ಕರ್ನಾಟಕ

ಕೆ.ಸಿ ವ್ಯಾಲಿ ಯೋಜನೆ ನೀರಿನ ಅವಾಂತರ: ಕೊಳಚೆ ನೀರು ಮಿಶ್ರಣವಾಗಿದ್ದೇ ವಿಷಕಾರಿ ನೊರೆಗೆ ಕಾರಣ

Pinterest LinkedIn Tumblr


ಬೆಂಗಳೂರು: ಕೆ.ಸಿ.ವ್ಯಾಲಿ ಯೋಜನೆಯಡಿ ಸಂಸ್ಕರಿಸಿ ಕೋಲಾರದತ್ತ ಹರಿಸಿದ ನೀರಿನಲ್ಲಿ ವಿಷಕಾರಿ ನೊರೆಯುಕ್ಕಲು ಕೊಳಚೆ ನೀರು ಮಿಶ್ರಣವಾಗಿದ್ದೇ ಕಾರಣ ಎಂಬುದು ಜಲಮಂಡಳಿಯ ಪರಿಶೀಲನೆಯಿಂದ ತಿಳಿದುಬಂದಿದೆ.

ಜಲಮಂಡಳಿಯು ಒಟ್ಟು 218 ದಶಲಕ್ಷ ಲೀಟರ್‌ ಸಾಮರ್ಥ್ಯ‌ದ ಮೂರು ಕೊಳಚೆ ನೀರು ಶುದ್ಧೀಕರಣ ಘಟಕಗಳನ್ನು (ಎಸ್‌ಟಿಪಿ) ಕೆಸಿ ವ್ಯಾಲಿ ಯೋಜನೆಯಡಿ ನಿರ್ಮಿಸಿದೆ. ಎಸ್‌ಟಿಪಿಗಳಲ್ಲಿ ದ್ವಿತೀಯ ಹಂತದಲ್ಲಿ ಸಂಸ್ಕರಣೆಯಾಗುವ ನೀರನ್ನು ಮುಂದಿರುವ ಕೋಡಿಗೆ ಹರಿಬಿಡಲಾಗುತ್ತಿದೆ. ಇದರ ಮಧ್ಯಭಾಗದಲ್ಲಿ ಸಣ್ಣ ನೀರಾವರಿ ಇಲಾಖೆಯು ಬೃಹತ್‌ ಪೈಪ್‌ ಅಳವಡಿಸಿದ್ದು, ಪ್ರತಿ ದಿನ 135 ದಶಲಕ್ಷ ಲೀಟರ್‌ ನೀರನ್ನು ಪಂಪ್‌ ಮಾಡಿ ಪೈಪ್‌ ಮೂಲಕ ಕೋಲಾರದ ಲಕ್ಷ್ಮಿಸಾಗರ ಕೆರೆಗೆ ಬಿಡಲಾಗುತ್ತಿದೆ.

ಸಂಸ್ಕರಿತ ನೀರು ಸಂಗ್ರಹಿಸಿರುವ ಟ್ಯಾಂಕ್‌ಗೆ ಕೊಳಚೆ ನೀರು ನುಗ್ಗದಂತೆ ನಿರ್ಮಿಸಿರುವ ಮಣ್ಣಿನ ಒಡ್ಡು ಅಬ್ಬರದ ಮಳೆಯಿಂದ ಒಡೆದಿದೆ. ಇದರಿಂದ ಸಂಸ್ಕರಿತ ನೀರಿಗೆ ಕೊಳಚೆ ಸೇರ್ಪಡೆಯಾಗಿದೆ. ಈ ನೀರನ್ನು ಸಣ್ಣ ನೀರಾವರಿ ಇಲಾಖೆಯು ಪೈಪ್‌ ಮೂಲಕ ಪಂಪ್‌ ಮಾಡಿ ಕೋಲಾರಕ್ಕೆ ಹರಿಸಿದಾಗ ಲಕ್ಷ್ಮೇಸಾಗರ ಕೆರೆಯಲ್ಲಿ ನೊರೆಯುಕ್ಕಿದೆ.

