ಕರಾವಳಿ

ದೂರದೃಷ್ಟಿ ಮತ್ತು ಸದಾ ಕಾರ್ಯಶೀಲತೆ ಹೊಂದಿರುವ ಯುವನಾಯಕ ವೇದವ್ಯಾಸ ಕಾಮತ್‌ರನ್ನು ಗೆಲ್ಲಿಸಿ, ಬಿಜೆಪಿಗೆ ಶಕ್ತಿ ತುಂಬಿ : ಅಮಿತ್ ಶಾ

Pinterest LinkedIn Tumblr

ಮಂಗಳೂರು, ಮೇ.08 :ದೂರದೃಷ್ಟಿ ಮತ್ತು ಸದಾ ಕಾರ್ಯಶೀಲತೆ ಹೊಂದಿರುವ ಯುವನಾಯಕ ವೇದವ್ಯಾಸ ಕಾಮತ್‌ರನ್ನು ಅತೀ ಹೆಚ್ಚಿನ ಮತಗಳ ಅಂತರದಲ್ಲಿ ಗೆಲ್ಲಿಸುವ ಮೂಲಕ ಬಿಜೆಪಿಗೆ ಶಕ್ತಿ ತುಂಬುವ ಕೆಲಸ ಮಾಡಿ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಹೇಳಿದರು.

ಮಂಗಳೂರು ದಕ್ಷಿಣ ವಿಧಾನ ಸಭಾ ಕ್ಷೇತ್ರದ ಅಭ್ಯರ್ಥಿ ಡಿ. ವೇದವ್ಯಾಸ ಕಾಮತ್ ಪರ ಮಂಗಳವಾರ ಮಂಗಳೂರು ನಗರದ ನವಭಾರತ ವೃತ್ತ, ನ್ಯೂಚಿತ್ರಾ, ರಥಬೀದಿಯಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು ರೋಡ್ ಶೋ ನಡೆಸಿದರು. ಕಿಕ್ಕಿರಿದು ತುಂಬಿದ ರಥಬೀದಿಯಲ್ಲಿ ಅಮಿತ್ ಶಾ ಅವರ ರೋಡ್ ಶೋಗೆ ಅಭೂತಪೂರ್ವ ಜನಸ್ಪಂದನೆ ಸಿಕ್ಕಿದ್ದು, ಸುಮಾರು ಏಳರಿಂದ ಎಂಟು ಸಾವಿರದಷ್ಟು ಬಿಜೆಪಿಯ ಕಾರ್ಯಕರ್ತರು, ಮೋದಿ ಅಭಿಮಾನಿಗಳು ರೋಡ್ ಶೋ ದಲ್ಲಿ ಪಾಲ್ಗೊಂಡಿದ್ದರು.

ರಥಬೀದಿ ಶ್ರೀ ವೆಂಕಟರಮಣ ದೇವಸ್ಥಾನದ ಎದುರು ಬಿಜೆಪಿ ಕಾರ್ಯಕರ್ತರ ಹುಮ್ಮಸ್ಸಿಗೆ ಪ್ರತಿಕ್ರಿಯಿಸಿದ ಅಮಿತ್ ಶಾ, ಮಂಗಳೂರು ನಗರ ದಕ್ಷಿಣದಲ್ಲಿ ವೇದವ್ಯಾಸ ಕಾಮತ್ ಅವರನ್ನು ಅತೀ ಹೆಚ್ಚಿನ ಮತಗಳ ಅಂತರದಲ್ಲಿ ಗೆಲ್ಲಿಸಿಕೊಡುವಂತೆ ಮನವಿ ಮಾಡಿದರು.

ವೇದವ್ಯಾಸ ಕಾಮತ್ ಅವರು ಯುವಕರಾಗಿದ್ದು, ದೂರದೃಷ್ಟಿ ಮತ್ತು ಸದಾ ಕಾರ್ಯಶೀಲತೆ ಹೊಂದಿರುವ ನಾಯಕರಾಗಿದ್ದಾರೆ. ಇವರನ್ನು ಗೆಲ್ಲಿಸಿ ರಾಜ್ಯದಲ್ಲಿ ಬಿಜೆಪಿಗೆ ಶಕ್ತಿ ತುಂಬುವ ಕೆಲಸ ಮಾಡಿ ಎಂದು ಅಮಿತ್ ಶಾ ಹೇಳಿದರು.

ಈ ವೇಳೆ ಅಮಿತ್ ಶಾ ಅವರೊಂದಿಗೆ ಬಿಜೆಪಿ ಮಂಗಳೂರು ನಗರ ದಕ್ಷಿಣ ಅಭ್ಯರ್ಥಿ ಡಿ ವೇದವ್ಯಾಸ ಕಾಮತ್, ಸಂಸದ ನಳಿನ್ ಕುಮಾರ್ ಕಟೀಲ್, ವಿಧಾನ ಪರಿಷತ್ ಸದಸ್ಯ ಕ್ಯಾ.ಗಣೇಶ್ ಕಾರ್ಣಿಕ್ ಸಹಿತ ಪಕ್ಷದ ಉನ್ನತ ನಾಯಕರು ಉಪಸ್ಥಿತರಿದ್ದರು.

ಬಿಜೆಪಿಯ ಆಧುನಿಕ ಚಾಣಕ್ಯನ ಸ್ವಾಗತವನ್ನು ಹಿರಿಯರು, ಮಹಿಳೆಯರು, ಯುವಕ, ಯುವತಿಯರು ಹೂಮಳೆ ಸುರಿಸುವ ಮೂಲಕ ವಿಶಿಷ್ಟವಾಗಿ ಮಾಡಿದರು. ದಾರಿಯುದ್ದಕ್ಕೂ ಬರುವ ವಸತಿ ಸಮುಚ್ಚಯದ ಮೇಲೆ ನಿಂತ ನಾಗರಿಕರು ಅಲ್ಲಿಂದಲೇ ಹೂಮಳೆ ಸುರಿಸುವ ಮೂಲಕ ಬಿಜೆಪಿಯ ಮೇಲಿರುವ ಪ್ರೀತಿಯನ್ನು ಇಮ್ಮಡಿಗೊಳಿಸಿದರು. ನಾಸಿಕ್ ಬ್ಯಾಂಡ್, ಚೆಂಡೆವಾದ್ಯಗಳ ಹಿನ್ನಲೆಯಲ್ಲಿ ನಡೆದ ರೋಡ್ ಶೋ ವಿಜಯೋತ್ಸವವನ್ನು ಈಗಲೇ ಕಣ್ಣಿಗೆ ಕಟ್ಟುವಂತೆ ಇತ್ತು. ಬಿಜೆಪಿ ಧ್ವಜಗಳ ನಡುವೆ ಶಿಸ್ತಿನಿಂದ ಹೆಜ್ಜೆ ಹಾಕಿದ ಕಾರ್ಯಕರ್ತರ ಉತ್ಸಾಹ ಅಮಿತ್ ಶಾ ಭೇಟಿಯೊಂದಿಗೆ ದುಪ್ಪಟಾಗಿದೆ.

ಚಿತ್ರ : ಮಂಜು ನಿರೇಶ್ವಾಲ್ಯ

Comments are closed.