ಕರಾವಳಿ

ಇತಿಹಾಸ ಪ್ರಸಿದ್ಧ ಕದ್ರಿ ಶ್ರೀ ಮಂಜುನಾಥ ಸ್ವಾಮಿಗೆ ಬ್ರಹ್ಮಕಲಶಾಭಿಷೇಕ

Pinterest LinkedIn Tumblr

ಮಂಗಳೂರು, ಮೇ.09: ಇತಿಹಾಸ ಪ್ರಸಿದ್ಧ ಕದ್ರಿ ಶ್ರೀ ಮಂಜುನಾಥ ದೇವಳದಲ್ಲಿ ಇಂದು ಬೆಳಿಗ್ಗೆ ಬ್ರಹ್ಮಕಲಶಾಭಿಷೇಕವು ಬಹಳ ವಿಜೃಂಭಣೆಯಿಂದ ಜರಗಿತು ವೇದಮೂರ್ತಿ ಬ್ರ| ಶ್ರೀ ವಿಠಲದಾಸ್‌ತಂತ್ರಿಯವರು ವೈದಿಕ ವಿಧಿ ವಿಧಾನಗಳ ನೇತೃತ್ವ ವಹಿಸಿದ್ದರು.

ಕದ್ರಿ ಮಠಾಧಿಪತಿ ಶ್ರೀ ರಾಜಾ ನಿರ್ಮಲನಾಥ್ ಜಿ., ದೇವಳದ ವ್ಯವಸ್ಥಾಪನಾ ಸಮಿತಿ ಮತ್ತು ಬ್ರಹ್ಮಕಲಶೋತ್ಸವ ಸಮಿತಿಯ‌ಅಧ್ಯಕ್ಷ ಡಾ. ಎ. ಜನಾರ್ದನ ಶೆಟ್ಟಿ, ಗೌರವಾಧ್ಯಕ್ಷ, ವೇದವ್ಯಾಸ ಕಾಮತ್, ಕಾರ್ಯ ನಿರ್ವಹಣಾಧಿಕಾರಿ, ಡಾ. ನಿಂಗಯ್ಯ, ಪ್ರಚಾರ ಸಮಿತಿಯ‌ ಅಧ್ಯಕ್ಷ‌ ಎಸ್. ಪ್ರದೀಪ ಕುಮಾರ ಕಲ್ಕೂರ, ವ್ಯವಸ್ಥಾಪನಾ ಸಮಿತಿ ಸದಸ್ಯರಾದ ರಾಘವೇಂದ್ರ ಭಟ್, ರಂಜನ್‌ ಕುಮಾರ್ ಬಿ.ಎಸ್., ಶ್ರೀಮತಿ ಚಂದ್ರಕಲಾ ದೀಪಕ್, ಪುಷ್ಪಲತಾ ಶೆಟ್ಟಿ, ಹರಿನಾಥ ಜೋಗಿ, ದಿನೇಶ್‌ ದೇವಾಡಿಗ, ಸುರೇಶ್‌ ಕುಮಾರ್‌ ಕದ್ರಿ, ಮಾಜಿ ಮೇಯರ್‌ಗಳಾದ ಭಾಸ್ಕರ ಮೊಯ್ಲಿ ಶಶಿಧರ ಹೆಗ್ಡೆ, ಸಹಿತ ವಿವಿಧ ಸಮಿತಿಗಳ ಸಂಚಾಲಕರು, ಸದಸ್ಯರು ಹಾಗೂ ಭಕ್ತ ಸಮೂಹ ಈ ಸಂದರ್ಭ ಉಪಸ್ಥಿರಿದ್ದರು.

Comments are closed.