ಕರಾವಳಿ

ಕುಂದಾಪುರದಲ್ಲಿ ನಿರ್ಮಾಣಗೊಳ್ಳಲಿರುವ ನೂತನ ಐಬಿ ಕಾಮಗಾರಿಗೆ ಭೂಮಿ ಪೂಜೆ

Pinterest LinkedIn Tumblr

ಕುಂದಾಪುರ: ಸ್ವಾತಂತ್ರ್ಯ ಪೂರ್ವ ಅಂದರೆ 1940ರಲ್ಲಿ ಸುಮಾರು 85 ವರ್ಷಗಳ ಹಿಂದೆ ಕುಂದಾಪುರದಲ್ಲಿ ವಿಶಿಷ್ಟ ಮಾದರಿಯಲ್ಲಿ ನಿರ್ಮಾಣಗೊಂಡಿದ್ದ ನಿರೀಕ್ಷಣಾ ಮಂದಿರ (ಐಬಿ) ಬಹುತೇಕ ಶಿಥೀಲಗೊಂಡಿದ್ದರಿಂದ ಅದನ್ನು ಕೆಡವಿ ಬಹುಕಾಲದ ಬೇಡಿಕೆಯಂತೆ ಹೆಚ್ಚು ಕೊಠಡಿಗಳ ನೂತನ ಐಬಿ ನಿರ್ಮಾಣಕ್ಕೆ ಯೋಜನೆ ಸಿದ್ದಗೊಂಡಿದ್ದು ಕಾಮಗಾರಿಗೆ ಭೂಮಿ ಪೂಜೆ ಗುರುವಾರ ನಡೆಯಿತು. ಈ ಸಂದರ್ಭ ಐಬಿ ಕಾಮಗಾರಿ ಗುತ್ತಿಗೆ ಪಡೆದ ಪಿಡಬ್ಲ್ಯೂಡಿ ಗುತ್ತಿಗೆದಾರ ಸುಧೀರ್ ಕುಮಾರ್ ಶೆಟ್ಟಿ ಮಾರ್ಕೋಡು, ಮುಖಂಡರಾದ ಭಾಸ್ಕರ್ ಬಿಲ್ಲವ‌ ಮೊದಲಾದವರಿದ್ದರು.

ಕುಂದಾಪುರ ತಾಲೂಕು ಕೇಂದ್ರದಲ್ಲಿ ಪಂಚಾಗಂಗಾವಳಿ ನದಿ ತೀರದ ಅನತಿ ದೂರದಲ್ಲಿ 1940ರಲ್ಲಿ ‌ನಿರ್ಮಿಸಿದ್ದ ಐಬಿಯನ್ನು ಕಳೆದ 20-25 ವರ್ಷಗಳ ಹಿಂದೆ ಮಾರ್ಪಾಟುಗೊಳಿಸಲಾಗಿದ್ದು ಕೆಲವಷ್ಟು ವರ್ಷಗಳಿಂದ ಶಿಥೀಲಗೊಂಡಿತ್ತು. ಅಲ್ಲದೆ ಕುಂದಾಪುರ ತಾಲೂಕು ಕೇಂದ್ರಕ್ಕೆ ಹೆಚ್ಚು ಕೊಠಡಿಯುಳ್ಳ ವಿಶಾಲವಾದ ಪ್ರವಾಸಿ ಬಂಗಲೆಯ ಅಗತ್ಯವಿದ್ದು ಈ ಬಗ್ಗೆ ಬೇಡಿಕೆಯೂ ಇತ್ತು.

ಕುಂದಾಪುರದಲ್ಲಿ ಹೊಸ ನಿರೀಕ್ಷಣಾ ಮಂದಿರ ನಿರ್ಮಾಣಕ್ಕೆ 3 ಕೋಟಿ ಅನುದಾನ ಮಂಜೂರಾಗಿದ್ದು ಮೊದಲ ಹಂತದಲ್ಲಿ ನೆಲ ಅಂತಸ್ತು (3 ಸಾಧಾರಣ ರೂಂ ಹಾಗೂ ಒಂದು ವಿಐಪಿ ರೂಮ್) ಪೂರ್ಣಗೊಳಿಸಿ, ಎರಡನೇ ಅಂತಸ್ತಿನ ಸ್ಟ್ರಕ್ಚರ್ (ರಚನೆ) ಸಿದ್ದಪಡಿಸಲಾಗುತ್ತದೆ ಎಂದು ತಿಳಿದುಬಂದಿದೆ.

Comments are closed.