ಪ್ರಮುಖ ವರದಿಗಳು

ಪುನೀತ್ ಅವರದ್ದು ಸಾಯುವ ವಯಸ್ಸಲ್ಲ, ವಿಧಿ ಕ್ರೂರತೆ ಮೆರೆದಿದೆ: ಪ್ರಧಾನಿ ನರೇಂದ್ರ ಮೋದಿ ಸಂತಾಪ

Pinterest LinkedIn Tumblr

ನವದೆಹಲಿ: ಕನ್ನಡಿಗರಿಗೆ ಇಂದು ಕರಾಳ ದಿನ ಎಂದರೂ ತಪ್ಪಾಗಲಾರದು. ಚಂದನವನದ ಖ್ಯಾತ ನಟ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಬಾರದ ಲೋಕಕ್ಕೆ ಪಯಣಿಸಿದ್ದಾರೆ. ಅವರ ಸಾವಿನ ಹಿನ್ನೆಲೆ ಪ್ರಧಾನಿ ನರೇಂದ್ರ ಮೋದಿ ಸಂತಾಪ ಸೂಚಿಸಿದ್ದಾರೆ.

ವಿಧಿ ಇಂದು ಕ್ರೂರತೆ ಮೆರೆದಿದೆ. ಜೀವನದಲ್ಲಿ ಒಬ್ಬ ಸಮೃದ್ಧ ಮತ್ತು ಪ್ರತಿಭಾನ್ವಿತ ನಟನನ್ನು ಇಂದು ನಮ್ಮಿಂದ ಕಿತ್ತುಕೊಂಡಿದೆ ಎಂದು ಪ್ರಧಾನಿ ಹೇಳಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಅವರು, ಪುನೀತ್ ಅವರದ್ದು ಇದು ಸಾಯುವ ವಯಸ್ಸಾಗಿರಲಿಲ್ಲ. ಮುಂದಿನ ಜನಾಂಗ ಅವರ ನಟನೆ ಮತ್ತು ಅದ್ಭುತ ವ್ಯಕ್ತಿತ್ವ ಮೂಲಕ ನೆನಪು ಮಾಡಿಕೊಳ್ಳಲಿದೆ. ಅವರ ಕುಟುಂಬ ಸದಸ್ಯರಿಗೆ ಮತ್ತು ಅಭಿಮಾನಿಗಳಿಗೆ ಸಂತಾಪಗಳು.. ಓಂ ಶಾಂತಿ ಎಂದು ಬರೆದುಕೊಂಡಿದ್ದಾರೆ.

 

Comments are closed.