ಕರಾವಳಿ

ಸಂಪರ್ಕ್ ಫಾರ್ ಸಮರ್ಥನ್ : ಜನಸಾಮಾನ್ಯರಿಗೂ ಉಪಯೋಗವಾಗುವ ಕೇಂದ್ರ ಸರ್ಕಾರದ ಯೋಜನೆಗಳ ಕುರಿತು ವಿವರ ನೀಡಿದ ಶಾಸಕ ವೇದವ್ಯಾಸ ಕಾಮಾತ್

Pinterest LinkedIn Tumblr

ಮಂಗಳೂರು : ಪ್ರಧಾನಮಂತ್ರಿ ಮಾತೃ ವಂದನಾ ಯೋಜನೆಯಡಿ ವಿವಾಹಿತ ಗರ್ಭಿಣಿ ಮತ್ತು ಬಾಣಂತಿಯರಿಗೆ ಆರು ಸಾವಿರ ರೂ.ವರೆಗೆ ನೆರವು ನೀಡಲಾಗುತ್ತದೆ. ಮಾತೃ ವಂದನಾ ಯೋಜನೆಯು 2017ರ ಜನವರಿ 1ರಿಂದ ಪ್ರಾರಂಭವಾಗಿದೆ. ಪೌಷ್ಠಿಕ ಆಹಾರ, ಲಸಿಕೆ ಮತ್ತು ಆಸ್ಪತ್ರೆಯ ಖರ್ಚು ವೆಚ್ಚ ಭರಿಸಲು ಯೋಜನೆ ಸಹಕಾರಿಯಾಗಿದೆ. 2017ರ ಡಿಸೆಂಬರ್‌ವರೆಗೆ 51 ಲಕ್ಷ ಮಹಿಳೆಯರು ಯೋಜನೆಯನ್ನು ಸದುಪಯೋಗ ಪಡಿಸಿಕೊಂಡಿದ್ದು, 2.13 ಲಕ್ಷ ಮಹಿಳೆಯರು ನೋಂದಾಯಿಸಿಕೊಂಡಿದ್ದಾರೆ ಎಂದು ಶಾಸಕ ವೇದವ್ಯಾಸ ಕಾಮತ್ ತಿಳಿಸಿದರು.

ನಗರದ ಕೊಡಿಯಾಲ್‌ಬೈಲ್‌ನ ಪಕ್ಷದ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂಪರ್ಕ್ ಫಾರ್ ಸಮರ್ಥನ್ ಕೇಂದ್ರ ಸರ್ಕಾರದ ಯೋಜನೆಗಳನ್ನು ಪತ್ರಿಕೆ ಮತ್ತು ಮಾಧ್ಯಮಗಳ ಮೂಲಕ ಜನಮನಕ್ಕೆ ತಲುಪಿಸಿ, ಅದರ ಸದುಪಯೋಗವನ್ನು ಪಡೆಯುವುದಕ್ಕಾಗಿ. ಪ್ರಧಾನಮಂತ್ರಿ ಮಾತೃ ವಂದನಾ ಯೋಜನೆಯಡಿ ಗರ್ಭಿಣಿ ತಾಯಂದಿರಿಗೆ ನೆರವು ವಿಶ್ರಾಂತಿ ಪಡೆಯಲು ಮತ್ತು ಸಕಾಲಕ್ಕೆ ಆರೋಗ್ಯ ತಪಾಸಣೆ ಮಾಡಿಕೊಳ್ಳಲು ನೆರವಾಗುವಂತೆ 19 ವರ್ಷ ಮೇಲ್ಪಟ್ಟ ವಿವಾಹಿತ ಬಾಣಂತಿ ಹಾಗೂ ಗರ್ಭಿಣಿ ತಾಯಂದಿರಿಗೆ 6,೦೦೦ ರೂ. ವರೆಗೆ ಉತ್ತೇಜನ ಧನ ನೀಡಲಾಗುತ್ತದೆ. ಈ ಯೋಜನೆಯು 01-01-2017ರಿಂದ ಪ್ರಾರಂಭವಾಗಿದೆ. ಪೌಷ್ಠಿಕ ಆಹಾರ, ಲಸಿಕೆ ಮತ್ತು ಆಸ್ಪತ್ರೆಯ ಖರ್ಚು ವೆಚ್ಚ ಭರಿಸಲು ಈ ಯೋಜನೆಯು ಸಹಕಾರಿಯಾಗಿದೆ ಎಂದು ಹೇಳಿದರು.

