ಕನ್ನಡ ವಾರ್ತೆಗಳು

20 ನಿಮಿಷ ಮಂಜುಗಡ್ಡೆ ಪೆಟ್ಟಿಗೆಯೊಳಗೆ ಇದ್ದು ಬೆರಗು ಮೂಡಿಸಿದ ಜಾದೂಗಾರ

Pinterest LinkedIn Tumblr

kadri_magic_show_1

ಮಂಗಳೂರು,ಫೆ.24 : ಉತ್ಸಾಹಿ ಯುವಕ ಸಾಗರ್ ಸುಮಾರು 20 ನಿಮಿಷಗಳ ವರೆಗೆ ಮಂಜುಗಡ್ಡೆ ತುಂಬಿದ ಗಾಜಿನ ಪೆಟ್ಟಿಗೆಯೊಳಗೆ ಬೋರಲು ಮಲಗಿದ್ದು, ಬಂಧಿಸಿದ ಸರಪಳಿ ಕಳಚಿ ಹೊರ ಬಂದು ಹೊಸ ಸಾಹಸ ಪ್ರದರ್ಶನವನ್ನು ಮಾಡಿದ್ದಾರೆ.

ಮಂಗಳಾ ಮ್ಯಾಜಿಕ್ ಸರ್ಕಲ್ ವತಿಯಿಂದ ವಿಶ್ವ ಜಾದೂಗಾರರ ದಿನಾಚರಣೆ ಅಂಗವಾಗಿ ಸೋಮವಾರ ಸಂಜೆ ಏರ್ಪಡಿಸಿದ್ದ ವಿವಿಧ ಜಾದೂ ಕಾರ್ಯಕ್ರಮಗಳ ಪೈಕಿ, ಸಾಗರ್ ಅವರು ಮಾಡಿದ ‘ಬರೀಡ್ ಅಲೈವ್’ ಸಾಹಸ ಅತ್ಯಂತ ಕುತೂಹಲಕಾರಿ ಮತ್ತು ಅಪಾಯಕಾರಿ.

kadri_magic_show_2 kadri_magic_show_3 kadri_magic_show_4 kadri_magic_show_5

ವೈದ್ಯರು ಹೇಳುವ ಪ್ರಕಾರ ಒಂದು ನಿಮಿಷಕ್ಕಿಂತ ಹೆಚ್ಚು ಹೊತ್ತು ಮಂಜುಗಡ್ಡೆಯ ಒಳಗೆ ಮಲಗಿದರೆ ವ್ಯಕ್ತಿಯ ಹೃದಯ ಬಡಿತ ಕಡಿಮೆಯಾಗುತ್ತದೆ. ರಕ್ತ ಹೆಪ್ಟುಗಟ್ಟಲಾರಂಭಿಸುತ್ತದೆ. ಮಿದುಳು ನಿಷ್ಕ್ರಿಯಗೊಳ್ಳಲಾರಂಭಿಸುತ್ತದೆ. ಅಂಥದ್ದರಲ್ಲಿ 20 ನಿಮಿಷಗಳ ವರೆಗೆ ಮಂಜುಗಡ್ಡೆ ರಾಶಿಯೊಳಗೆ ಅಪಾಯಕಾರಿ ಸಾಹಸ ಮೆರೆದು ಯಶಸ್ವಿಯಾಗಿದ್ದಾರೆ.

ಆರು ಅಡಿ ಉದ್ದದ ಗಾಜಿನ ಪೆಟ್ಟಿಗೆಯೊಳಗೆ ಅರ್ಧ ಭಾಗದಷ್ಟು ಐಸ್ ತುಂಬಿದ ಬಳಿಕ 30 ಅಡಿ ಉದ್ದದ ಸರಪಳಿಯಯಿಂದ ಸಾಗರ್ ಅವರನ್ನು ಬಂಧಿಸಿ 12 ಬೀಗಗಳನ್ನು ಹಾಕಿ ರಾತ್ರಿ 7.10ರ ವೇಳೆಗೆ ಮಲಗಿಸಲಾಯಿತು. ತಲೆಭಾಗದಲ್ಲಿ ಉಸಿರಾಟಕ್ಕೆ ಸ್ವಲ್ಪ ಜಾಗ ಬಿಟ್ಟು ಕಾಲಿಂದ ಕತ್ತಿನವರೆಗೆ ಐಸ್ ತುಂಬಿಸಿದ ಮೇಲೆ 7.15ರಿಂದ ಟೈಮ್ ಕೌಂಟ್ ಮಾಡಲಾಯಿತು. ಸುಮಾರು 7.30ರ ವೇಳೆಗೆ ಸಾಗರ್, ಬಂಧನ ಕಳಚಿ ಹೊರಬಂದರು.

kadri_magic_show_7 kadri_magic_show_11 kadri_magic_show_12kadri_magic_show_6a kadri_magic_show_8a kadri_magic_show_9a kadri_magic_show_10a

ಮುಖ್ಯ ಅತಿಥಿಯಾಗಿ ಆಗಮಿಸಿದ್ದ ವಿಜಯವಿಠಲನಾಥ ಶೆಟ್ಟಿ ಅವರು ಸಾಗರ್ ಅವರಿಗೆ ಕೈಗಳಿಗೆ ಕೋಳ ತೊಡಿಸಿದರು. ಹಿರಿಯ ಪತ್ರಕರ್ತ ಮನೋಹರ ಪ್ರಸಾದ್, ಚಿತ್ರನಟ ಅವಿನಾಶ್ ಶೆಟ್ಟಿ, ಕಾರ್ಪೊರೇಟರ್ ರೂಪ ಡಿ.ಬಂಗೇರ ಉಪಸ್ಥಿತರಿದ್ದರು.

ಮಂಗಳಾ ಆಸ್ಪತ್ರೆಯ ಆ್ಯಂಬುಲೆನ್ಸ್ , ವೈದ್ಯರ ತಂಡ ಚಿಕಿತ್ಸೆಗೆ ಸಜ್ಜಾಗಿ ನಿಂತಿತ್ತು. ಮಂಜುಪೆಟ್ಟಿಗೆಯಿಂದ ಹೊರ ಬಂದ ಬಳಿಕ ಥರಥರ ನಡುಗುತ್ತಿದ್ದ ಸಾಗರ್ ಅವರಿಗೆ ಶಾಖದ ವ್ಯವಸ್ಥೆ ಮಾಡಿದರು. ಸ್ವಲ್ಪ ಹೊತ್ತಿನ ಬಳಿಕ ಅವರ ದೇಹಸ್ಥಿತಿ ಸಮಸ್ಥಿತಿಗೆ ಬಂದಿರುವುದಾಗಿ ಘೋಷಿಸಿದರು.

Write A Comment