ಉಡುಪಿ: ಮನೆ ಕಳ್ಳತನ ಪ್ರಕರಣಗಳಲ್ಲಿ ಆರೋಪಿಗಳಾದ ಇಬ್ಬರು ಬಾವಲಿ ರಕ್ತ ಕುಡಿಯುವ ಖತರ್ನಕ್ ಚೋರರನ್ನು ಕಾರಾವರ ಪೊಳೀಸರು ಇತ್ತೀಚೆಗೆ ಬಂಧಿಸಿದ್ದು ಅವರಿಂದ ಉಡುಪಿಯ ವ್ಯಾಪ್ತಿಯಲ್ಲಾದ ಕಳ್ಳತನದ ಪ್ರಕರಣಗಳನ್ನು ಪತ್ತೆ ಹಚ್ಚಿದ್ದಾರೆ.
ಕಾರವಾರ ನಿವಾಸಿಗಳಾದ ಮಂಜುನಾಥ ಅಲಿಯಾಸ್ ಮಂಜು ಬಳೆಗಾರ್ (31) ಮತ್ತು ಮಂಜು ಅಲಿಯಾಸ್ ಮಂಜುನಾಥ (22 )ಈ ನಟೋರಿಯಸ್ ಖದೀಮರು.
ಹ್ಯಾಟ್ಸಪ್ ಪೊಲೀಸ್: ಉಡುಪಿ ನಗರ ಠಾಣಾ ಸರಹದ್ದು, ಮಲ್ಪೆ ಠಾಣಾ ಸರಹದ್ದು ಹಾಗೂ ಮಣಿಪಾಲ ಪೊಲೀಸು ಠಾಣೆಯ ಸರಹದ್ದಿನಲ್ಲಿ ಕಳ್ಳತನ ಮಾಡಿರುವ 10 ಮನೆಗಳನ್ನು ಈ ಚೋರರು ತೋರಿಸಿಕೊಟ್ಟಿದ್ದಲ್ಲದೇ ತಾವು ಚಿನ್ನಾಭರಣವನ್ನು ಮಾರಾಟ ಮಾಡಿರುವ ಉಡುಪಿಯ ಎರಡು ಜುವೆಲ್ಲರಿ ಅಂಗಡಿಗಳನ್ನು ತೋರಿಸಿಕೊಟ್ಟಂತೆ 10 ಪ್ರಕರಣಗಳನ್ನು ಬೇದಿಸಿ ಆರೋಪಿಗಳು ಕಳ್ಳತನ ಮಾಡಿ ಮಾರಾಟ ಮಾಡಿರುವ 13,70,000/- ರೂಪಾಯಿ ಮೌಲ್ಯದ ಚಿನ್ನ ಹಾಗೂ ಬೆಳ್ಳಿಯ ಆಭರಣಗಳನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ.
ಘಟನೆ ವಿವರ: ಕಾರವಾರ ಮತ್ತು ಉಡುಪಿ,ಮಣಿಪಾಲ ಮತ್ತು ಮಲ್ಪೆ ಠಾಣಾ ಸರಹದ್ದಿನಲ್ಲಿ ಮನೆಗಳ್ಳತನ ನಡೆಸಿದವರನ್ನು ಕಾರಾವಾರ ಪೊಲೀಸರು ತಿಂಗಳ ಹಿಂದೆ ಅರೆಸ್ಟ್ ಅವರು ಸ್ವಾ ಇಚ್ಚಾ ಹೇಳಿಕೆಯಲ್ಲಿ ಉಡುಪಿ ಪರಿಸರದಲ್ಲಿ ಕಳ್ಳತನ ಮಾಡಿರುವ ಬಗ್ಗೆ ಒಪ್ಪಿಕೊಂಡಿರುವ ಬಗ್ಗೆ ಕಾರವಾರ ಪೊಲೀಸರು ಮಾಹಿತಿಯನ್ನು ಉಡುಪಿ ಪೊಲೀಸರಿಗೆ ನೀಡಿದ್ದರು. ಇದರಂತೆಯೇ ಪೊಲೀಸ್ ಅಧೀಕ್ಷಕ ರಾಜೇಂದ್ರ ಪ್ರಸಾದ್ ಅವರ ನಿರ್ದೇಶನದಂತೆ, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಸಂತೋಷ್ ಕುಮಾರ್ ಹಾಗೂ ಉಡುಪಿ ಉಪ ವಿಭಾಗ ಪೊಲೀಸ್ ಉಪಾಧೀಕ್ಷಕ ಪ್ರಭುದೇವ ಮಾನೆ ಅವರ ಮಾರ್ಗದರ್ಶನದಲ್ಲಿ ಉಡುಪಿ ವೃತ್ತ ನಿರೀಕ್ಷ ಶ್ರೀಕಾಂತ್.ಕೆ ರವರು ಈ ಖತರ್ನಾಕ್ ಇಬ್ಬರು ಆರೋಪಿತರನ್ನು ಬಾಡಿ ವಾರಂಟ್ ಮೂಲಕ ಕಾರವಾರ ಕಾರಗ್ರೃಹದಿಂದ ಮಾನ್ಯ ಉಡುಪಿ ನ್ಯಾಯಾಲಯಕ್ಕೆ ಹಾಜರು ಪಡಿಸಿ ನ್ಯಾಯಾಲಯದಿಂದ ನ. 10 ರಂದು ಪೊಲೀಸು ಕಸ್ಟಡಿಗೆ ಪಡೆದುಕೊಂಡು ಇಬ್ಬರು ಆರೋಪಿತರನ್ನು ವಿಚಾರಣೆಗೊಳಪಡಿಸಿದಾಗ ಆರೋಪಿಗಳು ಉಡುಪಿ ವ್ಯಾಪ್ತಿಯಲ್ಲಿನ ಎಲ್ಲ ತಮ್ಮ ‘ಕೈಚಳಕ’ವನ್ನು ಬಾಯ್ಬಿಟ್ಟಿದ್ದಾರೆ.
ಈ ಕಾರ್ಯಾಚರಣೆಯಲ್ಲಿ ಉಡುಪಿ ನಗರ ಠಾಣೆಯ ಪೊಲೀಸ್ ಇನ್ಸಪೆಕ್ಟರ್ ಗೋಪಾಲ್ ನಾಯ್ಕ್, ಪಿ.ಎಸ್.ಐಗಳಾದ ಮಧು.ಟಿ.ಎಸ್., ಅಪರಾಧ ವಿಭಾಗದ ಪಿ.ಎಸ್.ಐ ರಾಜ್ ಗೋಪಾಲ್,ಮಲ್ಪೆ ಪಿ.ಎಸ್.ಐ ರವಿ ಕುಮಾರ್ ಎ.ಎಸ್.ಐ ಪ್ರಕಾಶ್ ಸಿಬ್ಬಂದಿಯವರಾದ ಗೋಪಾಲ ಕೃಷ್ಣ, ಪ್ರಕಾಶ್, ಯೋಗೀಶ್.ಎನ್. ಚಂದ್ರ ಶೆಟ್ಟಿ ಮೋಹನ ಕೊತ್ವಾಲ್, ಸುಧಾಕರ ಭಂಡಾರಿ, ಉಮೇಶ್ ಮೂಲ್ಯ,ಥೋಮ್ಸನ್, ನಾಗರಾಜ, ಪ್ರಸನ್ನ, ಶಂಕರ ಹಾಗೂ ಚಾಲಕರಾದ ಮಹಾಭಲೇಶ್ವರ ಇವರು ಸಹಕರಿಸಿರುತ್ತಾರೆ.