ಕರಾವಳಿ

ಮೈಸೂರು ಹತ್ಯೆ ಪ್ರಕರಣ ಹಾಗೂ ಅಬಿದ್ ಪಾಶಾ ಬಿಡುಗಡೆ ವಿರುದ್ಧ ಹಿಂದೂ ಜನಜಾಗೃತಿ ಸಮಿತಿಯಿಂದ ಶಾಸಕರಿಗೆ ಮನವಿ

Pinterest LinkedIn Tumblr

ಮಂಗಳೂರು, ಅಕ್ಟೋಬರ್.09 : ಹಿಂದೂ ಜನಜಾಗೃತಿ ಸಮಿತಿ ವತಿಯಿಂದ ಮೈಸೂರು ೮ ಜನರ ಹತ್ಯೆಯ ಪ್ರಕರಣವನ್ನು ವ್ಯವಸ್ಥಿತವಾಗಿ ಮುಚ್ಚಿಹಾಕುವ ಮತ್ತು ಪ್ರಮುಖ ಆರೋಪಿ ಅಬಿದ್ ಪಾಶಾ ಬಿಡುಗಡೆಗೆ ಸಹಕರಿಸುವ ಕಾಂಗ್ರೆಸ್ ಪಕ್ಷದ ದ್ವಿಮುಖ ನೀತಿ ವಿರುದ್ಧ ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ ವೇದವ್ಯಾಸ ಕಾಮತ್ ಇವರಿಗೆ ಮನವಿ ನೀಡಲಾಯಿತು.

ಕರ್ನಾಟಕ ರಾಜ್ಯದಲ್ಲಿ ಕಳೆದ ವರ್ಷ 23ಕ್ಕೂ ಅಧಿಕ ಹಿಂದೂ ಕಾರ್ಯಕರ್ತರ ಬರ್ಬರ ಹತ್ಯೆ ಪ್ರಕರಣ ರಾಷ್ಟ್ರವ್ಯಾಪಿ ಸುದ್ಧಿಯಾಗಿತ್ತು. ಇದರಲ್ಲಿ ಕಾಂಗ್ರೆಸ್ ಸರ್ಕಾರವು ಈ ಬೀಕರ ಹತ್ಯೆಗಳ ತನಿಖೆಯನ್ನು ನಿಷ್ಪಕ್ಷಪಾತವಾಗಿ ನಡೆಸಿ, ತಪ್ಪಿತಸ್ತರಿಗೆ ಸೂಕ್ತ ಶಿಕ್ಷೆ ನೀಡುವುದು ಅಪೇಕ್ಷಿತವಿತ್ತು. ಆದರೆ ಕಾಂಗ್ರೆಸ್ ಸರ್ಕಾರವು ಈ ಪ್ರಕರಣದಲ್ಲಿ ಅರೋಪಿಗಳಿಗೆ ಪರವಾಗಿ ನಡೆದುಕೊಳ್ಳುವ ಮೂಲಕ ಅಪರಾಧಿಗಳಿಗೆ ಜಾಮೀನು ಸಿಗುವಹಾಗೆ, ಅವರು ಬಿಡುಗಡೆಯಾಗುವ ಹಾಗೆ ನಡೆದುಕೊಂಡಿರುವುದು ದುರದೃಷ್ಠಕರವಾಗಿದೆ.

ಮೈಸೂರು ಜಿಲ್ಲೆಯಲ್ಲಿ ೮ ಹತ್ಯೆಗಳು ನಡೆದವು ಅದರಲ್ಲಿ ೬ ಹತ್ಯೆಗಳು ಧಾರ್ಮಿಕ ಕಾರಣಗಳು ಹೊಂದಿದ್ದವು. ಮುಸ್ಲಿಂ ಯುವತಿಯ ಜೊತೆ ಆತ್ಮಿಯತೆ ಬೆಳಸಿದ ಕಾರಣಕ್ಕೆ ತ್ಯಾಗರಾಜ ಪಿಳೈ ಹತ್ಯೆಯಾಯಿತು. ಈ ಹತ್ಯೆಯ ಆರೋಪಿಗಳು ಎಲ್ಲರೂ ಬಿಡುಗಡೆಯಾಗಿದ್ದಾರೆ.

