ಬೆಂಗಳೂರು: ಪ್ರತ್ಯೇಕ ಲಿಂಗಾಯತ ಧರ್ಮದ ಕುರಿತು ವಾಸ್ತವಿಕ ಸಂಗತಿ ಅರ್ಥಮಾಡಿಕೊಂಡು ಸಚಿವ ಡಿಕೆ ಶಿವಕುಮಾರ್ ಅಭಿಪ್ರಾಯ ನೀಡಿದ್ದಾರೆ. ಇದರಲ್ಲಿ ನನಗೆ ಯಾವುದೇ ರಾಜಕೀಯ ಕಾಣಿಸುತ್ತಿಲ್ಲ ಎಂದು ವಿಪಕ್ಷ ನಾಯಕ ಬಿಎಸ್ ಯಡಿಯೂರಪ್ಪ ತಿಳಿಸಿದ್ದಾರೆ.
ಈ ಹಿಂದಿನ ಕಾಂಗ್ರೆಸ್ ಸರ್ಕಾರ ಪ್ರತ್ಯೇಕ ಲಿಂಗಾಯತ ಧರ್ಮ ವಿಚಾರದಲ್ಲಿ ತಪ್ಪು ಮಾಡಿತು ಎಂದು ಈಗಲಾದರೂ ಸಚಿವರಿಗೆ ಮನವರಿಕೆಯಾಗಿದೆ. ಅವರ ಹೇಳಿಕೆಯನ್ನು ನಾವು ಸ್ವಾಗತಿಸಬೇಕು. ಅದನ್ನು ಬಿಟ್ಟು ಟೀಕೆ, ಟಿಪ್ಪಣಿ ಸಲ್ಲದು ಎಂದರು.
ಡಿಕೆ ಶಿವಕುಮಾರ್ ಹೇಳಿಕೆಗೆ ಅವರದೇ ಪಕ್ಷದ ನಾಯಕರು ಟೀಕೆಗಳು ವ್ಯಕ್ತಪಡಿಸುತ್ತಿದ್ದಾರೆ. ಅವರ ಹೇಳಿಕೆಗೆ ಬಗ್ಗೆ ವಿರೋಧ ವ್ಯಕ್ತಪಡಿಸುವುದು ಯಾರಿಗೂ ಶೋಭೆ ತರುವುದಿಲ್ಲ. ಅಲ್ಲದೇ, ಈ ವಿಷಯದಲ್ಲಿ ಶಿವಕುಮಾರ್ ನಿಜ ಅರಿತು ಮಾತನಾಡುತ್ತಿದ್ದಾರೆ ಎಂದು ನನಗೆ ಅನಿಸುತ್ತಿಲ್ಲ ಎಂದರು.
ಲಿಂಗಾಯತ ಮುಖಂಡ ಎಂದೇ ಬಿಂಬಿತವಾಗಿದ್ದ ಬಿಜೆಪಿ ನಾಯಕ ಬಿಎಸ್ ಯಡಿಯೂರಪ್ಪ ಪ್ರತ್ಯೇಕ ಲಿಂಗಾಯತ ಧರ್ಮ ವಿಚಾರಕ್ಕೆ ಮೊದಲಿನಿಂದಲೂ ವಿರೋಧ ವ್ಯಕ್ತಪಡಿಸಿದ್ದರು.
ಆತ್ಮಸಾಕ್ಷಿಯಾಗಿ ಮಾತನಾಡಿದ್ದೇನೆ, ನನ್ನ ಹೇಳಿಕೆಗೆ ನಾನು ಬದ್ದ ; ಡಿ.ಕೆ.ಶಿವಕುಮಾರ್
ಯೂಟರ್ನ್ ಹೊಡೆದ ಬಸವರಾಜ್ ಹೊರಟ್ಟಿ
ಲಿಂಗಾಯತ ಪ್ರತ್ಯೇಕ ಧರ್ಮದ ವಿಚಾರವಾಗಿ ಮತ್ತೆ ವಾದ ವಿವಾದಗಳು ಹುಟ್ಟಿಕೊಂಡಿದ್ದು, ಪಕ್ಷದ ಶಾಸಕರ ನಡುವೆ ಈಗ ಭಿನ್ನಭಿಪ್ರಾಯಗಳು ತಲೆದೂಗಿದೆ. ಇನ್ನು ಈ ವಿಚಾರ ಕುರಿತು ಪ್ರತಿಕ್ರಿಯೆ ನೀಡಲು ಪ್ರತ್ಯೇಕ ಲಿಂಗಾಯತ ಧರ್ಮ ಹೋರಾಟ ಸಮಿತಿ ಅಧ್ಯಕ್ಷ ರಾಗಿದ್ದ ಬಸವರಾಜ ಹೊರಟ್ಟಿ ನಿರಾಕರಿಸಿದ್ದಾರೆ.
ಈ ಹಿಂದೆ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದ ಮೈತ್ರಿ ಸರ್ಕಾರದ ಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿ, ಡಿಕೆಶಿ ಹೇಳಿಕೆಯಿಂದ ಹೋರಾಟಕ್ಕೆ ಯಾವುದೇ ಹಿನ್ನಡೆಯಾಗಿಲ್ಲ. ಈ ಕುರಿತು ಈಗಾಗಲೇ ರಾಜ್ಯದಿಂದ ಕೇಂದ್ರಕ್ಕೆ ಶಿಫಾರಸ್ಸು ಕಳುಹಿಸಲಾಗಿದ್ದು, ಈ ವಿಚಾರ ಕೇಂದ್ರ ಸರ್ಕಾದ ಮುಂದೆ ಇದೆ.
ಈ ಸಮಯದಲ್ಲಿ ಈ ರೀತಿಯ ಹೇಳಿಕೆ ನೀಡಬಾರದಾಗಿತ್ತು. ನಾನು ಒಂದು ಸಮಯದಲ್ಲಿ ಮುಂಚೂಣಿಯಲ್ಲಿದ್ದೆ, ಈಗ ನಾನು ಮುಂಚೂಣಿ ವಹಿಸಿಕೊಂಡಿಲ್ಲ. ಈ ಕುರಿತು ಹೆಚ್ಚಿನ ವಿಷಯವಾಗಿ ವಿನಯ ಕುಲಕರ್ಣಿ ಮತ್ತು ಎಮ್.ಬಿ. ಪಾಟೀಲ್ ಅವರನ್ನು ಕೇಳಿ ಎಂದರು
Comments are closed.