ಮುಂಬೈ

ವಿವಾಹಿತ ಮಹಿಳೆಯ ಫೋನ್ ನಂಬರ್ ಕೇಳಿದ್ದಕ್ಕೆ ವ್ಯಕ್ತಿಯ ಥಳಿಸಿ ಕೊಲೆ!

Pinterest LinkedIn Tumblr


ಮುಂಬೈ: ವಿವಾಹಿತ ಮಹಿಳೆಯ ಫೋನ್ ನಂಬರ್ ಕೇಳಿದ್ದಕ್ಕೆ 38 ವರ್ಷದ ವ್ಯಕ್ತಿಯನ್ನು ಥಳಿಸಿ ಸಾಯಿಸಿದ ಅಮಾನವೀಯ ಕೃತ್ಯ ಮುಂಬೈನ ತಿಲಕನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಮೃತನನ್ನು ರಾಕೇಶ್ ಶಿಂಧೆ ಎಂದು ಗುರುತಿಸಲಾಗಿದ್ದು, ನೆರೆಮನೆಯಲ್ಲಿ ವಾಸವಾಗಿದ್ದ ಯಶವಂತ (35) ಮತ್ತು ಮೀನಾ (32) ದಂಪತಿ ಆತನನ್ನು ಸಾಯಿಸಿದ್ದಾರೆ ಎನ್ನಲಾಗುತ್ತಿದೆ. ಸೋಮವಾರ ದಿನ ಚೆಂಬೂರಿನ ಕೃಷ್ಣ ಮೆನನ್ ನಗರದಲ್ಲಿ ಈ ಕೃತ್ಯ ನಡೆದಿದೆ.

ಘಟನೆಯ ವಿವರ:

ಸೋಮವಾರ ಬೆಳಿಗ್ಗೆ ಬಲಿಪಶು ರಾಕೇಶ್ ಶಿಂಧೆ ಯಶವಂತನ ಮನೆಗೆ ಹೋಗಿ ಆತನ ಪತ್ನಿ ಮೀನಾ ಬಳಿ ನಿನ್ನ ಫೋನ್ ನಂಬರ್ ಕೊಡೆಂದು ಕೇಳಿದ್ದಾನೆ. ಅದಕ್ಕವಳು ನಿರಾಕರಿಸಿದ್ದಾಳೆ. ತುರ್ತು ಕೆಲಸದ ನಿಮಿತ್ತ ಪುಣೆಗೆ ಹೋಗಿದ್ದ ಪತಿ ಮಧ್ಯಾಹ್ನ ಬಂದ ಬಳಿಕ ನಡೆದ ವಿಷಯವನ್ನಾಕೆ ವಿವರಿಸಿದ್ದಾಳೆ.

ಬಳಿಕ ದಂಪತಿ ರಾಕೇಶ್ ಶಿಂಧೆ ಮನೆಗೆ ನುಗ್ಗಿ, ಮನಬಂದಂತೆ ಬೈದು , ಥಳಿಸಿದ್ದಾರೆ. ಮೀನಾ ಆತನ ಕಾಲುಗಳನ್ನು ಕಟ್ಟಿ ಹಿಡಿದುಕೊಂಡರೆ ಯಶವಂತ ಹಲ್ಲೆ ನಡೆಸಿದ್ದಾನೆ. ಯಶವಂತನ ಮೊಣಕೈ ರಾಕೇಶ್ ಎದೆಗೆ ಜೋರಾಗಿ ಗುದ್ದಿದ ಪರಿಣಾಮ ಆತ ಸ್ಥಳದಲ್ಲೇ ಮೃತ ಪಟ್ಟಿದ್ದಾನೆ, ಎಂದು ಪೊಲೀಸರು ತಿಳಿಸಿದ್ದಾರೆ.

ಮೃತನ ದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ವರದಿ ಬಂದ ಬಳಿಕವಷ್ಟೇ ಆತನ ಸಾವಿಗೆ ನಿಖರ ಕಾರಣ ತಿಳಿದು ಬರಲಿದೆ.

Comments are closed.