ಒಡ್ಡಿನ ದುರಸ್ತಿ

ಬುಧವಾರದ ಘಟನೆಯಿಂದ ಎಚ್ಚೆತ್ತುಕೊಂಡಿರುವ ಅಧಿಕಾರಿಗಳು ಸಂಸ್ಕರಿತ ನೀರಿನೊಂದಿಗೆ ಕೊಳಚೆ ನೀರು ಸೇರದಂತೆ ಮತ್ತೆ ಮಣ್ಣಿನ ಒಡ್ಡನ್ನು ಸರಿಪಡಿಸಿದ್ದಾರೆ. ಮತ್ತೊಮ್ಮೆ ಅಧಿಕಾರಿಗಳು ಸಂಸ್ಕರಿತ ನೀರನ್ನು ಪರೀಕ್ಷೆಗೆ ಒಳಪಡಿಸಿದ್ದು,ಯಾವುದೇ ಅಪಾಯವಿಲ್ಲ ಎಂದು ಖಚಿತಪಡಿಸಿಕೊಂಡಿದ್ದಾರೆ.

ಮಣ್ಣಿನ ತಡೆ ಏಕೆ?

ಕೋಡಿಯಲ್ಲಿ ಹರಿಯುವ ಕೊಳಚೆ ನೀರು ಯಾವ ಕ್ಷಣದಲ್ಲಾದರೂ ಸಂಸ್ಕರಣೆಗೊಂಡ ಟ್ಯಾಂಕ್‌ ನೀರನ್ನು ಸೇರಬಹುದಾದರೂ, ಇದರ ನಡುವೆ ಮಣ್ಣಿನ ತಡೆ ಮಾತ್ರ ನಿರ್ಮಿಸಲಾಗಿದೆ. ಸಿಮೆಂಟ್‌ನಿಂದ ತಡೆ ನಿರ್ಮಿಸಿದರೆ ಕಾನೂನು ಉಲ್ಲಂಘನೆಯಾಗುವ ಆತಂಕವಿರುವುದರಿಂದ ಮಣ್ಣಿನ ತಡೆ ನಿರ್ಮಿಸಲಾಗಿದೆ.
ಬೆಂಗಳೂರು: ನಗರದಲ್ಲಿ ಬಡವರು ಮತ್ತು ಅಗತ್ಯವಿರುವವರಿಗೆ ಆಹಾರ ಒದಗಿಸಲು ನೆರವಾಗುವ ನಿಟ್ಟಿನಲ್ಲಿ ತೆರೆಯಲಾಗಿರುವ ಕಮ್ಯುನಿಟಿ ಫ್ರಿಡ್ಜ್‌ಗಳು ಜನಪ್ರಿಯಗೊಳ್ಳುತ್ತಿವೆ.

ಬಿಟಿಎಂ ಲೇಔಟ್‌, ಬ್ರೂಕ್‌ ಫೀಲ್ಡ್‌, ಇಂದಿರಾನಗರ, ಕೋರಮಂಗಲ, ಬೆನ್ಸನ್‌ ಟೌನ್‌ಗಳಲ್ಲಿ ಕಮ್ಯುನಿಟಿ ಫ್ರಿಡ್ಜ್ ಇವೆ. ಹೆಚ್ಚುವರಿ ಆಹಾರ ಇದ್ದಲ್ಲಿ ಅದನ್ನು ಆ ಫ್ರಿಡ್ಜ್‌ನಲ್ಲಿಟ್ಟರೆ ಅದು ಹಸಿದವರ ಹೊಟ್ಟೆ ತಣಿಸುತ್ತದೆ. ದಿನಕ್ಕೆ ಕನಿಷ್ಠ 400 ಜನ ಈ ಫ್ರಿಡ್ಜ್‌ಗಳಿಂದ ಪ್ರಯೋಜನ ಪಡೆಯುತ್ತಿದ್ದಾರೆ.

ಬಿಟಿಎಂನಲ್ಲಿರುವ ಈ ಫ್ರಿಡ್ಜ್‌ನಿಂದ ಪ್ರತಿದಿನ ಬೆಳಗ್ಗೆ7-ರಾತ್ರಿ 9 ವರೆಗೆ 70-100 ಮಂದಿ ಆಹಾರ ಪಡೆಯುತ್ತಾರೆ. ಮನೆಯಲ್ಲಿ ಹೆಚ್ಚುವರಿ ಆಹಾರ ಇದ್ದಲ್ಲಿ ಅದನ್ನು ಚೆನ್ನಾಗಿ ಪ್ಯಾಕ್‌ ಮಾಡಿ ಅದರಲ್ಲಿ ಇಡುತ್ತಾರೆ ಎಂದು ಫ್ರಿಡ್ಜ್‌ ತೆರೆದಿರುವ ಪಬ್ಲಿಕ್‌ ಫೌಂಡೇಷನ್‌ ಟ್ರಸ್ಟಿ ಐಸಾ ಫಾತಿಮಾ ಜಾಸ್ಮಿನ್‌ ಹೇಳಿದ್ದಾರೆ.

