ಕನ್ನಡ ವಾರ್ತೆಗಳು

ಹಿಂದೂ ಸಮಾಜೋತ್ಸವಕ್ಕೆ ಬಿಗಿ ಬಂದೋಬಸ್ತ್ ಏರ್ಪಡು : ಜಿಲ್ಲಾ ಧಿಕಾರಿ ಎ. ಬಿ. ಇಬ್ರಾಹಿಂ

Pinterest LinkedIn Tumblr

dc_shathi_sabe_2

ಮಂಗಳೂರು,ಫೆ.28 : ಮಂಗಳೂರಿನಲ್ಲಿ ಮಾರ್ಚ್ 1ರಂದು ನಡೆಯಲಿರುವ ಹಿಂದೂ ಸಮಾಜೋತ್ಸವದ ಅಂಗವಾಗಿ ಜಿಲ್ಲಾದ್ಯಂತ ಬಿಗು ಬಂದೋಬಸ್ತ್ ಏರ್ಪಡಿಸಲಾಗಿದ್ದು, ಒಟ್ಟು 4000 ಪೊಲೀಸ್ ಸಿಬ್ಬಂದಿಗಳ ನಿಯೋಜನೆ ಮಾಡಲಾಗಿದೆ ಎಂದು ಜಿಲ್ಲಾ ಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಎ. ಬಿ. ಇಬ್ರಾಹಿಂ ತಿಳಿಸಿದರು. ಜಿಲ್ಲಾಧಿಕಾರಿ ಕಚೇರಿಯಲ್ಲಿ ಶುಕ್ರವಾರ ಹಿಂದೂ ಸಮಾಜೋತ್ಸವ ನಿಮಿತ್ತ ನಡೆದ ಶಾಂತಿ ಸಭೆಯಲ್ಲಿ ಬಂದೋಬಸ್ತ್ ಬಗ್ಗೆ ಮಾಹಿತಿ ನೀಡಿದರು.

ಹೀಗಿದೆ ಭದ್ರತೆ ವ್ಯವಸ್ಥೆ:
ಮಂಗಳೂರು ನಗರ ಪ್ರದೇಶದಲ್ಲಿ 23, ಗ್ರಾಮಾಂತರ ಪ್ರದೇಶದಲ್ಲಿ 13 ಹೀಗೆ ಒಟ್ಟು 36ಸೆಕ್ಟರ್ ಮ್ಯಾಜಿಸ್ಟ್ರೇಟ್‌ಗಳನ್ನು ನಿಯೋಜಿಸಲಾಗಿದೆ. ನಗರದಲ್ಲಿ 125 ಮತ್ತು ಗ್ರಾಮೀಣ ಪ್ರದೇಶದಲ್ಲಿ 70 ಒಟ್ಟು 195 ಅಸಿಸ್ಟೆಂಟ್ ಮ್ಯಾಜಿಸ್ಟ್ರೇಟ್‌ಗಳನ್ನು ನಿಯೋಜಿಸಲಾಗಿದೆ. ಇವರೆಲ್ಲರೂ ಮೊಬೈಲ್ ಕ್ಯಾಮೆರಾ ಬಳಸುವ ವ್ಯವಸ್ಥೆ ಮಾಡಲಾಗಿದೆ. 200ವೀಡಿಯೋ ಕ್ಯಾಮೆರಾ, 500 ಸಿಸಿ ಟಿವಿಗಳನ್ನು ಬಳಸಲಾಗುತ್ತದೆ. ಹೆಚ್ಚುವರಿಯಾಗಿ 75ವಾಹನಗಳನ್ನು ಭದ್ರತೆಗಾಗಿ ನಿಯೋಜಿಸಲಾಗಿದೆ. ಎಲ್ಲಾ ಧಾರ್ಮಿಕ ಕೇಂದ್ರಗಳಲ್ಲಿ ಸಿಸಿ ಕ್ಯಾಮೆರಾಗಳನ್ನು ಅಳವಡಿಸುವಂತೆ ಹಾಗೂ ರಾತ್ರಿ ವೇಳೆ ಬೆಳಕು ಅಳವಡಿಸುವಂತೆ ಸೂಚಿಸಲಾಗಿದೆ. 30ಕೆಸ್‌ಆರ್ ಪಿ ಪ್ಲಾಟೂನ್ಸ್, 10ಡಿಎಆರ್ ಪ್ಲಾಟೂನ್ಸ್, 2ಆರ್‌ಎಎಫ್ ಕಂಪನಿ ನಿಯೋಜಿಸಲಾಗಿದೆ . ಮದ್ಯ ನಿಷೇಧ: ಜಿಲ್ಲೆಯಲ್ಲಿ ಮಾರ್ಚ್ 1ರ ಬೆಳಗ್ಗೆ 6ಗಂಟೆಯಿಂದ ಮಾರ್ಚ್ 2ರ ಬೆಳಗ್ಗೆ 6ಗಂಟೆ ವರೆಗೆ ಮದ್ಯ ಮಾರಾಟ ನಿಷೇಧಿಸಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ. ಸೆಕ್ಷನ್ 144 : ಈಗಾಗಲೇ ಗಲಭೆ ನಡೆದ ಪ್ರದೇಶಗಳಾದ ಬಜ್ಪೆ, ಸುರತ್ಕಲ್, ಕುಳಾಯಿ, ಉಳಾಯಿಬೆಟ್ಟು, ಕರಾಯ, ದೇರಳಕಟ್ಟೆ ಮುಂತಾದ ಪ್ರದೇಶಗಳಲ್ಲಿ ಈಗಾಗಲೇ ಸೆಕ್ಷನ್ 144 ಜಾರಿ ಮಾಡಲಾಗಿದೆ.

5 ನಿಮಿಷದಲ್ಲಿ ಆಗಮನ: ಯಾವುದೇ ಪ್ರದೇಶದಲ್ಲಿ ಯಾವುದೇ ಗಲಭೆ ನಡೆದಾಗ ಆ ಸ್ಥಳಕ್ಕೆ 5ರಿಂದ 10 ನಿಮಿಷದೊಳಗೆ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿ ತಲುಪುವ ರೀತಿಯಲ್ಲಿ ವ್ಯವಸ್ಥೆ ಮಾಡಲಾಗಿದೆ. ತಲಪಾಡಿ ಸೇರಿದಂತೆ ಎಲ್ಲಾ ಗಡಿ ಪ್ರದೇಶದಲ್ಲಿ ವಿಶೇಷ ನಿಗಾ, ವಾಹನಗಳ ಚೆಕ್‌ಪೋಸ್ಟ್‌ಗಳನ್ನು ಮಾಡಲಾಗಿದೆ. ಸುಸಜ್ಜಿತ ಕಂಟ್ರೋಲ್ ರೂಂ ವ್ಯವಸ್ಥೆ ಇದೆ. ಗ್ರಾಮಾಂತರ ಪ್ರದೇಶದಲ್ಲಿ 27 ಚೆಕ್ ಪೋಸ್ಟ್‌ಗಳನ್ನು ಅಳವಡಿಸಲಾಗಿದೆ ಎಂದು ಪೊಲೀಸ್ ಕಮಿಷನರ್ ಎಸ್. ಮುರುಗನ್ ಹಾಗೂ ಎಸ್ಪಿ ಡಾ. ಶರಣಪ್ಪ ತಿಳಿಸಿದರು.

Write A Comment