ಕರ್ನಾಟಕ

ಈಜಲು ಸವಾಲ್ ಹಾಕಿ ನದಿಗೆ ಧುಮುಕಿದ ಯುವಕ ನಾಪತ್ತೆ

Pinterest LinkedIn Tumblr


ಮಂಡ್ಯ: ನೀರಿನ ಪ್ರವಾಹವಿದ್ದರೂ ಸರಿ ಈಜಿ ದಡ ಸೇರುತ್ತೇನೆ ಎಂದು ಸ್ನೇಹಿತನೊಂದಿಗೆ ಚಾಲೆಂಜ್​ ಹಾಕಿ ನೀರಿಗೆ ಹಾರಿದ ಯುವಕ ಪ್ರವಾಹದಲ್ಲಿ ಕೊಚ್ಚಿ ಹೋಗಿದ್ದಾನೆ.

ಹರಿಹರಪುರದ ಶಿವು ತನ್ನ ಸ್ನೇಹಿತನ ಜತೆ ತುಂಬಿ ಹರಿಯುತ್ತಿರುವ ಹೇಮಾವತಿ ನದಿ ನೋಡಲು ಕೆ.ಆರ್​.ಪೇಟೆ ಬಳಿ ಇರುವ ಹರಿಹರಪುರ ಬ್ರಿಜ್​ಗೆ ತೆರಳಿದ್ದ. ಅಲ್ಲಿ ಹೋದವನು ಸುಮ್ಮನಿರಲಾಗದೆ ಅಪಾಯ ಮಟ್ಟ ಮೀರಿ ಹರಿಯುತ್ತಿರುವ ಹೇಮೆಯಲ್ಲಿ ಈಜಿ ದಡ ಸೇರುತ್ತೇನೆ ನೋಡು ಎಂದು ಸ್ನೇಹಿತನ ಬಳಿ ಚಾಲೆಂಜ್​ ಮಾಡಿ ನೀರಿಗೆ ಧುಮುಕಿದ. ಆದರೆ, ನೀರಿಗೆ ಬಿದ್ದೊಡನೆ ಅವನು ಎಲ್ಲಿ ಹೋದ ಎಂದು ಕಾಣಿಸುತ್ತಿಲ್ಲ. ದೃಶ್ಯವನ್ನು ಸೇತುವೆ ಮೇಲೆ ನಿಂತ ಅವನ ಸ್ನೇಹಿತ ವಿಡಿಯೋ ಮಾಡಿದ್ದಾನೆ.

ಅಗ್ನಿಶಾಮಕದಳ ಸಿಬ್ಬಂದಿ ಶಿವುಗಾಗಿ ಹುಡುಕಾಟ ನಡೆಸಿದ್ದಾರೆ. ತಹಸೀಲ್ದಾರ್​ ಶಿವಮೂರ್ತಿ ಸ್ಥಳದಲ್ಲೇ ಮೊಕ್ಕಾಂ ಹೂಡಿದ್ದಾರೆ. ಶಿವು ಅವರಿಗೆ ಒಂದು ಗಂಡು, ಇನ್ನೊಂದು ಹೆಣ್ಣು ಮಗುವಿದ್ದು ಈಗ ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿದೆ.

Comments are closed.