ಹಲ್ಲೆ ಪ್ರಕರಣದಲ್ಲಿ ಜೈಲು ಸೇರಿರುವ ನಟ ದುನಿಯಾ ವಿಜಯ್, ಇಂದಾದರೂ ತಮಗೆ ಜಾಮೀನು ಸಿಗುತ್ತದೆಯಾ ಎಂಬ ಆತಂಕದಲ್ಲಿದ್ದಾರೆ. ಈ ನಡುವೆ ಅವರಿಗೆ ಹೊಸ ಶಾಕ್ವೊಂದನ್ನು ಅವರ ಎರಡನೇ ಹೆಂಡತಿ ಕೀರ್ತಿ ನೀಡಿದ್ದಾರೆ.
ದುನಿಯಾ ವಿಜಯ್ ಜೈಲು ಪಾಲಾಗುತ್ತಿದ್ದಂತೆ ಮಕ್ಕಳನ್ನು ಹುಡುಕಿಕೊಂಡು ಬಂದ ಮೊದಲ ಹೆಂಡತಿ ನಾಗರತ್ನ ಮೇಲೆ ಎರಡನೇ ಹೆಂಡತಿ ಕೀರ್ತಿ ಹಲ್ಲೆ ನಡೆಸಿದ್ದರು. ಈ ಸಂಬಂಧ ನಾಗರತ್ನ ಗಿರಿನಗರ ಠಾಣೆಯಲ್ಲಿ ಎಫ್ಐಆರ್ ಕೂಡ ದಾಖಲಿಸಿದ್ದರು.
ಮಾರುತಿ ಗೌಡ ಹಲ್ಲೆ ಪ್ರಕರಣ, ಹೆಂಡತಿಯರ ಜಗಳ, ಬೇಲ್ ನಿರಾಕರಣೆ ನಡೆಸುತ್ತಿರುವ ವೇಳೆಯೇ ಕೀರ್ತಿ, ದುನಿಯಾ ವಿಜಯ್ ಮನೆಯಲ್ಲಿದ್ದ ಹಣ, ಚಿನ್ನ ತೆಗೆದುಕೊಂಡು ನಾಪತ್ತೆಯಾಗಿದ್ದಾರೆ ಎನ್ನಲಾಗಿದೆ.
ನಾಗರತ್ನ ಅವರೊಂದಿಗೆ ಜಗಳವಾದ ಬಳಿಕ ಕಳೆದ ನಾಲ್ಕು ದಿನಗಳಿಂದ ಕೀರ್ತಿ ಗೌಡ ಮನೆಗೆ ಬಂದಿಲ್ಲ. ಅಲ್ಲದೇ, ಮನೆಯಲ್ಲಿರುವ 1 ಲಕ್ಷ ಹಣ, ಬೆಲೆ ಬಾಳುವ ಚಿನ್ನಾಭರಣ ಕೂಡ ನಾಪತ್ತೆಯಾಗಿದೆ. ಕೀರ್ತಿಗಾಗಿ ವಿಜಿ ಕುಟುಂಬ ಕೂಡ ಹುಡುಕಾಟ ನಡೆಸುತ್ತಿದೆ.
ಕಳೆದ ನಾಲ್ಕು ದಿನಗಳಿಂದ ಕೀರ್ತಿ ಹುಡುಕಾಟ ನಡೆಸಿದ ಕುಟುಂಬಕ್ಕೆ ಆಕೆ ಮೈಸೂರಿನ ಸಂಬಂಧಿಕರ ಮನೆಯಲ್ಲಿದ್ದಾಳೆ ಎಂಬ ಮಾಹಿತಿ ಲಭ್ಯವಾಗಿದೆ. ಈ ಕುರಿತು ಮಾತನಾಡಿದ ಕೀರ್ತಿ, ಘಟನೆಯಿಂದ ಬೇಸತ್ತು ಸಂಬಂಧಿಕರ ಮನೆಗೆ ಹೋಗಿರುವುದಾಗಿ ಕೀರ್ತಿಗೌಡ ತಿಳಿಸಿದ್ದಾರೆ. ಅಲ್ಲದೇ ವಿಜಯ್ಗೆ ಜಾಮೀನು ಸಿಕ್ಕ ಬಳಿಕ ಬೆಂಗಳೂರಿಗೆ ಬರುವುದಾಗಿ ತಿಳಿಸಿದ್ದಾರೆ.
ಕೀರ್ತಿ ಘಟನೆಯಿಂದ ಬೇಸರಗೊಂಡು ಮನೆತೊರೆದಿದ್ದರೇ ಮನೆಯಲ್ಲಿದ್ದ ದುಡ್ಡ ,ಒಡವೆ ತೆಗೆದುಕೊಂಡು ಹೋಗುವ ಅವಶ್ಯಕತೆ ಏನಿತ್ತು ಎಂದು ಆರೋಪ ಕೇಳಿ ಬಂದಿದೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ದುನಿಯಾ ವಿಜಿ ಪುತ್ರಿ , ಕೀರ್ತಿ ಮನೆ ಬಿಟ್ಟು ಹೋಗಿದ್ದಾರೆ. ಅಮ್ಮನ ಮನೇಲಿ ಇದ್ದಾರಾ ಅಥವಾ ಬೇರೆ ಎಲ್ಲಿದ್ದಾರೆ ಎಂಬುದಾಗಿ ನಮಗೆ ಮಾಹಿತಿ ಇಲ್ಲ. ನಾವು ಮುಂಚಿನಿಂದಲೂ ಅವರ ಜೊತೆ ಸರಿಯಾಗಿ ಮಾತನಾಡುತ್ತಿರಲಿಲ್ಲ. ನಾಲ್ಕು ದಿನದ ಹಿಂದೆ ಪೊಲೀಸ್ ಠಾಣೆಗೆ ಹೋಗುವುದಾಗಿ ಹೇಳಿ ಹೊರಟರು. ಈ ವೇಳೆ ಅವರ ಕೈಯಲ್ಲಿ ಬ್ಯಾಗ್ ಇತ್ತು. ಅದರಲ್ಲಿ ಏನು ಇರಲಿಕ್ಕಿಲ್ಲ ಎಂದು ಅಂದುಕೊಂಡಿದ್ದೇವು. ಆಮೇಲೆ ಈ ವಿಷಯ ಗೊತ್ತಾಯಿತು. ಅವುಗಳನ್ನು ಕೊಂಡೊಯ್ಯುವ ಅವಶ್ಯಕತೆ ಏನು ಇತ್ತು ಎಂಬುದು ತಿಳಿದಿಲ್ಲ ಎಂದಿದ್ದಾರೆ.
ಇನ್ನು ಈ ಎಲ್ಲ ಘಟನೆಗಳಿಂದಾಗಿ ನಾವು ಕಾಲೇಜಿಗೂ ಹೋಗುವುದಕ್ಕೆ ಸಾಧ್ಯವಾಗುತ್ತಿಲ್ಲ ಎಂದು ಕೂಡ ಬೇಸರ ವ್ಯಕ್ತಪಡಿಸಿದ್ದಾರೆ.
Comments are closed.