ಹೆಚ್ಚುವರಿ ಊಟ ತಯಾರಿಸಿದ್ದಾಗ ಪಕ್ಕದ ಮನೆಯ ಮಹಿಳೆಯೊಬ್ಬರಿಗೆ ನೀಡುತ್ತಿದ್ದೆ. ಆ ಮಹಿಳೆ ಆ ಸ್ಥಳ ತೊರೆದು ಹೋದಾಗ ಹೆಚ್ಚುವರಿ ಊಟವನ್ನು ಯಾರಿಗಾದರೂ ನೀಡುವುದಕ್ಕೆ ಸುತ್ತಾಡಿದರು. ಆಗ ನಗರದಲ್ಲಿ ಬಹಳಷ್ಟು ಹಸಿದ ಹೊಟ್ಟೆಗಳಿದ್ದು, ಅವರಿಗೆ ಅನ್ನ ನೀಡಲು ಈ ಮಾರ್ಗ ಅನುಸರಿಸಬಹುದೆಂಬ ಯೋಚನೆ ಬಂತು. ಆದರೆ ಹಸಿದವರ ವ್ಯಕ್ತಿತ್ವದ ಘನತೆಗೆ ಕುಂದು ಬಾರದ ರೀತಿ ಪಬ್ಲಿಕ್‌ ಫ್ರಿಡ್ಜ್‌ ಮೂಲಕ ಆಹಾರ ಒದಗಿಸಬೇಕು ಎಂದು ಚಿಂತನೆ ನಡೆಸಿದೆ. ಬಳಿಕ ಸ್ಥಳೀಯ ನಿವಾಸಿಗಳು, ರೆಸ್ಟೋರೆಂಟ್‌ ಮಾಲೀಕರಲ್ಲೂ ಈ ಬಗ್ಗೆ ಮಾತನಾಡಿದೆ ಎಂದು ಜಾಸ್ಮಿನ್‌ ಹೇಳುತ್ತಾರೆ.

ಇಂದಿರಾನಗರದ ರೆಸ್ಟೋರೆಂಟ್‌ ಹೊರಗೂ ಎರಡು ಪಬ್ಲಿಕ್‌ ಫ್ರಿಡ್ಜ್‌ಗಳಿವೆ. ಸಿಬ್ಬಂದಿಗಾಗಿ ಮಾಡುವ ಫ್ರೆಶ್‌ ಆಹಾರವನ್ನೇ ಅದರಲ್ಲಿಡುತ್ತೇವೆ ಎಂದು ಬೈಬ್ಲೊಸ್‌ ರೆಸ್ಟೋರೆಂಟ್‌ ಮ್ಯಾನೇಜರ್‌ ನೀಲೇಶ್‌ ಬನ್ಸೊದೆ ಹೇಳಿದ್ದಾರೆ. ಕೋರಮಂಗಲದ ಕಾರ್ಟೂಸ್‌ ರೆಸ್ಟೋರೆಂಟ್‌ ಬಳಿ ಇಟ್ಟಿರುವ ಫ್ರಿಡ್ಜ್‌ನಿಂದಲೂ ದಿನದಲ್ಲಿ 30-40 ಮಂದಿ ಆಹಾರ ಪಡೆಯುತ್ತಾರೆ. ಯಾರಿಗಾದರೂ ಹಸಿವಾದವರಿಗೆ ಆಹಾರ ನೀಡಲು ಇದೊಂದು ಉತ್ತಮ ಸ್ಥಳವಾಗಿದೆ ಎಂದು ಕೋರಮಂಗಲದ ಗೃಹಿಣಿ ಪ್ರಣತಿ ಹೇಳಿದ್ದಾರೆ.

Comments are closed.