ಬೆಳಗಾವಿ: ರಾಜ್ಯದಲ್ಲಿ ರೈತರ ಸಾಲ ವಸೂಲಿಗೆ ಬ್ಯಾಂಕ್ ನೋಟಿಸ್ ನೀಡಬಾರದು ಎಂದು ಸಿಎಂ ಹೆಚ್ಡಿಕೆ ಖಡಕ್ ಆದೇಶ ಕೊಟ್ಟಿದ್ದಾರೆ. ಆದರೂ ಆ್ಯಕ್ಸಿಸ್ ಬ್ಯಾಂಕ್, ಸರ್ಕಾರದ ಆದೇಶಕ್ಕೆ ಬೆಲೆಯೇ ಕೊಟ್ಟಿಲ್ಲ. ಬೆಳಗಾವಿಯ ರೈತರಿಗೆ ದೂರದ ಕೊಲ್ಕತ್ತಾ ಹೈಕೋರ್ಟ್ ಮೂಲಕ ನೋಟಿಸ್ ನೀಡಿದೆ. ಅಷ್ಟಕ್ಕೂ ಬೆಳಗಾವಿಗೂ, ಪಶ್ಚಿಮ ಬಂಗಳಕ್ಕೂ ಏನ್ ಸಂಬಂಧ ಅಂತಿರಾ? ಇಲ್ಲಿದೆ ವಿವರ.
ಬೆಳಗಾವಿ ಜಿಲ್ಲೆಯ ಸವದತ್ತಿ, ರಾಮದುರ್ಗ ಹಾಗೂ ಬೈಲಹೊಂಗಲದ 25ಕ್ಕೂ ಹೆಚ್ಚು ರೈತರಿಗೆ ಆ್ಯಕ್ಸಿಸ್ ಬ್ಯಾಂಕ್ ಬಿಗ್ ಶಾಕ್ ನೀಡಿದೆ. ರಾಜ್ಯ ಸರ್ಕಾರ ಇತ್ತೀಚೆಗೆ ರೈತರ ಸಾಲಮನ್ನಾ ಮಾಡಿ ಆದೇಶ ಹೊರಡಿಸಿದೆ. ಆದರೂ ಬೆಳಗಾವಿಯ ಆ್ಯಕ್ಸಿಸ್ ಬ್ಯಾಂಕ್ ಸರ್ಕಾರದ ಆದೇಶಕ್ಕೆ ಸವಾಲ್ ಹಾಕಿದೆ. ಸಾಲ ಕಟ್ಟದ ರೈತರಿಗೆ ಪಶ್ಚಿಮ ಬಂಗಾಳದ ಕೊಲ್ಕತ್ತಾ ಕೋರ್ಟ್ನಿಂದ ವಾರೆಂಟ್ ನೋಟಿಸ್ ಜಾರಿ ಮಾಡಿಸಿದೆ. ಇದರಿಂದ ರೊಚ್ಚಿಗೆದ್ದ ರೈತರು ಬೆಳಗಾವಿಯ ಬೈಲಹೊಂಗಲ ಬ್ರಾಂಚ್ಗೆ ಮುತ್ತಿಗೆ ಹಾಕಿ ಮ್ಯಾನೇಜರ್ಗೆ ತರಾಟೆ ತೆಗೆದುಕೊಂಡರು.
ಈ ಹಿಂದೆಯೂ ಆ್ಯಕ್ಸಿಸ್ ಬ್ಯಾಂಕ್, ಸಾಲ ಮರುಪಾವತಿಸುವಂತೆ ರೈತರಿಗೆ ನೋಟಿಸ್ ನೀಡಿತ್ತು. ಈಗ ಚೆಕ್ ಬೌನ್ಸ್ ಕೇಸ್ ದಾಖಲಿಸಿ ಕೋಲ್ಕತ್ತಾ ಮ್ಯಾಜಿಸ್ಟ್ರೇಟ್ ಕೋರ್ಟ್ ಮೂಲಕ ರೈತರಿಗೆ ನೋಟಿಸ್ ಕೊಡಿಸಿದೆ.
ಸಾಲಮನ್ನಾಕ್ಕೆ ಬ್ಯಾಂಕ್ಗಳು ಎಳೆದಾಡಿಸುತ್ತಿವೆ. ದೋಸ್ತಿ ಸರ್ಕಾರ ದುಡ್ಡನ್ನೂ ಕಟ್ಟುತ್ತಿಲ್ಲ. ಹೀಗಾಗಿ ರೈತರ ಗೋಳೂ ತಪ್ಪಿಲ್ಲ, ಇದೆನ್ನೆಲ್ಲಾ ನೋಡಿದ ಕುಮಾರಸ್ವಾಮಿ ಬ್ಯಾಂಕ್ಗಳ ಜೊತೆ ಮಾತಾಡ್ತೇನೆ ಎಂದಿದ್ದಾರೆ. ಅದು ಯಾವಾಗ ಮಾತನಾಡುತ್ತಾರೋ.. ಅದೇನು ಮಾಡುತ್ತಾರೋ ನೋಡಬೇಕು.
Comments are closed.