ಕರಾವಳಿ

ಸಾವಿರಾರು ಮಂದಿಗೆ ಆರ್ಥಿಕ ಸಂಕಷ್ಟ : ಲಾಕ್‌ಡೌನ್ ನಿಬಂಧಗಳನ್ನು ಸಡಿಲಿಸುವಂತೆ ಸಚಿವರಿಗೆ ಮನವಿ

Pinterest LinkedIn Tumblr

ಮಂಗಳೂರು : ವಾಹನ ವ್ಯಾಪಾರ, ಬಿಡಿಭಾಗಗಳ ವ್ಯಾಪಾರ ಮತ್ತು ಸರ್ವಿಸ್, ವಾಣಿಜ್ಯ ಸಂಸ್ಥೆಗಳು ಮತ್ತು ಎಲ್ಲಾ ಕೈಗಾರಿಕಾ ಚಟುವಟಿಕೆಗಳಿಗೆ ಲಾಕ್‌ಡೌನ್ ನಿಬಂಧಗಳನ್ನು ಸಡಿಲಿಸುವಂತೆ ರಾಜ್ಯ ಸರ್ಕಾರವನ್ನು ಕೋರಿ ದಕ್ಷಿಣ ಕನ್ನಡ ಆಟೋಮೊಬೈಲ್ ಮತ್ತು ಟೈರ್ ಡೀಲರ್ಸ್ ಅಸೋಸಿಯೇಷನ್ ಮಾನ್ಯ ಜಿಲ್ಲಾ ಉಸ್ತುವಾರಿ ಸಚಿವ ಶ್ರೀ ಕೋಟಾ ಶ್ರೀನಿವಾಸ್ ಪೂಜಾರಿ ಅವರಿಗೆ ಮನವಿ ಸಲ್ಲಿಸಿದೆ.

ಸಂಘದ ಅಧ್ಯಕ್ಷ ಶ್ರೀ ಕಸ್ತೂರಿ ಪ್ರಭಾಕರ್ ಪೈ, ಕಾರ್ಯದರ್ಶಿ ಶ್ರೀ ಕೆ.ವಿಲಾಸ್ ಕುಮಾರ್, ಖಜಾಂಚಿ ಶ್ರೀ ಮಾರೂರ್ ಶಶಿಧರ್ ಪೈ, ಕನರಾ ಚೇಂಬರ್ ಗೌರವ ಕಾರ್ಯದರ್ಶಿ ಶ್ರೀ ನಿಸ್ಸಾರ್ ಫಕೀರ್ ಮೊಹಮ್ಮದ್, ಶ್ರೀ ಗಣಪತಿ ಪೈ, ಶ್ರೀ ಸುಧೀರ್ ಪೈ ಮತ್ತು ಶ್ರೀ ಪ್ರಸಾದ್ ರಾಜ್ ಕಾಂಚನ್ ಒಳಗೊಂಡ ನಿಯೋಗವು ಮಂಗಳೂರಿನ ಜಿಲ್ಲಾ ಪಂಚಾಯತ್ ಕಚೇರಿಯಲ್ಲಿ ಸಚಿವರನ್ನು ಭೇಟಿಯಾಗಿ ಮನವಿಯನ್ನು ಸಲ್ಲಿಸಿತು.

ಮುಖ್ಯಮಂತ್ರಿ ಬಿ.ಎಸ್. ಯಡಿಯುರಪ್ಪ ಅವರನ್ನು ಉದ್ದೇಶಿಸಿ ಬರೆದ ಮನವಿ ಪತ್ರದಲ್ಲಿ, ಆಟೋಮೊಬೈಲ್ ವ್ಯಾಪಾರ ಮತ್ತು ಸೇವಾ ಕ್ಷೇತ್ರವು ಹಲವಾರು ಸಣ್ಣ ಮಾರಾಟಗಾರರು, ವರ್ಕ್‌ಶಾಪ್‌ಗಳು, ವಿತರಕರು ಮತ್ತು ಮಾರಾಟಗಾರರನ್ನು ಒಳಗೊಂಡಿದೆ.