ಯೋಜನೆಯ ಫಲಾನುಭವಿಯು ಭಾರತೀಯ ಪೌರತ್ವ ಪಡೆದವರಾಗಿರಬೇಕು.ಒಬ್ಬ ಸ್ತ್ರೀಯ ಜೀವಿತಾವಧಿಯ ಎರಡು ಯಶಸ್ವಿ ಹೆರಿಗೆಗೆ ಮಾತ್ರ ಈ ಯೋಜನೆಯ ಉಪಯೋಗ ಪಡೆಯಬಹುದು.ಗರ್ಭಿಣಿಯಾದ ಮೊದಲ ಮೂರು ತಿಂಗಳಿಗೆ 3,೦೦೦ ರೂ. ಮತ್ತು ಹೆರಿಗೆ ಸಂದರ್ಭದಲ್ಲಿ 1,5೦೦ ರೂ. ಮತ್ತು ಹೆರಿಗೆಯಾದ 3 ತಿಂಗಳ ನಂತರ 1,5೦೦ ರೂ. ಗಳಂತೆ ದೊರಕುತ್ತದೆ.

ಈ ಯೋಜನೆಯು ಸರ್ವಧರ್ಮದ ತಾಯಂದಿರಿಗೂ ಅನ್ವಯಿಸುತ್ತದೆ.26-12-2017ರ ವರೆಗೆ 51,69,987 ಮಹಿಳೆಯರು ಯೋಜನೆಯ ಉಪಯೋಗ ಪಡೆದಿದ್ದಾರೆ. ಮತ್ತು 2,13,931 ಜನ ಮಹಿಳೆಯರು ನೋಂದಾಯಿತರಾಗಿದ್ದಾರೆ.ಸಂಪರ್ಕ ಮಾಹಿತಿ: ಹತ್ತಿರದ ಅಂಗನವಾಡಿ ಕಾರ್ಯಕರ್ತೆಯನ್ನು ಸಂಪರ್ಕಿಸಿ, ಮಾಹಿತಿ ಪಡೆಯಬಹುದು ಎಂದವರು ತಿಳಿಸಿದರು.

ಇಂದ್ರಧನುಷ್ ಮಿಷನ್ :

ಇಂದ್ರಧನುಷ್ ಮಿಷನ್ ಯೋಜನೆಯಡಿ ಎರಡು ವರ್ಷ ಕೆಳಗಿನ ಮಕ್ಕಳು ಮತ್ತು ಬಾಣಂತಿಯರಿಗೆ ತಡೆಗಟ್ಟಬಹುದಾದ ರೋಗಗಳಾದ ಡಿಫ್ತೀರಿಯಾ, ನಾಯುಕೆಮ್ಮು, ಧನುರ್ವಾಯು, ಪೊಲಿಯೊ, ಕ್ಷಯ, ದಡಾರ, ಹೈಪಟೈಟಿಸ್-ಬಿ, ರುಬೆಲ್ಲಾ, ಜಪಾನ್ ಆನೆಕಾಲು ರೋಗ, ರೋಪಾ ವೈರಸ್, ನಿಮೋನಿಯಾಗಳಿಂದ ರಕ್ಷಣ ಪಡೆಯಲು ಮುಂಜಾಗೃತಾ ಕ್ರಮವಾಗಿ ಲಸಿಕೆ ನೀಡಬಹುದಾಗಿದೆ. ಈಗಾಲಗೇ 3.15 ಕೋಟಿ ಮಕ್ಕಳಿಗೆ ಲಸಿಕೆ ಹಾಕಲಾಗಿದೆ. 80.63ಲಕ್ಷ ಗರ್ಭಿಣಿ ಸ್ತ್ರೀಯರಿಗೆ ರೋಗ ನಿರೋಧಕವನ್ನು ನೀಡಲಾಗಿದೆ ಎಂದು ಶಾಸಹರು ಮಾಹಿತಿ ನೀಡಿದರು.

