ಮುಂಬೈ

ಜೈಲಿನಲ್ಲಿ ಭೂಗತ ಪಾತಕಿ ಮುನ್ನಾ ಬಜರಂಗಿ ಹತ್ಯೆ

Pinterest LinkedIn Tumblr


ಮುಂಬೈ: ಕುಖ್ಯಾತ ಭೂಗತ ಪಾತಕಿ ಮುನ್ನಾ ಬಜರಂಗಿಯನ್ನು ಜೈಲಿನೊಳಗೆ ಗುಂಡು ಹೊಡೆದು ಹತ್ಯೆಗೈದಿರುವ ಘಟನೆ ಉತ್ತರಪ್ರದೇಶದ ಬಾಘ್ ಪತ್ ಜೈಲಿನಲ್ಲಿ ನಡೆದಿದೆ ಎಂದು ಎಎನ್ ಐ ವರದಿ ಮಾಡಿದೆ.

ಪಾತಕಿ ಬಜರಂಗಿಯನ್ನು ಸೋಮವಾರ ಬೆಳಗ್ಗೆ ನ್ಯಾಯಾಲಯಕ್ಕೆ ಹಾಜರುಪಡಿಸಬೇಕಾಗಿತ್ತು. ಇಂದು ಬೆಳಗ್ಗೆ 6.30ರ ಹೊತ್ತಿಗೆ ಮತ್ತೊಂದು ಗ್ಯಾಂಗ್ ನ ಆರೋಪಿ ಸುನೀಲ್ ಎಂಬಾತ ಜೈಲಿನೊಳಗೆ ಗುಂಡು ಹೊಡೆದು ಹತ್ಯೆಗೈದಿರುವುದಾಗಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಭಾನುವಾರ ಬಜರಂಗಿಯನ್ನು ಝಾನ್ಸಿ ಜೈಲಿನಿಂದ ಬಾಘ್ ಪತ್ ಜೈಲಿಗೆ ಸ್ಥಳಾಂತರಿಸಲಾಗಿತ್ತು. ಬಿಜೆಪಿ ಮುಖಂಡ ಕೃಷ್ಣಾನಂದ ರಾಯ್ ಅವರನ್ನು ಹತ್ಯೆಗೈದ ಪ್ರಕರಣದಲ್ಲಿ ಪಾತಕಿ ಮುನ್ನಾನನ್ನು ಪೊಲೀಸರು ಬಂಧಿಸಿದ್ದರು.

ಕೋರ್ಟ್ ಗೆ ಕರೆದೊಯ್ಯುವ ಮುನ್ನವೇ ಜೈಲಿನೊಳಗೆ ಮುನ್ನಾನನ್ನು ಹತ್ಯೆಗೈಯಲಾಗಿದೆ. ಘಟನೆ ಬಗ್ಗೆ ನ್ಯಾಯಾಂಗ ತನಿಖೆಗೆ ಆದೇಶಿಸಿದ್ದು, ಜೈಲರ್ ಅನ್ನು ಅಮಾನತಿನಲ್ಲಿಡಲಾಗಿದೆ. ಜೈಲಿನೊಳಗೆ ಇಂತಹೇ ಘಟನೆ ನಡೆಯುವುದು ತುಂಬಾ ಗಂಭೀರವಾದ ಪ್ರಕರಣ. ಈ ಬಗ್ಗೆ ಕೂಲಂಕಷ ತನಿಖೆ ನಡೆಸಿ, ಕಠಿಣ ಕ್ರಮ ಕೈಗೊಳ್ಳಲು ಆದೇಶ ನೀಡಿರುವುದಾಗಿ ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ತಿಳಿಸಿದ್ದಾರೆ.

Comments are closed.