2008 ರಲ್ಲಿ ತನ್ನ ಸ್ನೇಹಿತನ ಜೊತೆ ದ್ವಿಚಕ್ರವಾಹನದಲ್ಲಿ ಪ್ರಯಾಣ ಮಾಡುವಾಗ ಭಾಜಪ ನೇತಾರ ಆನಂದ ಪೈ ಇವನ ಮೇಲೆ ಹಲ್ಲೆಯಾಯಿತು ಮತ್ತು ಸ್ನೇಹಿತ ವಾಹನ ಚಾಲಕ ರಮೇಶ ಇವರ ಹತ್ಯೆಯಾಯಿತು.

2006 ರಲ್ಲಿ ಕ್ಯಾತಮಾರನಹಳ್ಳಿ ದಂಗೆ ನೆಪದಲ್ಲಿ ಭಾಜಪ ಯುವ ಮೋರ್ಚ ನೇತಾರ ವಿ. ಗಿರಿಧರ ಇವರ ಮೇಲೆ ಹಲ್ಲೆಯಾಯಿತು, ಆದರೆ ಕೂದಲೆಯ ಅಂತರದಿಂದ ಹತ್ಯೆಯ ಅಪಾಯದಿಂದ ಪಾರಾದರು.

2006 ರಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸ್ವಯಂ ಸೇವಕರಾದ ಹರಿಶ ಮತ್ತು ಅವನ ಸಹೊಧರ ಸತೀಶ ಮೇಲೆ ಹಲ್ಲೆ ನಡೆಯಿತು, ಅದರಲ್ಲಿ ಹರೀಶ ರವರ ಹತ್ಯೆಯಾಯಿತು. ಈ ಮೇಲಿನ ಯಾವುದೇ ಪ್ರಕರಣದಲ್ಲಿ ಪೋಲಿಸರು ಸೂಕ್ತ ತನಿಖೆಯನ್ನು ಮಾಡಲಿಲ್ಲ ಮತ್ತು ಪೋಲಿಸರು ತಮ್ಮ ಅನುಕೂಲಕ್ಕೆ ತಕ್ಕಂತೆ ವರದಿ ಸಲ್ಲಿಸಿದರು.

ಕೆ‌ಎಫ್‌ಡಿ ಕಾರ್ಯಕರ್ತರು ವಿಘ್ನೇಶ ಮತ್ತು ಸುಂದೀಂದ್ರ ಇಬ್ಬರು ವಿದ್ಯಾರ್ಥಿಗಳ ಅಪಹರಣ ಮಾಡಿ, ವಿಧ್ಯಾರ್ಥಿಗಳನ್ನು 5 ಕೋಟಿ ಹಣಕ್ಕಾಗಿ ಹತ್ಯೆ ಮಾಡಿದ ಪ್ರಕರಣದ ತನಿಖೆಯನ್ನು ಮಾಡುವಾಗ ಪಿಳೈ ಹತ್ಯೆ ಆರೋಪಿಗಳ ಸಿಕ್ಕಿಬಿಳುತ್ತಾರೆ. ಅದೇ ರೀತಿಯಲ್ಲಿ ಮೈಸೂರಿನ ಕೆ. ರಾಜುರವರ ಹತ್ಯೆಯ ತನಿಖೆಯನ್ನು ಮಾಡುವಾಗ ಉಳಿದ ಹತ್ಯೆಗಳ ಪ್ರಕರಣವನ್ನು ಪೋಲಿಸರು ಬೇದಿಸಿದ್ದಾರೆ.

ಪೋಲಿಸರು ಜಾಣತನದಿಂದ ಪ್ರಾರಂಭದಲ್ಲಿ ಕಾನೂನು ಬಾಹಿರ ತಡೆ ಕಾಯಿದೆಯನ್ನು ಕೆಲವು ಹತ್ಯೆಗಳ ಪ್ರಕರಣದಲ್ಲಿ ಹಾಕಿದರೂ ಸಹ, ಆರೋಪಿಗಳಿಗೆ ಜಾಮೀನು ಸಿಗಲು ಯಾವುದೇ ವಿರೋಧ ಮಾಡಲಿಲ್ಲ. ಈ ಕಾಯಿದೆಯ ಕಲಮುಗಳನ್ನು ಪೋಲಿಸರು ಯೋಗ್ಯ ರೀತಿಯಲ್ಲಿ ಉಪಯೋಗಿಸಿ ಆರೋಪಿಗಳಿಗೆ ಶಿಕ್ಷೆಯಾಗುವ ಹಾಗೆ ಪ್ರಯತ್ನ ಮಾಡಲಿಲಲ್ಲ.

