ಬೆಂಗಳೂರು: ಸಾಣೆಗುರವನಹಳ್ಳಿಯ (ಬಸವೇಶ್ವರ ನಗರ) ಸರ್ಕಾರಿ ಶಾಲೆ ಮಕ್ಕಳು ತ್ಯಾಜ್ಯ ಮತ್ತು ನವೀಕರಿಸಿದ ಕಾಗದದಲ್ಲಿ ಹೊಸ ವರ್ಷದ ಶುಭಾಶಯ ಪತ್ರಗಳನ್ನು ತಯಾರಿಸಿ ರಸ್ತೆಯಲ್ಲಿ ಕಸ ಎಸೆಯುವವರಿಗೆ ಉಡುಗೊರೆ ನೀಡಿದ್ದಾರೆ.
ಕಳಿಂಗ ಇನ್ಸ್ಟಿಟ್ಯೂಟ್ ಆಫ್ ಇಂಡಸ್ಟ್ರಿಯಲ್ ಟೆಕ್ನಾಲಜಿ(ಕೆಐಐಟಿ) ಯೂನಿವರ್ಸಿಟಿ ಮತ್ತು ಕಳಿಂಗ ಇನ್ಸ್ಟಿಟ್ಯೂಟ್ ಆಫ್ ಸೋಷಿಯಲ್ ಸೈನ್ಸಸ್(ಕೆಐಎಸ್ಎಸ್) ಸಂಸ್ಥಾಪಕ ಡಾ. ಅಚ್ಯುತ ಸಮಂತ ಅವರ ಮಾರ್ಗದರ್ಶನದಲ್ಲಿ ರೂಪಿತಗೊಂಡಿರುವ ತಂಡ ಶಾಲೆಗಳಿಗೆ ‘ಆರ್ಟ್ ಆಫ್ ಗಿವಿಂಗ್’ ಎಂಬ ಯೋಜನೆಯಲ್ಲಿ ಮಕ್ಕಳಿಗೆ ಈ ಉಡುಗೊರೆ ತಯಾರಿಸುವ ಕುರಿತು ತರಬೇತಿ ನೀಡಿದ್ದಾರೆ.
ಶಾಲಾ ವಿದ್ಯಾರ್ಥಿಗಳು ರಸ್ತೆಯಲ್ಲಿ ಎಸೆದ ತ್ಯಾಜ್ಯವನ್ನು ತೆಗೆದುಕೊಂಡು ಅದಕ್ಕೆ ಉಡುಗೊರೆ ರೂಪ ನೀಡಿದ್ದಾರೆ. ಕೆಐಎಸ್ಎಸ್ ತಂಡದ ಸದಸ್ಯೆ ಜಯಲಕ್ಷ್ಮೀ ಈ ಬಗ್ಗೆ ಮಾಹಿತಿ ನೀಡಿ, ಇಂದು ವಿದ್ಯಾರ್ಥಿಗಳಿಗೆ ಪಠದ ಜತೆಗೆ ಕೌಶಲ್ಯದ ಶಿಕ್ಷಣವನ್ನು ನೀಡುವ ಅಗತ್ಯವಿದೆ. ಹಾಗಾಗಿ ಕೆಐಎಸ್ಎಸ್ ಅಧೀನದಲ್ಲಿ ನಮ್ಮ ತಂಡ ಶಾಲೆಗಳಿಗೆ ಭೇಟಿ ಕೌಶಲ್ಯ ಭರಿತ ಶಿಕ್ಷಣ ನೀಡುತ್ತಿದೆ. ಇದು ಮುದೊಂದು ದಿನ ಉದ್ಯೋಗದ ದಾರಿಯೂ ಆಗಬಹುದು ಎಂದರು.