2022ರೊಳಗಾಗಿ ದೇಶದ ಪ್ರತಿಯೊಬ್ಬ ನಾಗರಿಕನೂ ಸ್ವಂತ ಮನೆ ಹೊಂದಿರಬೇಕು ಎನ್ನುವ ಆಶಯದೊಂದಿಗೆ ಪ್ರಧಾನಮಂತ್ರಿ ಆವಾಜ್ ಯೋಜನೆ (ನಗರ-ಗ್ರಾಮೀಣ)ಯನ್ನು ಜಾರಿಗೊಳಿಸಲಾಗಿದೆ. ಸ್ಲಂ ಪ್ರದೇಶಗಳನ್ನು ನಿರ್ಮೂಲನೆ ಮಾಡುವುದು ಪ್ರಥಮ ಆದ್ಯತೆಯಾಗಿದೆ ಎಂದು ತಿಳಿಸಿದರು.

ಪ್ರಧಾನಮಂತ್ರಿ ಆವಾಜ್ ಯೋಜನೆ (ಅರ್ಬನ್ ಮತ್ತು ಗ್ರಾಮೀಣ)

ಆರ್ಥಿಕವಾಗಿ ಹಿಂದುಳಿದ ವರ್ಗ : ಅಂದರೆ ವಾರ್ಷಿಕ ಆದಾಯ ಮೂರು ಲಕ್ಷಕ್ಕಿಂತ ಕಡಿಮೆ ಇರುವ ವ್ಯಕ್ತಿ. ಈ ವ್ಯಕ್ತಿಗೆ 70 ವರ್ಷ ಮೀರಿರಬಾರದು. ಶೇಕಡ 6% ಬಡ್ಡಿಯ ಮೇಲೆ ಸಹಾಯಧನ ನೀಡಲಾಗುತ್ತದೆ. ಒಟ್ಟು ಮನೆಯ ವಿಸ್ತೀರ್ಣ 322 sq feet ಮೀರಿರಬಾರದು. ಈ ಯೋಜನೆಯಡಿ ಆರ್ಥಿಕವಾಗಿ ಹಿಂದುಳಿದ ವರ್ಗಕ್ಕೆ 6 ಲಕ್ಷ ವರೆಗೆ ಸಾಲ ನೀಡಲಾಗುತ್ತದೆ.

ಮಧ್ಯಮ ಆದಾಯವರ್ಗ : ಅಂದರೆ ವಾರ್ಷಿಕ ಆದಾಯ 12 ಲಕ್ಷ ಇರುವವರಿಗೆ 9 ಲಕ್ಷ ವರೆಗೆ ಸಾಲ ನೀಡಲಾಗುತ್ತದೆ. ಅದರಲ್ಲಿ ಶೇಕಡ 4% ಬಡ್ಡಿಯ ಮೇಲೆ ಸಹಾಯಧನ ನೀಡಲಾಗುತ್ತದೆ. ಸಾಲ ಅವಧಿ ಇಪ್ಪತ್ತು ವರ್ಷ ಮನೆಯ ಒಟ್ಟು ವಿಸ್ತೀರ್ಣ 1291 sq feet ಮೀರಿರಬಾರದು.

ಮಧ್ಯಮ ವರ್ಗ 2 : ಅಂದರೆ 18 ಲಕ್ಷ ವಾರ್ಷಿಕ ಆದಾಯ ಇರುವವರು. ಇವರಿಗೆ 12ಲಕ್ಷ ವರೆಗೆ ಸಾಲ ನೀಡಲಾಗುತ್ತದೆ. ಅದರಲ್ಲಿ ಶೇಕಡ 3% ಬಡ್ಡಿಯ ಮೇಲೆ ಸಹಾಯಧನ ನೀಡಲಾಗುತ್ತದೆ. ಮನೆಯ ಒಟ್ಟು ವಿಸ್ತೀರ್ಣ 1614 ಇರಬೇಕು. 2022ರ ಒಳಗಾಗಿ ಒಟ್ಟು ಎರಡು ಕೋಟಿ ಮನೆ ನಿರ್ಮಾಣದ ಗುರಿ ಹೊಂದಿದೆ.

ಅರ್ಜಿ ಸಲ್ಲಿಸುವ ವಿಧಾನ :Offline : ಮಹಾನಗರ ಪಾಲಿಕೆಗೆ ಅರ್ಜಿ ಸಲ್ಲಿಸುವುದು.

