ಕರ್ನಾಟಕ

ಚಿಕ್ಕಮಗಳೂರು, ಚಿಂತಾಮಣಿಯ ನಂತರ ಮಳವಳ್ಳಿಯಲ್ಲಿ ಕಡಿದ ತಲೆ ಠಾಣೆಗೆ ತಂದ ರಕ್ಕಸ

Pinterest LinkedIn Tumblr


ಮಂಡ್ಯ: ಚಿಕ್ಕಮಗಳೂರು, ಚಿಂತಾಮಣಿಯಲ್ಲಿ ಪತ್ನಿಯರ ರುಂಡಗಳನ್ನು ಕತ್ತರಿಸಿ ಠಾಣೆಗೆ ತಂದ ಘಟನೆ ಬೆನ್ನಲ್ಲೇ ಮಳವಳ್ಳಿಯ ಚಿಕ್ಕೆಬಾಗಿಲು ಗ್ರಾಮದಲ್ಲಿ ವ್ಯಕ್ತಿಯೊಬ್ಬ ಸ್ನೇಹಿತನ ರುಂಡವನ್ನು ಚೆಂಡಾಡಿ ಠಾಣೆಗೆ ತಂದ ಭೀಭತ್ಸ ಘಟನೆ ಶನಿವಾರ ನಡೆದಿದೆ.

ಗಿರೀಶ್‌ ಎಂಬ 25 ವರ್ಷದ ಯುವಕ ಹತ್ಯೆಗೀಡಾಗಿದ್ದು , ಆರೋಪಿ ಪಶುಪತಿ ಹತ್ಯೆ ಮಾಡಿದ ವ್ಯಕ್ತಿ . ಇಬ್ಬರೂ ಅಕ್ಕ ಪಕ್ಕದ ನಿವಾಸಿಗಳೆಂದು ತಿಳಿದು ಬಂದಿದೆ.

ತಾಯಿಗೆ ಬಯ್ದಿದ್ದಾನೆ ಎಂಬ ಕಾರಣಕ್ಕೆ ಮನೆ ಬಳಿಗೆ ಬಂದು ಬೇರೇಡೆ ಕರೆದೊಯ್ದು ಬರ್ಬರವಾಗಿ ಹತ್ಯೆಗೈದಿದ್ದಾನೆ.

ಹತ್ಯೆಗೈದ ಬಳಿಕ ರುಂಡ ಹಿಡಿದುಕೊಂಡು ಬೈಕ್‌ ಏರಿ 20 ಕಿ.ಮೀ ದೂರದಲ್ಲಿರುವ ಬೆಳಕವಾಡಿ ಠಾಣೆಗೆ ಪಶುಪತಿ ಬಂದಿದ್ದಾನೆ. ಪೊಲೀಸರೇ ದೃಶ್ಯವನ್ನು ಕಂಡು ಬೆಚ್ಚಿ ಬಿದ್ದಿದ್ದಾರೆ.

ಕೂಡಲೇ ಪ್ರಕರಣ ದಾಖಲಿಸಿಕೊಂಡು ಹತ್ಯೆಗೈದ ಸ್ಥಳ ಮಹಜರು ನಡೆಸಿದ್ದಾರೆ.

Comments are closed.