ಮುಂಬೈ

ಯೋಗಿ ಆದಿತ್ಯನಾಥ್‌ ಮುಖಕ್ಕೆ ಅವರ ಪಾದರಕ್ಷೆಯಿಂದಲೇ ಹೊಡೆದು ಬಿಡೋಣ ಎಂದು ಅನ್ನಿಸಿತು: ಉದ್ಧವ್‌

Pinterest LinkedIn Tumblr

ಮುಂಬಯಿ : ಪಾಲ್‌ಘರ್‌ ಕ್ಷೇತ್ರಕ್ಕೆ ಈಚೆಗೆ ಬಂದಿದ್ದ ಸಂದರ್ಭದಲ್ಲಿ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಅವರು ಪಾದರಕ್ಷೆ ತೊಟ್ಟುಕೊಂಡೇ ಮರಾಠಾ ದೊರೆ, ಯೋಧ ಛತ್ರಪತಿ ಶಿವಾಜಿ ಅವರ ಪ್ರತಿಮೆಗೆ ಹಾರಾರ್ಪಣೆ ಮಾಡುತ್ತಿದ್ದುದನ್ನು ಕಂಡಾಗ ಅವರ ಅದೇ ಪಾದರಕ್ಷೆಯಿಂದ ಅವರ ಮುಖಕ್ಕೆ ಹೊಡೆದು ಬಿಡೋಣ ಎಂದು ಅನ್ನಿಸಿತು ಎಂಬುದಾಗಿ ಶಿವಸೇನೆಯ ಮುಖ್ಯಸ್ಥ ಉದ್ಧವ್‌ ಠಾಕ್ರೆ ತಮ್ಮ ಸಾಮ್ನಾ ಪತ್ರಿಕೆಯಲ್ಲಿ ಬರೆದಿದ್ದಾರೆ.

“ನನ್ನ ಪ್ರಕಾರ ಆದಿತ್ಯನಾಥ್‌ ಒಬ್ಬ ಯೋಗಿ ಅಲ್ಲ; ಅವರೊಬ್ಬ ಭೋಗಿ. ಅವರು ನಿಜಕ್ಕೂ ಯೋಗಿ ಆಗಿದ್ದಿದ್ದರೆ ಎಲ್ಲವನ್ನೂ ತೊರೆದು ಗುಹೆಯಲ್ಲಿ ಕುಳಿತುಕೊಳ್ಳಬೇಕಿತ್ತು. ಆದರೆ ಅವರು ಹೋಗಿ ಮುಖ್ಯಮಂತ್ರಿ ಕುರ್ಚಿಯಲ್ಲಿ ಕುಳಿತಿದ್ದಾರೆ’ ಎಂದು ಉದ್ಧವ್‌ ಬರೆದಿದ್ದಾರೆ.

ಮಹಾರಾಷ್ಟ್ರದಲ್ಲಿ ಶಿವಸೇನೆಯ ಮಾಜಿ ಮಿತ್ರ ಪಕ್ಷವಾಗಿರುವ ಬಿಜೆಪಿ ವಿರುದ್ಧ ಹರಿಹಾಯ್ದ ಉದ್ಧವ್‌, “ಇವತ್ತು ಬಿಜೆಪಿ ತನ್ನ ಎದುರಿಗೆ ಬರುವ ಯಾರನ್ನೇ ಆದರೂ ಇರಿದು ಕೊಲ್ಲುವ ಹುಚ್ಚ ಕೊಲೆಗಡುಕನಂತಾಗಿದೆ’ ಎಂದು ಟೀಕಿಸಿದರು.

Comments are closed.