ಮನೋರಂಜನೆ

ದುನಿಯಾ ವಿಜಿಯ 2ನೇ ಪತ್ನಿ ದುಡ್ಡು, ಚಿನ್ನ ದೋಚಿ ನಾಪತ್ತೆ!

Pinterest LinkedIn Tumblr


ಹಲ್ಲೆ ಪ್ರಕರಣದಲ್ಲಿ ಜೈಲು ಸೇರಿರುವ ನಟ ದುನಿಯಾ ವಿಜಯ್,​ ಇಂದಾದರೂ ತಮಗೆ ಜಾಮೀನು ಸಿಗುತ್ತದೆಯಾ ಎಂಬ ಆತಂಕದಲ್ಲಿದ್ದಾರೆ. ಈ ನಡುವೆ ಅವರಿಗೆ ಹೊಸ ಶಾಕ್​ವೊಂದನ್ನು ಅವರ ಎರಡನೇ ಹೆಂಡತಿ ಕೀರ್ತಿ ನೀಡಿದ್ದಾರೆ.

ದುನಿಯಾ ವಿಜಯ್​ ಜೈಲು ಪಾಲಾಗುತ್ತಿದ್ದಂತೆ ಮಕ್ಕಳನ್ನು ಹುಡುಕಿಕೊಂಡು ಬಂದ ಮೊದಲ ಹೆಂಡತಿ ನಾಗರತ್ನ ಮೇಲೆ ಎರಡನೇ ಹೆಂಡತಿ ಕೀರ್ತಿ ಹಲ್ಲೆ ನಡೆಸಿದ್ದರು. ಈ ಸಂಬಂಧ ನಾಗರತ್ನ ಗಿರಿನಗರ ಠಾಣೆಯಲ್ಲಿ ಎಫ್​ಐಆರ್​ ಕೂಡ ದಾಖಲಿಸಿದ್ದರು.

ಮಾರುತಿ ಗೌಡ ಹಲ್ಲೆ ಪ್ರಕರಣ, ಹೆಂಡತಿಯರ ಜಗಳ, ಬೇಲ್​ ನಿರಾಕರಣೆ ನಡೆಸುತ್ತಿರುವ ವೇಳೆಯೇ ಕೀರ್ತಿ, ದುನಿಯಾ ವಿಜಯ್​ ಮನೆಯಲ್ಲಿದ್ದ ಹಣ, ಚಿನ್ನ ತೆಗೆದುಕೊಂಡು ನಾಪತ್ತೆಯಾಗಿದ್ದಾರೆ ಎನ್ನಲಾಗಿದೆ.

ನಾಗರತ್ನ ಅವರೊಂದಿಗೆ ಜಗಳವಾದ ಬಳಿಕ ಕಳೆದ ನಾಲ್ಕು ದಿನಗಳಿಂದ ಕೀರ್ತಿ ಗೌಡ ಮನೆಗೆ ಬಂದಿಲ್ಲ. ಅಲ್ಲದೇ, ಮನೆಯಲ್ಲಿರುವ 1 ಲಕ್ಷ ಹಣ, ಬೆಲೆ ಬಾಳುವ ಚಿನ್ನಾಭರಣ ಕೂಡ ನಾಪತ್ತೆಯಾಗಿದೆ. ಕೀರ್ತಿಗಾಗಿ ವಿಜಿ ಕುಟುಂಬ ಕೂಡ ಹುಡುಕಾಟ ನಡೆಸುತ್ತಿದೆ.

ಕಳೆದ ನಾಲ್ಕು ದಿನಗಳಿಂದ ಕೀರ್ತಿ ಹುಡುಕಾಟ ನಡೆಸಿದ ಕುಟುಂಬಕ್ಕೆ ಆಕೆ ಮೈಸೂರಿನ ಸಂಬಂಧಿಕರ ಮನೆಯಲ್ಲಿದ್ದಾಳೆ ಎಂಬ ಮಾಹಿತಿ ಲಭ್ಯವಾಗಿದೆ. ಈ ಕುರಿತು ಮಾತನಾಡಿದ ಕೀರ್ತಿ, ಘಟನೆಯಿಂದ ಬೇಸತ್ತು ಸಂಬಂಧಿಕರ ಮನೆಗೆ ಹೋಗಿರುವುದಾಗಿ ಕೀರ್ತಿಗೌಡ ತಿಳಿಸಿದ್ದಾರೆ. ಅಲ್ಲದೇ ವಿಜಯ್​ಗೆ ಜಾಮೀನು ಸಿಕ್ಕ ಬಳಿಕ ಬೆಂಗಳೂರಿಗೆ ಬರುವುದಾಗಿ ತಿಳಿಸಿದ್ದಾರೆ.

ಕೀರ್ತಿ ಘಟನೆಯಿಂದ ಬೇಸರಗೊಂಡು ಮನೆತೊರೆದಿದ್ದರೇ ಮನೆಯಲ್ಲಿದ್ದ ದುಡ್ಡ ,ಒಡವೆ ತೆಗೆದುಕೊಂಡು ಹೋಗುವ ಅವಶ್ಯಕತೆ ಏನಿತ್ತು ಎಂದು ಆರೋಪ ಕೇಳಿ ಬಂದಿದೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ದುನಿಯಾ ವಿಜಿ ಪುತ್ರಿ , ಕೀರ್ತಿ ಮನೆ ಬಿಟ್ಟು ಹೋಗಿದ್ದಾರೆ. ಅಮ್ಮನ ಮನೇಲಿ ಇದ್ದಾರಾ ಅಥವಾ ಬೇರೆ ಎಲ್ಲಿದ್ದಾರೆ ಎಂಬುದಾಗಿ ನಮಗೆ ಮಾಹಿತಿ ಇಲ್ಲ. ನಾವು ಮುಂಚಿನಿಂದಲೂ ಅವರ ಜೊತೆ ಸರಿಯಾಗಿ ಮಾತನಾಡುತ್ತಿರಲಿಲ್ಲ. ನಾಲ್ಕು ದಿನದ ಹಿಂದೆ ಪೊಲೀಸ್​ ಠಾಣೆಗೆ ಹೋಗುವುದಾಗಿ ಹೇಳಿ ಹೊರಟರು. ಈ ವೇಳೆ ಅವರ ಕೈಯಲ್ಲಿ ಬ್ಯಾಗ್​ ಇತ್ತು. ಅದರಲ್ಲಿ ಏನು ಇರಲಿಕ್ಕಿಲ್ಲ ಎಂದು ಅಂದುಕೊಂಡಿದ್ದೇವು. ಆಮೇಲೆ ಈ ವಿಷಯ ಗೊತ್ತಾಯಿತು. ಅವುಗಳನ್ನು ಕೊಂಡೊಯ್ಯುವ ಅವಶ್ಯಕತೆ ಏನು ಇತ್ತು ಎಂಬುದು ತಿಳಿದಿಲ್ಲ ಎಂದಿದ್ದಾರೆ.

ಇನ್ನು ಈ ಎಲ್ಲ ಘಟನೆಗಳಿಂದಾಗಿ ನಾವು ಕಾಲೇಜಿಗೂ ಹೋಗುವುದಕ್ಕೆ ಸಾಧ್ಯವಾಗುತ್ತಿಲ್ಲ ಎಂದು ಕೂಡ ಬೇಸರ ವ್ಯಕ್ತಪಡಿಸಿದ್ದಾರೆ.

Comments are closed.