ಕರಾವಳಿ

ಸಹೋದ್ಯೋಗಿ ಯುವತಿಗೆ ಲೈಂಗಿಕ ಕಿರುಕುಳ : ಮ್ಯಾನೇಜರ್‌ ಬಂಧನ – ಆರೋಪಿ ವಿರುದ್ದ ಕಠಿಣಕ್ರಮಕ್ಕೆ ಹಿಂದೂ ಸಂಘಟನೆಗಳ ಆಗ್ರಹ

Pinterest LinkedIn Tumblr

ಹಿಂದೂಸ್ಥಾನ್ ಬಾವ ಬಿಲ್ಡರ್ಸ್‌ನ ಮ್ಯಾನೇಜರ್‌ ಲತೀಪ್ ಬಂಧನ

ಮಂಗಳೂರು : ಕೋಟೆಕಾರು ಬೀರಿ ಬಳಿ ನಿರ್ಮಾಣ ಹಂತದ ಕಟ್ಟಡದ ಬುಕ್ಕಿಂಗ್ ಕಚೇರಿಯಲ್ಲಿ ಅಕೌಂಟೆಂಟ್ ಆಗಿರುವ ಯುವತಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ ಸೈಟ್ ಮ್ಯಾನೇಜರ್‌ನನ್ನು ಉಳ್ಳಾಲ ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿಯನ್ನು ಅದೇ ಕಂಪನಿಯಲ್ಲಿ ಸೈಟ್ ಮ್ಯಾನೇಜರ್‌ ಆಗಿ ಕೆಲಸ ಮಾಡುತ್ತಿದ್ದ ಉಪ್ಪಳ ನಿವಾಸಿ ಅಬ್ದುಲ್ ಲತೀಪ್ ಖಾದರ್ (37) ಎಂದು ಗುರುತಿಸಲಾಗಿದೆ.

ದಿನಾಂಕ 8-10-2018 ರಂದು ಮದ್ಯಾಹ್ನ ಕೋಟೆಕಾರ್ ಬೀರಿ ಹಿಂದೂಸ್ಥಾನ್ ಬಾವ ಬಿಲ್ಡರ್ಸ್ ಕಛೇರಿಯಲ್ಲಿ ಯುವತಿಯೊಬ್ಬಳೆ ಇದ್ದಾಗ ಆರೋಪಿ ಅಬ್ದುಲ್ ಲತೀಪ್ ಖಾದರ್ ಕೀ ನೀಡುವ ನೆಪದಲ್ಲಿ ಕಛೇರಿಯೊಳಗೆ ಬಂದು ಯುವತಿಗೆ ಲೈಂಗಿಕ ಕಿರುಕುಳ ನೀಡಿ,ಈ ವಿಷಯ ಹೊರಗೆ ಹೇಳಿದರೆ ಕೊಲ್ಲುವುದಾಗಿ ಬೆದರಿಕೆ ಒಡ್ಡಿದ್ದಾನೆ ಎಂದು ಆರೋಪಿಸಲಾಗಿದೆ.

ಈ ಬಗ್ಗೆ ಯುವತಿ ದೂರು ನೀಡಿರುವ ಹಿನ್ನೆಲೆಯಲ್ಲಿ ಆರೋಪಿಯ ವಿರುದ್ಧ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಈ ಬಗ್ಗೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ನಂಬ್ರ 200/2018 ಕಲಂ 341,354(ಎ), 354, 506 ಐಪಿಸಿ ಪ್ರಕರಣ ದಾಖಲಾಗಿರರುತ್ತದೆ.

ಇದೇ ವೇಳೆ ಘಟನೆಯನ್ನು ಖಂಡಿಸಿರುವ ಹಿಂದೂ ಸಂಘಟನೆಗಳು ಆರೋಪಿ ವಿರುದ್ದ ಕಠಿಣಕ್ರಮಕ್ಕೆ ಒತ್ತಾಯಿಸಿದೆ.

Comments are closed.