Online : www.pmis.gov.in ಮೂಲಕ ಅರ್ಜಿ ಸಲ್ಲಿಸಬಹುದು.
2019ರ ಮಾರ್ಚ್ 31ನೇ ತಾರೀಕು ಈ ಯೋಜನೆಯಲ್ಲಿ ಹೆಸರು ನೋಂದಾಯಿಸಲು ಕೊನೆಯ ದಿನ ಆಗಿರುತ್ತದೆ ಎಂದು ಶಾಸಕರು ತಿಳಿಸಿದರು.

ದೀನ ದಯಾಳ್ ಉಪಾಧ್ಯಾಯ ಗ್ರಾಮ ಜ್ಯೋತಿ ಯೋಜನೆ :

ದೇಶದ ಪ್ರತಿ ಹಳ್ಳಿಗಳಿಗೆ 24x 7 ನಿರಂತರವಾಗಿ ವಿದ್ಯುತ್ ಕಲ್ಪಿಸುವ ಮಹತ್ವಾಕಾಂಕ್ಷಿ ಯೋಜನೆಯಾಗಿದ್ದು, ಎಪ್ರಿಲ್ 2015ರಲ್ಲಿ 19,679 ವಿದ್ಯುತ್ ಸಂಪರ್ಕವಿಲ್ಲದ ಗ್ರಾಮಗಳಿದ್ದು ಇದೀಗ ಅವುಗಳಿಗೆ ವಿದ್ಯುತ್ ಸಂಪರ್ಕ ಒದಗಿಸಿ ಭಾರತದ ಪ್ರತಿ ಹಳ್ಳಿಗಳಿಗೂ ವಿದ್ಯುತ್ ಸಂಪರ್ಕ ಒದಗಿಸಿದ ಕೀರ್ತಿ ಮೋದಿ ಸರಕಾರಕ್ಕೆ ಸಲ್ಲುತ್ತದೆ.

ಸ್ವಚ್ಛ ಭಾರತ ಅಭಿಯಾನ :

ಸ್ವಚ್ಛ ಭಾರತ ಅಭಿಯಾನ ಯೋಜನೆಯಡಿ ಒಟ್ಟು 26,564 ಸ್ವಚ್ಛ ಭಾರತ ಅಭಿಯಾನಗಳು ನಡೆದಿವೆ. ಭಾರತದ ಪ್ರತಿಯೊಂದು ಗಲ್ಲಿ, ರಸ್ತೆ, ಹಳ್ಳಿ, ನಗರ ಹಾಗೂ ಮೂಲಭೂತ ಸೌಕರ್ಯಗಳನ್ನು ಶುಚಿಯಾಗಿರಿಸುವುದು ಯೋಜನೆಯ ಉದ್ದೇಶವಾಗಿದೆ. ಇದುವರೆಗೆ 7.95 ಕೋಟಿ ಶೌಚಾಲಯಗಳನ್ನು ನಿರ್ಮಿಸ ಲಾಗಿದೆ. ನಾಲ್ಕು ಲಕ್ಷ ಹಳ್ಳಿಗಳು, 419 ಜಿಲ್ಲೆಗಳು, 19 ರಾಜ್ಯಗಳು ಬಯಲು ಶೌಚ ಮುಕ್ತಗೊಂಡಿವೆ ಎಂದು ಶಾಸಕರು ವಿವರ ನೀಡಿದರು.

ಪತ್ರಿಕಾಗೋಷ್ಠಿಯಲ್ಲಿ ಮನಪಾ ಸದಸ್ಯ ಪ್ರೇಮಾನಂದ ಶೆಟ್ಟಿ, ಪಕ್ಷದ ಪ್ರಮುಖರಾದ ರವಿಶಂಕರ್ ಮಿಜಾರು, ನಿತಿನ್‌ಕುಮಾರ್, ಭಾಸ್ಕರ್‌ಚಂದ್ರ ಶೆಟ್ಟಿ, ಸಂಜಯ್ ಪ್ರಭು, ರಮೇಶ್ ಕಂಡೆಟ್ಟು, ರವೀಂದ್ರಕುಮಾರ್, ಶ್ರೀನಿವಾಸ್ ಶೇಟ್ ಉಪಸ್ಥಿತರಿದ್ದರು.

Comments are closed.