎಂದು ರಾಮನಗರದ ಬಿಡದಿಯ ಈಗಲ್ಟನ್​ ರೆಸಾರ್ಟ್ ನಲ್ಲಿ ಮಾಜಿ ಸಚಿವ ಡಿ.ಕೆ.ಶಿವಕುಮಾರ್​ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಜನಾರ್ದನ​ ರೆಡ್ಡಿ ಪಾಪ ಎಲ್ಲರಿಗೂ ಫೋನ್​ ಮಾಡ್ತಿದ್ದಾರೆ. ಆದರೆ, ಬಿಜೆಪಿ ಅವರನ್ನು ನಮ್ಮ ಪಕ್ಷದವರೇ ಅಲ್ಲ ಎನ್ನುತ್ತಾರೆ ಎಂದರು.

ಗೂಂಡಾಗಿರಿಯಿಂದ ಏನೂ ಮಾಡುವುದಕ್ಕಾಗುವುದಿಲ್ಲ ಎಂಬ ಬಿಎಸ್​ವೈ ಹೇಳಿಕೆಗೆ ಈಗಲ್ಟನ್​ ರೆಸಾರ್ಟ್​ನಲ್ಲಿ ಹೀಗೆ ಪ್ರತಿಕ್ರಿಯಿಸಿ, ಈ ಸರಕಾರಕ್ಕೆ ಬಲ ಇಲ್ಲ. ಜನ ಅವರಿಗೆ ನೀಡಿರುವುದು 104 ಸ್ಥಾನಗಳು ಮಾತ್ರ ಸಿಕ್ಕಿದೆ ಎಂದರು.

ಅಧಿಕಾರಕ್ಕೆ ಬಂದೊಡನೆಯೇ ಪೊಲೀಸ್​ ಅಧಿಕಾರಿಗಳನ್ನು ವರ್ಗಾಯಿಸಿ ಗೂಂಡಾಗಿರಿ ಮಾಡುತ್ತಿರುವುದು ಬಿ.ಎಸ್​.ಯಡಿಯೂರಪ್ಪ. ಅಧಿಕಾರ ದುರುಪಯೋಗ ಮಾಡಿಕೊಳ್ಳುವುದು ಒಳ್ಳೆಯದಲ್ಲ ಎಂದು ಡಿ.ಕೆ.ಶಿವಕುಮಾರ್​ ವಾಗ್ದಾಳಿ ನಡೆಸಿದ್ದಾರೆ.

Comments are closed.