ಕರ್ನಾಟಕ

ಬಹಿರ್ದೆಸೆಗೆ ತೆರಳಿದ್ದ ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರ

Pinterest LinkedIn Tumblr


ಗದಗ: ಬಯಲು ಶೌಚ ಮುಕ್ತ ಭಾರತದ ಕನಸು ಇನ್ನೂ ನನಸಾಗಿಲ್ಲ ಎನ್ನುವುದಕ್ಕೆ ಸಾಕ್ಷಿಯಾಗಿ ಬಹಿರ್ದೆಸೆಗೆಂದು ಜಮೀನಿಗೆ ತೆರಳಿದ್ದ 45 ವರ್ಷ ಪ್ರಾಯದ ಮಹಿಳೆಯ ಮೇಲೆ 21 ವರ್ಷ ಪ್ರಾಯದ ಕಾಮಾಂಧ ಯುವಕರಿಬ್ಬರು ಗ್ಯಾಂಗ್‌ರೇಪ್‌ ನೆಡಸಿದ ಹೇಯ ಘಟನೆ ಸೋಮವಾರ ಸಂಜೆ ಶಿರಹಟ್ಟಿಯಲ್ಲಿ ನಡೆದಿದೆ.

ಮಂಜುನಾಥ್‌ (21)ಮತ್ತು ರಂಗೇಶ್‌ (21) ಎನ್ನುವ ಕಾಮುಕರಿಬ್ಬರು ಮಹಿಳೆಯನ್ನು ಜಮೀನಿನ ನಿರ್ಜನ ಪ್ರದೇಶಕ್ಕೆ ಎಳೆದೊಯ್ದು ಕೃತ್ಯ ಎಸಗಿದ್ದಾರೆ.

ಘಟನೆ ಬಳಿಕ ಕಾಮುಕರಿಬ್ಬರು ಪರಾರಿಯಾಗಿದ್ದಾರೆ. ಸಂತ್ರಸ್ತ ಮಹಿಳೆ ಶಿರಹಟ್ಟಿ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದು, ಪೊಲೀಸರು ಆರೋಪಿಗಳಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

Comments are closed.