ಪ್ರಮುಖ ವರದಿಗಳು

ಕೇರಳದ ಪದ್ಮನಾಭ ಸ್ವಾಮಿ ದೇಗುಲದಿಂದ ₹ 186 ಕೋಟಿ ಮೌಲ್ಯದ ಚಿನ್ನ ನಾಪತ್ತೆ !

Pinterest LinkedIn Tumblr

Padmanabhaswamy-temple

ನವದೆಹಲಿ: ಕೇರಳದ ತಿರುವನಂತಪುರ ಜಿಲ್ಲೆಯಲ್ಲಿರುವ ಶ್ರೀ ಪದ್ಮನಾಭ ಸ್ವಾಮಿ ದೇವಾಲಯದಿಂದ ₹.186 ಕೋಟಿ ಮೌಲ್ಯದ ಚಿನ್ನ ನಾಪತ್ತೆಯಾಗಿದೆ. ಇಷ್ಟೇ ಅಲ್ಲದೆ ದೇವಾಲಯದ ಹಣಕಾಸು ವಹಿವಾಟಿನಲ್ಲಿ ಹಲವಾರು ಲೋಪದೋಷಗಳು ಕಂಡುಬಂದಿವೆ ಎಂದು ವಿನೋದ್ ರೈ ನೇತೃತ್ವದ ವಿಶೇಷ ಸಮಿತಿ ಸಲ್ಲಿಸಿದ ಲೆಕ್ಕಪರಿಶೋಧನೆ ವರದಿ ಬಹಿರಂಗ ಪಡಿಸಿದೆ.

ಬಲ್ಲಮೂಲಗಳ ಪ್ರಕಾರ ಮಾಜಿ ಮಹಾಲೇಖಪಾಲ ವಿನೋದ್ ರೈ ಅವರು ಸಲ್ಲಿಸಿರುವ ವರದಿಯಲ್ಲಿ ಎರಡು ಸಂಪುಟಗಳಿದ್ದು, ಇವುಗಳನ್ನು 1,000 ಪುಟಗಳ 5 ಭಾಗಗಳಾಗಿ ವಿಂಗಡಿಸಲಾಗಿದೆ. ದೇವಾಲಯದ ಹಣಕಾಸು ವ್ಯವಹಾರಗಳ ಬಗ್ಗೆ ವರದಿ ಸಲ್ಲಿಸುವಂತೆ 2015 ಅಕ್ಟೋಬರ್‍ ನಲ್ಲಿ ಸುಪ್ರೀಂ ಕೋರ್ಟ್ ರೈ ಅವರ ಸಮಿತಿಗೆ ಆದೇಶಿಸಿತ್ತು.

ಈ ವರದಿಯ ಪ್ರಕಾರ ಚಿನ್ನವನ್ನು ಶುದ್ದಗೊಳಿಸುವ ಸಲುವಾಗಿ 263 ಚಿನ್ನಾಭರಣಗಳು ಕಳೆದು ಹೋಗಿವೆ ಮತ್ತು ₹ 186 ಕೋಟಿ ಮೌಲ್ಯವುಳ್ಳ 769 ಚಿನ್ನದ ಬಿಂದಿಗೆಗಳು ನಾಪತ್ತೆಯಾಗಿವೆ. ಹೀಗೆ ನಾಪತ್ತೆಯಾಗಿರುವ ಚಿನ್ನಾಭರಣಗಳ ಪತ್ತೆಗಾಗಿ ತನಿಖೆ ನಡೆಸಬೇಕೆಂದು ರೈ ಒತ್ತಾಯಿಸಿದ್ದಾರೆ.

ಅಷ್ಟೇ ಅಲ್ಲದೆ ಕಾಣಿಕೆಯನ್ನು ಎಣಿಸುವಾಗಲೂ ಅವ್ಯವಹಾರ ನಡೆದಿದೆ. ₹. 14. 18 ಲಕ್ಷ ಮೌಲ್ಯದ ಚಿನ್ನ ಮ್ಚು ಬೆಳ್ಳಿಯ ಬಗ್ಗೆ ನಡವರವ್ ನೊಂದಣಿಪುಸ್ತಕದಲ್ಲಿ ಉಲ್ಲೇಖಿಸಲಾಗಿಲ್ಲ, ಇದು ಅಕ್ರಮ ಎಂದು ವರದಿಯಲ್ಲಿ ಹೇಳಲಾಗಿದೆ.

₹. 14 ಲಕ್ಷ ಮೌಲ್ಯದ ಬೆಳ್ಳಿ ಗಟ್ಟಿ ನಾಪತ್ತೆಯಾಗಿದೆ. ಅದೇ ವೇಳೆ ದೇವಾಲಯದ ಟ್ರಸ್ಟ್ 1970ರಲ್ಲಿ ಅಕ್ರಮವಾಗಿ 2.11 ಎಕರೆ ಭೂಮಿಯನ್ನು ಮಾರಿದ್ದು, ಈ ಬಗ್ಗೆ ದಾಖಲೆಗಳೂ ಇಲ್ಲ.

ಇತ್ತೀಚೆಗೆ ದೇವಾಲಯದ ಖರ್ಚು ವೆಚ್ಚಗಳೂ ಹೆಚ್ಚಾಗಿರುವುದರ ಬಗ್ಗೆ ಅಚ್ಚರಿ ವ್ಯಕ್ತಪಡಿಸಿದ ರೈ, ಕೆಲವು ವರ್ಷಗಳಿಂದೀಚೆಗೆ ದೇವಾಲಯದಲ್ಲಿ ಅವ್ಯವಹಾರಗಳು ನಡೆದು ಬರುತ್ತಿವೆ ಎಂದು ಹೇಳಿದ್ದಾರೆ.

Comments are closed.