ಮಂಗಳೂರು : ತುಳು ನಾಡಿನ ಎಲ್ಲಾ ಸಾಂಪ್ರದಾಯಿಕ ಆಚರಣೆಗಳ ಮಾಹಿತಿಗಳನ್ನೊಳಗೊಂಡಿರುವ ಶ್ರೀ ಕದ್ರಿ ಮಂಜುನಾಥ ದೇವಳದಿಂದ ಮುದ್ರಿಸಲ್ಪಟ್ಟ 2015ನೇ ಇಸವಿಯ ಕ್ಯಾಲೆಂಡರನ್ನು ದೇವಳದ ಆಡಳಿತ ಮೊಕ್ತೇಸರ ಎ.ಜೆ. ಶೆಟ್ಟಿ ಬಿಡುಗಡೆಗೊಳಿಸಿದರು.
ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಹಾಗೂ ಕದ್ರಿ ದೇವಳದ ಧರ್ಮದರ್ಶಿಗಳಲ್ಲೊರ್ವರಾದ ಪ್ರದೀಪ ಕುಮಾರ ಕಲ್ಕೂರ ಹಾಗೂ ಇತರ ಸದಸ್ಯರಾದ ದೇವದಾಸ್, ನಿವೇದಿತಾ ಶೆಟ್ಟಿ, ಕ್ಷೇತ್ರದ ಆಡಳಿತಾಧಿಕಾರಿ ನಿಂಗಯ್ಯ, ದೇವಳದ ಪ್ರಧಾನ ಅರ್ಚಕ ರಾಮ ಅಡಿಗ ಮೊದಲಾದವರು ಈ ಸಂದರ್ಭ ಉಪಸ್ಥಿತರಿದ್ದರು.