ಲಾಕ್‌ಡೌನ್‌ನ ಕಳೆದ 40 ದಿನಗಳಿಂದ ವ್ಯಾಪಾರವನ್ನು ಮುಚ್ಚುವುದರಿಂದ ಸಾವಿರಾರು ಜನರನ್ನು ಉದ್ಯೋಗ ಒದಗಿಸುವ ಈ ಉದ್ಯಮವು ತೀವ್ರ ಆರ್ಥಿಕ ಸಂಕಷ್ಟಕ್ಕೆ ಒಳಗಾಗುತ್ತಿದೆ ಮತ್ತು ವ್ಯಾಪಾರ ಮಾಲೀಕರು ಹಣಕಾಸಿನ ಜವಾಬ್ದಾರಿಗಳನ್ನು ಪೂರೈಸಲು ಸಾಧ್ಯವಾಗುತ್ತಿಲ್ಲ.

ಇದಲ್ಲದೆ, ಸರಕು ಸಾಗಣೆ, ಆಂಬ್ಯುಲೆನ್ಸ್, ವೈದ್ಯರ ಮತ್ತು ಫ್ರಂಟ್‌ಲೈನ್ ಸೇವಾರ್ಥಿಗಳ ಸಾಗಣೆ ಮುಂತಾದ ಅಗತ್ಯ ಸೇವೆಗಳಿಗೆ ಆಟೋಮೊಬೈಲ್ ಕ್ಷೇತ್ರದ ಸೇವೆ ಅತ್ಯಗತ್ಯ. ಇದಕ್ಕೆ ಬಳಸುವ ವಾಹನಗಳ ರಿಪೇರಿ ಮತ್ತು ಸುರಕ್ಷತೆಗಾಗಿ ಬಿಡಿಭಾಗಗಳು ಮತ್ತು ನಿಯತಕಾಲಿಕ ಸರ್ವಿಸ್ ಅಗತ್ಯವಿರುತ್ತದೆ.

ಆದ್ದರಿಂದ, ದಕ್ಷಿಣ ಕನ್ನಡ ಆಟೋಮೊಬೈಲ್ ಮತ್ತು ಟೈರ್ ಡೀಲರ್ಸ್ ಅಸೋಸಿಯೇ?ನ್ ರಾಜ್ಯ ಸರ್ಕಾರ ಮತ್ತು ಜಿಲ್ಲಾಡಳಿತಕ್ಕೆ ಲಾಕ್‌ಡೌನ್ ನಿಬಂಧಗಳನ್ನು ಸಡಿಲಿಸುವಂತೆ ಮನವಿ ಮಾಡಿತು. 50% ಕಾರ್ಯಪಡೆ, ಕಡಿಮೆ ಕೆಲಸದ ಸಮಯ ಮತ್ತು ವಾರಾಂತ್ಯದ ಕರ್ಫ್ಯೂನಂತಹ ಕೋವಿಡ್ ಮಾರ್ಗಸೂಚಿಯಂತೆ ಆಟೋ ಸಂಸ್ಥೆಗಳು ಮತ್ತು ವರ್ಕ್‌ಶಾಪ್‌ಗಳು ಕಾರ್ಯನಿರ್ವಹಿಸಲು ಅವಕಾಶ ನೀಡುವಂತೆ ಸಂಘ ಕೇಳಿಕೊಂಡಿತು.

ಜಿಲ್ಲಾ ಉಸ್ತುವಾರಿ ಸಚಿವ ಶ್ರೀ ಕೋಟ ಶ್ರೀನಿವಾಸ್ ಪೂಜಾರಿ ಅವರು ಸಂಘ ಸಲ್ಲಿಸಿದ್ದ ಮನವಿಯನ್ನು ಸ್ವೀಕರಿಸಿದರು ಮತ್ತು ಪ್ರಸ್ತಾಪಕ್ಕೆ ಸೂಕ್ತ ಪರಿಗಣನೆ ನೀಡುವುದಾಗಿ ಭರವಸೆ ನೀಡಿದರು.

Comments are closed.