ಕರ್ನಾಟಕ

ಡಾ.ರಾಜ್​ಕುಮಾರ್’ರನ್ನು ವೀರಪ್ಪನ್​ ಅಪಹರಿಸಿದ್ದ ಪ್ರಕರಣ: 9 ಆರೋಪಿಗಳು ಖುಲಾಸೆ

Pinterest LinkedIn Tumblr

ಚೆನ್ನೈ: ಕಾಡುಗಳ್ಳ ವೀರಪ್ಪನ್ ವರನಟ ಡಾ. ರಾಜ್​ಕುಮಾರ್​ ಅವರನ್ನು​ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ತೀರ್ಪು ಹೊರಬಿದ್ದಿದ್ದು. ಎಲ್ಲಾ 9 ಆರೋಪಿಗಳನ್ನು ಖುಲಾಸೆಗೊಳಿಸಿ ಈರೋಡ್​ನ ಜಿಲ್ಲಾ ನ್ಯಾಯಾಲಯ ತೀರ್ಪು ಪ್ರಕಟಿಸಿದೆ.

ಆರೋಪ ಸಾಬೀತುಪಡಿಸವಲ್ಲಿ ಪ್ರಾಸಿಕ್ಯೂಷನ್​​ ವಿಫಲವಾದ ಕಾರಣ ಎಲ್ಲಾ ಆರೋಪಿಗಳನ್ನು ಖುಲಾಸೆಗೊಳಿಸಿ ಕೋರ್ಟ್​ತೀರ್ಪು ಪ್ರಕಟಿಸಿದೆ.

2000 ಇಸವಿಯ ಜುಲೈ 30 ರಂದು, ಗಾಜನೂರಿನ ತೋಟದ ಮನೆಯಿಂದ ಡಾ.ರಾಜ್ ಅವರನ್ನು, ವೀರಪ್ಪನ್​ಮತ್ತವರ ತಂಡ ಅಪಹರಿಸಿತ್ತು. 3 ತಿಂಗಳ ಕಾಲ ರಾಜ್​ ಅವರನ್ನು ಸತ್ಯಮಂಗಳಂ ಹಾಗೂ ಭವಾನಿ ಕಾಡಿನಲ್ಲಿ ಇರಿಸಿಕೊಳ್ಳಲಾಗಿತ್ತು.

ತಮಿಳು ಮ್ಯಾಗಜೀನ್​ನಕ್ಕೀರನ್​ನ ಪತ್ರಕರ್ತ ಆರ್​ಆರ್​​ ಗೋಪಾಲ್​ ನೇತೃತ್ವದಲ್ಲಿ 6 ಸುತ್ತುಗಳ ಮಾತುಕತೆಯ ಬಳಿಕ ಕೊನೆಗೂ 108 ದಿನಗಳ ಬಳಿಕ ರಾಜ್​ಕುಮಾರ್ ಅವರನ್ನು ಕಾಡುಗಳ್ಳ ವೀರಪ್ಪನ್ ಬಿಡುಗಡೆ ಮಾಡಿದ್ದ.

ಈ ಸೆನ್ಸೇಷನಲ್​​ಕೇಸ್​​ನಲ್ಲಿ ವೀರಪ್ಪನ್​ ಸೇರಿದಂತೆ 12 ಜನರ ವಿರುದ್ಧ ಪ್ರಕರಣ ದಾಖಲಾಗಿತ್ತು. ಅವರಲ್ಲಿ ವೀರಪ್ಪನ್​, ಸೇತುಕುಡಿ ಗೋವಿಂದನ್​ ಹಾಗೂ ರಂಗಸಾಮಿ ವಿಚಾರಣೆ ವೇಳೆಯೇ ಸಾವನ್ನಪ್ಪಿದ್ದಾರೆ.

Comments are closed.