ಆಶ್ಚರ್ಯಕರ ಸಂಗತಿಯೇನೆಂದರೆ ಆರೋಪ ಪತ್ರವನ್ನು ಸಲ್ಲಿಸುವಾಗ ಕಾನೂನು ಬಾಹಿರ ಕಾಯಿದೆಯನ್ನು ಪೋಲಿಸರು ತೆಗೆದರು. ಇದಲ್ಲದೇ ಹಣಕ್ಕಾಗಿ ಇಬ್ಬರು ವಿದ್ಯಾರ್ಥಿಗಳ ಹತ್ಯೆ ಪ್ರಕರಣದಲ್ಲಿ ಉಚ್ಚ ನ್ಯಾಯಾಲಯವರು ಜಾಮೀನು ನೀಡುವಾಗ ಪೋಲಿಸರಿಗೆ ಕಠಿಣ ಸೂಚನೆಯನ್ನು ನೀಡಿದೆ.

ಈ ರೀತಿ ಮೇಲಿನ ಸಂಘಟಿತ ಅಪರಾಧಿಗಳ ಗುಂಪು ಅನೇಕ ಹಿಂದೂ ನೇತಾರರ ಬರ್ಬರ ಹತ್ಯೆ, ವಿದ್ಯಾರ್ಥಿಗಳ ಅಪಹರಣ, ಸುಲಿಗೆ, ದಂಗೆ ಮುಂತಾದ ಪ್ರಕರಣದಲ್ಲಿ ಬಾಗಿಯಾಗಿದ್ದರೂ ಸಹ, ಇವರಿಗೆ ಜಾಮೀನು ನೀಡಲಾಗಿದೆ ಮತ್ತು ಕೆಲವರಿಗೆ ಬಿಡುಗಡೆಯಾಗಿದೆ. ನ್ಯಾಯಾಲಯ ಆರೋಪಿಗಳಿಗೆ ಜಾಮೀನು ನೀಡುವಾಗ ಸಕ್ಷಾದಾರಗಳ ಕೊರತೆಯ ಕಾರಣಗಳನ್ನು ಹೇಳುತ್ತಿದೆ. ಒಟ್ಟಾರೆ ಈ ಪ್ರಖರಣದಲ್ಲಿ ಪೋಲಿಸರು ಸರಿಯಾಗಿ ತನಿಖೆಯನ್ನು ಮಾಡಿಲ್ಲ.

ತನಿಖೆಯಲ್ಲಿ ಸವೋಚ್ಚ ನ್ಯಾಯಾಲಯದ ಮಾರ್ಗದರ್ಶಕ ಸೂತ್ರಗಳನ್ನು ಸರಿಯಾಗಿ ಅನುಷ್ಠಾನ ಮಾಡದ ತನಿಕಾ ಅಧಿಕಾರಿಗಳ ವಿರುದ್ಧ ತನಿಖೆಯಾಗಬೇಕು ಎಂದು ವಿನಂತಿಸಿ ಮಂಗಳೂರು ದಕ್ಷಿಣ ವಿಧಾನ ಸಭಾ ಕ್ಷೇತ್ರದ ಶಾಸಕರಾದ ವೇದವ್ಯಾಸ ಕಾಮತ್ ಇವರಿಗೆ ಮನವಿಯನ್ನು ಸಲ್ಲಿಸಲಾಯಿತು.

ಮನವಿ ನೀಡುವ ವೇಳೆ ಹಿಂದೂ ಜನಜಾಗೃತಿ ಸಮಿತಿಯ ದ.ಕ. ಜಿಲ್ಲಾ ಸಮನ್ವಯಕ ಚಂದ್ರ ಮೊಗೇರ, ಸಮಿತಿಯ ಪ್ರಮುಖರಾದ ಉಪೇಂದ್ರ ಆಚಾರ್ಯ, ಪ್ರಬಾಕರ ನಾಯ್ಕ್, ಉಮೇಶ ಆಚಾರ್ಯ, ಸೌ. ವನಿತಾ ಮೊಗೇರ, ರಾಜೇಶ್ ಮೊದಲಾದವರು ಉಪಸ್ಥಿತರಿದ್ದರು.

Comments are closed.