ಕರ್ನಾಟಕ

ನನ್ನ ಮಗ ಕುಮಾರಸ್ವಾಮಿ ನಂತರ ಮಾಧ್ಯಮಗಳು ಈಗ ನನ್ನ ಹಿಂದೆ ಬಿದ್ದಿವೆ: ದೇವೇಗೌಡ

Pinterest LinkedIn Tumblr


ಹೊಸದಿಲ್ಲಿ: ”ಮಾಧ್ಯಮಗಳ ಮೇಲೆ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರು ಕಿಡಿ ಕಾರಿದ್ದು, ಕುಮಾರಸ್ವಾಮಿ ಆಯ್ತು, ಈಗ ನನ್ನ ಹಿಂದೆ ಬಿದ್ದಿದ್ದಾರೆ” ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಸೋಮವಾರ ಸುದ್ದಿಗಾರರೊಂದಿಗೆ ಅನೌಪಚಾರಿಕವಾಗಿ ಮಾತನಾಡಿದ ಅವರು,”ಮುಂಬರುವ ಲೋಕಸಭೆ ಚುನಾವಣೆಗೆ ಸ್ಪರ್ಧೆ ಮಾಡಬೇಕೋ ಬೇಡವೋ, ಸ್ಪರ್ಧೆ ಮಾಡುವುದಾದರೆ ಎಲ್ಲಿಂದ ಸ್ಪರ್ಧೆ ಮಾಡಬೇಕು ಎಂಬ ಬಗ್ಗೆ ನಾನು ಇನ್ನೂ ಯೋಚನೆ ಮಾಡಿಯೇ ಇಲ್ಲವೆಂದ ಮೇಲೆ ತೀರ್ಮಾನದ ಪ್ರಶ್ನೆ ಎಲ್ಲಿಂದ ಬರುತ್ತದೆ,” ಎಂದು ಕೇಳಿದರು.

”ನಾನು ಹಾಸನದಿಂದ, ಮೈಸೂರಿನಿಂದ ಪ್ರಜ್ವಲ್‌ ರೇವಣ್ಣ ಸ್ಪರ್ಧೆ ಮಾಡುತ್ತಾರೆ ಎಂದು ಊಹಾಪೋಹದ ಸುದ್ದಿಗಳು ಮಾಧ್ಯಮಗಳಲ್ಲಿ ಬರುತ್ತಿವೆ. ಹಾಗೇನಾದರೂ ಇದ್ದರೆ ನಾನೇ ನಿಮ್ಮೆದುರು ಹೇಳುತ್ತೇನೆ,” ಎಂದು ಹೇಳಿದರು.

ಪ್ರತ್ಯೇಕ ರಾಜ್ಯದ ಬೇಡಿಕೆ ಪ್ರಶ್ನೆಗೆ,”ಇದೂ ಮಾಧ್ಯಮಗಳ ಸ್ಪಷ್ಟಿ. ನನ್ನ ಸ್ಪರ್ಧೆ ಮತ್ತು ಉತ್ತರ ಕರ್ನಾಟಕದ ಬಗ್ಗೆ ಮಾಧ್ಯಮಗಳೇ ವದಂತಿ ಹರಡುತ್ತಿವೆ,” ಎಂದು ಅಸಮಾಧಾನ ಹೊರಹಾಕಿದರು.

Comments are closed.