ಕರ್ನಾಟಕ

ಅಮ್ಮ ಭಗವಾನ್​ ಪಾದುಕೆಯನ್ನು ಸಚಿವ ಎನ್.ಮಹೇಶ್ ತನ್ನ ಮೈಗೆ ಸವರಿಕೊಂಡಿರುವ ವಿಡಿಯೋ ವೈರಲ್

Pinterest LinkedIn Tumblr

ಮೈಸೂರು: ಅಮ್ಮ ಭಗವಾನ್​ ಪಾದುಕೆಯನ್ನು ಸಚಿವ ಎನ್.ಮಹೇಶ್ ತನ್ನ ಮೈಗೆ ಸವರಿಕೊಂಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ಬಿಎಸ್​​ಪಿಯಿಂದ ಗೆದ್ದು ಸಮ್ಮಿಶ್ರ ಸರ್ಕಾರದಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿರಾಗಿರುವ ಎನ್.​ಮಹೇಶ್, ವಿಡಿಯೋದಲ್ಲಿ ಅಮ್ಮ ಭಗವಾನ್‌ ಅವರ ಚಪ್ಪಲಿಯನ್ನು ಮೈಮೇಲೆ ಸವರಿಕೊಳ್ಳುವ ಮೂಲಕ ಅಂಬೇಡ್ಕರ್ ಸಿದ್ಧಾಂತವನ್ನು ಗಾಳಿಗೆ ತೂರಿದ್ದಾರೆ ಎಂದು ಅವರ ಬೆಂಬಲಿಗರು ತೀವ್ರ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

ಅಂಬೇಡ್ಕರ್ ವಿಚಾರಧಾರೆಯನ್ನು ಊರೆಲ್ಲ ಹರಡಿ‌, ಅಂಬೇಡ್ಕರ್ ಸ್ವಾಭಿಮಾನ ಹರಾಜು ಹಾಕಿದ್ದಾರೆ. ಅಂಬೇಡ್ಕರ್ ಸ್ವಾಭಿಮಾನದ ಚಿಂತನೆಯನ್ನು ಸ್ವಾಮೀಜಿ ಅವರ ಚಪ್ಪಲಿ‌ ತಳಕ್ಕಿಟ್ಟಿದ್ದಾರೆ. ಅವರ ಘನತೆ ಕೆಡವಿದ್ದಾರೆ ಎಂದು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

Comments are closed.