ಕರಾವಳಿ

ಬೀಜಾಡಿಯಲ್ಲಿ ಸಮುದ್ರ‌ ಪಾಲಾಗಿದ್ದ ತಿಪಟೂರು ಮೂಲದ ಯುವಕನ ಪತ್ತೆಗೆ ನಾಲ್ಕು ದಿನದಿಂದ ನಿರಂತರ ಶೋಧ

Pinterest LinkedIn Tumblr

ಕುಂದಾಪುರ: ತಾಲೂಕಿನ ಬೀಜಾಡಿಯಲ್ಲಿ ಕಡಲ ಅಲೆಗಳ ರಬಸಕ್ಕೆ ಸಿಕ್ಕು ತುಮಕೂರು ತಿಪಟೂರು‌ ಮೂಲದ ಟಿ.ಆರ್ ಯೋಗೀಶ್ (23) ಎನ್ನುವ ಯುವಕ ಕೊಚ್ಚಿಹೋದ ಘಟನೆ ಬುಧವಾರ ಸಂಜೆ ವೇಳೆ ನಡೆದಿದ್ದು ಶುಕ್ರವಾರ ಬೆಳಿಗ್ಗೆ ತ್ರಾಸಿ ಬಳಿಯ ಸಮುದ್ರದಿಂದ ಬಹಳಷ್ಟು ದೂರದಲ್ಲಿ ಮೃತದೇಹವೊಂದು ತೇಲುತ್ತಿರುವ ಬಗ್ಗೆ ಸ್ಥಳೀಯರು ನೀಡಿದ ಮಾಹಿತಿಯಂತೆ ಪೊಲೀಸರ ತಂಡ ಸ್ಥಳಕ್ಕೆ ತೆರಳಿತ್ತು‌.

ಬಳಿಕ ಈಜುಪಟುಗಳು, ಮೀನುಗಾರರಿದ್ದ ಐವರ ತಂಡ ದೋಣಿಯಲ್ಲಿ ತೆರಳಿ ಸಂಜೆಯವರೆಗೂ ಹುಡುಕಾಟ ನಡೆಸಿದರೂ ಯಾವುದೇ ಸುಳಿವು ಪತ್ತೆಯಾಗಿಲ್ಲ.

ಘಟನೆ ಹಿನ್ನೆಲೆ: ಕುಂದಾಪುರದ
ಬೀಜಾಡಿಯ ಸ್ನೇಹಿತನ ಮನೆಯಲ್ಲಿನ ವಿವಾಹ ಕಾರ್ಯಕ್ರಮಕ್ಕೆ ಬಂದಿದ್ದ ಯುವಕರಿಬ್ಬರು ಸಮುದ್ರ ವಿಹಾರಕ್ಕೆ ತೆರಳಿದ್ದ ವೇಳೆ ದುರ್ಘಟನೆ ನಡೆದಿತ್ತು. ಈತ‌ನೊಂದಿಗಿದ್ದ ಇನ್ನೋರ್ವ ಯುವಕ ಸಂದೀಪ್ ಎನ್ನುವಾತನನ್ನು ಸ್ಥಳೀಯರು ರಕ್ಷಣೆ ಮಾಡಿದ್ದಾರೆ.

ಗುರುವಾರ ‌ನಡೆಯಲಿದ್ದ ವಿವಾಹ ಕಾರ್ಯಕ್ರಮಕ್ಕೆ ಸ್ನೇಹಿತನ ಆಮಂತ್ರಣದಂತೆ ಯೋಗೀಶ್ ಹಾಗೂ ಸಂದೀಪ್ ತಿಪಟೂರಿನಿಂದ ಬೈಕಿನಲ್ಲಿ ಬೀಜಾಡಿಗೆ ಆಗಮಿಸಿದ್ದರು. ಸಂಜೆ ವೇಳೆ ಸಮುದ್ರದ ಬಳಿ ತೆರಳಿದ್ದು ನೀರಿಗಿಳಿದ ಯೋಗೀಶ್ ಅಲೆಗಳ ಅಬ್ಬರಕ್ಕೆ ಸಿಲುಕಿ ನೀರುಪಾಲಾಗಿದ್ದರು. ಆತನ ಸ್ನೇಹಿತನನ್ನು ಸ್ಥಳೀಯರು ಬಚಾವ್ ಮಾಡಿದ್ದರು. ಯೋಗೀಶ್ ಐಟಿಐ ವ್ಯಾಸಂಗ ಮಾಡುತ್ತಿದ್ದರು ಎನ್ನಲಾಗಿದೆ. ಬುಧವಾರ ಸಂಜೆಯಿಂದಲೇ ಕೊಚ್ಚಿಹೋದ ಯುವಕನ ಹುಡುಕಾಟ ಆರಂಭವಾಗಿದೆ.

Comments are closed.