ಕರ್ನಾಟಕ

ನಮ್ಮ ಎದುರಾಳಿ ಎಂದಿಗೂ ಜೆಡಿಎಸ್‌: ಕಾಂಗ್ರೆಸ್ ಶಾಸಕ ಡಾ. ಸುಧಾಕರ

Pinterest LinkedIn Tumblr


ಚಿಕ್ಕಬಳ್ಳಾಪುರ:ನಾನು ಸೇರಿದಂತೆ ಹಲವು ನಾಯಕರಿಗೆ ಜೆಡಿಎಸ್‌ ಜತೆ ಸಮ್ಮಿಶ್ರ ಸರಕಾರ ಮಾಡುವ ನಿರ್ಧಾರ ಸರಿ ಇಲ್ಲ. ಈ ನಿರ್ಧಾರ ಯಾರಿಗೂ ಇಷ್ಟವಿರಲಿಲ್ಲ. ನಮ್ಮ ಎದುರಾಳಿ ಎಂದಿಗೂ ಜೆಡಿಎಸ್‌ ಆಗಿರುತ್ತದೆ ಎಂದು ಚಿಕ್ಕಬಳ್ಳಾಪುರ ಶಾಸಕ ಡಾ. ಸುಧಾಕರ ಹೇಳಿದ್ದಾರೆ.

ಒಕ್ಕಲಿಗರ ಸಮುದಾಯ ಭವನದಲ್ಲಿ ಆಯೋಜಿಸಲಾಗಿದ್ದ ಕೃತಜ್ಞತಾ ಸಭೆಯಲ್ಲಿ ಮಾತನಾಡಿದ ಅವರು, ರಾಹುಲ್ ಗಾಂದಿ ಜೆಡಿಎಸ್ ಗೆ ಬೆಂಬಲ ನೀಡಲು ಸೂಚಿಸಿದ್ದರಿಂದ ನಾವು ಸುಮ್ಮನಾಗಿದ್ದೇವೆ. ಬಿಜೆಪಿ ಅಧಿಕಾರಕ್ಕೆ ಬರಬಾರದು ಎಂಬ ಉದ್ದೇಶದಿಂದ ಸಮ್ಮಿಶ್ರ ಸರಕಾರಕ್ಕೆ ಬೆಂಬಲ ನೀಡಲಾಗಿದೆ ಎಂದು ಹೇಳಿದ್ದಾರೆ.

ಸಚಿವ ಸಂಪುಟ ವಿಸ್ತರಣೆಯಲ್ಲಿ ಅಸಮಾಧಾನ ಹೊರ ಹಾಕಿರುವ ಅವರು, ಪಕ್ಷ ಯುವಕರಿಗೆ ಮಣೆ ಹಾಕುವ ಅಗತ್ಯವಿದೆ. ಪಕ್ಷದಲ್ಲಿ ಸಚಿವರನ್ನಾಗಿ ಆಯ್ಕೆ ಮಾಡಿರುವ ವಿಧಾನ ಎಷ್ಟು ಸರಿ ಎಂದು ಅವರು ಪ್ರಶ್ನಿಸಿದರು.

ಈ ಜಿಲ್ಲೆಯಿಂದ ಸಚಿವರಾಗಿರುವ ಶಿವಶಂಕರರೆಡ್ಡಿ ಜತೆ ನಾನೆಂದು ವೇದಿಕೆಯಲ್ಲಿ ಕುಳಿತುಕೊಳ್ಳುವುದಿಲ್ಲ ಆದರೆ ಅವರು ಕೈಗೊಳ್ಳುವ ಅಭಿವೃದ್ದಿ ಕೆಲಸಗಳಿಗೆ ಬೆಂಬಲ ನೀಡುತ್ತೇನೆ. ರಾಜಕೀಯವಾಗಿ ನೆಲೆಕಂಡಿರುವ ಹಿರಿಯರ ಮಕ್ಕಳಿಗೆ ಪಕ್ಷ ಮಣೆ ಹಾಕಿದೆ ಎಂದರು.

ಎಂ.ಬಿ.ಪಾಟೀಲ್ ಮನೆಯಲ್ಲಿನ ಸಭೆಯಲ್ಲಿ ಪಾಲ್ಗೊಂಡಿದ್ದ ಹಿನ್ನೆಲೆಯಲ್ಲಿ ಪಕ್ಷ ನನ್ನನ್ನು ತಪ್ಪು ತಿಳಿದುಕೊಂಡಿದೆ. ದೇಶದಲ್ಲಿ ಕಾಂಗ್ರೆಸ್‌ ಸ್ಥಿತಿ ಶೋಚನೀಯಕ್ಕೆ ತಲುಪಿದೆ. ಪಂಜಾಬ್‌ನಲ್ಲಿ ಮಾತ್ರ ಪಕ್ಷ ಆಡಳಿತದಲ್ಲಿದೆ. ಪಕ್ಷದ ಬಲವರ್ಧನೆ ಎಲ್ಲರ ಕರ್ತವ್ಯ. ರಾಜ್ಯದಲ್ಲಿ ಈ ನಿಟ್ಟಿನಲ್ಲಿ ಕೈಗೊಳ್ಳಬೇಕಾದ ಕಾರ್ಯಕ್ರಮಗಳ ಕುರಿತು ಜೂ.15ರಂದು 30 ಶಾಸಕರು ಚಿಂತನ ಮಂಥನ ಸಭೆ ನಡೆಸಲಿದ್ದೇವೆ ಎಂದು ಶಾಸಕರು ಹೇಳಿದರು.

ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಸತತ 2ನೇ ಬಾರಿ ಶಾಸಕನಾಗಿ ಆಯ್ಕೆಯಾದ ಉದಾಹರಣೆ ಇಲ್ಲ. ಈ ಬಾರಿ ಇತಿಹಾಸ ಸೃಷ್ಟಿಸಲಾಗಿದೆ. ಮುಂದಿನ ದಿನಗಳಲ್ಲಿ ಯಾರ ವಿರುದ್ದವೂ ರಾಜಕೀಯ ಜಿದ್ದನ್ನು ಸಾದಿಸುವುದಿಲ್ಲ. ಗ್ರಾಮೀಣ ಮತ್ತು ನಗರ ಪ್ರದೇಶದಲ್ಲಿ ಕ್ಷಿಪ್ರಗತಿಯಲ್ಲಿ ಅಭಿವೃದ್ದಿ ಕೆಲಸಗಳನ್ನು ಪ್ರಾರಂಬಿಸುತ್ತೇನೆ ಚಿಕ್ಕಬಳ್ಳಾಪುರ ಜನರಿಗೆ ಆಶ್ವಾಸನೆ ನೀಡಿರುವ ಎಲ್ಲ ಬರವಸೆ ಈಡೇರಿಸಲು ಬದ್ಧರಾಗಿರುವುದಾಗಿ ಡಾ. ಸುಧಾಕರ್‌ ಹೇಳಿದರು.

Comments are closed.